


2 ಎಕರೆ ಅಡಕೆ ತೋಟಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಮಾರು 5 ರಿಂದ 6 ಲಕ್ಷ ರೂ. ಹಾನಿಯುಂಟಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಬನವಾಸಿ ಕಂತ್ರಾಜಿ ಗ್ರಾಮದಲ್ಲಿ ನಡೆದಿದೆ.

ಶಿರಸಿ: ಆಕಸ್ಮಿಕ ಬೆಂಕಿ ತಗುಲಿ ಅಂದಾಜು 2 ಎಕರೆ ಅಡಕೆ ತೋಟ ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ ಕಂತ್ರಾಜಿ ಗ್ರಾಮದಲ್ಲಿ ನಡೆದಿದೆ. ಘಟನೆಯಿಂದಾಗಿ ಸುಮಾರು 5 ರಿಂದ 6 ಲಕ್ಷ ರೂ. ಹಾನಿಯುಂಟಾಗಿದೆ.
ಗುಡ್ನಾಪುರ ಪಂಚಾಯತ್ ವ್ಯಾಪ್ತಿಯ ಕಂತ್ರಾಜಿ ಗ್ರಾಮದಲ್ಲಿರುವ ರೇಣುಕಾ ಬಸವಣ್ಣಿ ಮಡಿವಾಳ ಎಂಬುವರು ಸೊಸೈಟಿ ಸೇರಿದಂತೆ ಅನೇಕ ಕಡೆ ಸಾಲ ಮಾಡಿಕೊಂಡು ಕಳೆದ 4 ವರ್ಷಗಳ ಹಿಂದಷ್ಟೇ ತೋಟ ಹಾಕಿದ್ದರು. ಇದೀಗ ಬೆಂಕಿಗೆ ಅಡಕೆ ಸಸಿಗಳು ಸುಟ್ಟು ಕರಕಲಾಗಿದ್ದು, ಮುಂದೆ ಏನು ಮಾಡಬೇಕು ಅಂತ ತೋಚದೇ ರೈತ ಕಂಗಾಲಾಗಿದ್ದಾನೆ.
ಸುಟ್ಟು ಕರಕಲಾದ 2 ಎಕರೆ ಅಡಿಕೆ ತೋಟ
2 ಎಕರೆಯಲ್ಲಿದ್ದ 1,300 ಅಡಕೆ ಗಿಡಗಳಿಗೆ ಬೆಂಕಿ ತಗುಲಿದ್ದು, ನೀರಾವರಿ ವ್ಯವಸ್ಥೆಗಾಗಿ ಹಾಕಲಾಗಿದ್ದ ಪೈಪ್ಗಳು ಸಹ ಸುಟ್ಟು ಹೋಗಿ, 1 ಲಕ್ಷ ಹೆಚ್ಚುವರಿ ಹಾನಿಯಾಗಿದೆ. ರಸ್ತೆ ಬದಿಯೇ ತೋಟವಿದ್ದು, ಯಾರೋ ದಾರಿ ಹೋಕರು ಬೆಂಕಿ ಹಾಕಿರುವ ಸಾಧ್ಯತೆ ಇದೆ. ಈ ಹಿನ್ನೆಲೆ ಸೂಕ್ತ ತನಿಖೆ ನಡೆಸಿ, ಪರಿಹಾರ ಒದಗಿಸಬೇಕು ಎಂದು ಸರ್ಕಾರಕ್ಕೆ ರೈತ ಮನವಿ ಮಾಡಿದ್ದಾರೆ. (etbk)
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
