ನಿತ್ಯ ಪರಿಸರ ದಿನ ಆಚರಿಸುವ ವಡ್ನಗದ್ದೆ ಗಣಪತಿ

ಇಂದು ವಿಶ್ವ ಪರಿಸರ ದಿನ ಪರಿಸರ,ಅರಣ್ಯ ರಕ್ಷಣೆ ಬಗ್ಗೆ ಇಂದು ವ್ಯಕ್ತವಾಗುವ ಕಾಳಜಿ ಉಳಿದ ದಿಗಳಲ್ಲಿಅಪರೂಪ. ಆದರೆ ನೀವು ಇಲ್ಲೊಬ್ಬ ಅಪರೂಪದ ವ್ಯಕ್ತಿಯ ಬಗ್ಗೆ ಓದುತಿದ್ದೀರಿ ಇವರಿಗೆ ನಿತ್ಯವೂ ಪರಿಸರ ದಿನ. ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ವಡ್ನಗದ್ದೆಯ  ಗಣಪತಿ ಹೆಗಡೆ ವೃತ್ತಿಯಿಂದ ವಿದ್ಯುತ್‌ ಸಂಬಂಧಿ ಕೆಲಸ ಮಾಡುವ ಕೃಷಿಕ ಆದರೆ ಇವರ ಸಮಯ ಹೆಚ್ಚು ಬಳಕೆಯಾಗುವುದು ಪರಿಸರ ಸಂರಕ್ಷಣೆಗೆ.


ಕಳೆದ ಇಪ್ಪತ್ತಕ್ಕೂ ಹೆಚ್ಚು ವರ್ಷಗಳಿಂದ ಕಾಡಿನ ಬೀಜ ಬಿತ್ತುವ ಕೆಲಸ ಮಾಡುವ ಇವರು ಈ ವರೆಗೆ ಲಕ್ಷಾಂತರ ಬೀಜಗಳನ್ನು ಭೂಮಿಯಲ್ಲಿ ನೆಟ್ಟು ಸಾಕಿ,ಸಲಹುತಿದ್ದಾರೆ. ಹಾಗೆಂದು ಇವರು ಬಿತ್ತಿದ ಬೀಜಗಳು ಇವರ ಸ್ವಂತ ಆಸ್ತಿ-ಜಮೀನಿನಲ್ಲಿಲ್ಲ ಯಾಕೆಂದರೆ ಇವರು ಕಾಡಿನಲ್ಲಿ ಅಪರೂಪದ ಕಾಡು ಬೀಜಗಳನ್ನು ಸಂಗ್ರಹಿಸಿ ಅವುಗಳಿಗೆ ಅಗತ್ಯ ಸಂಸ್ಕಾರ ನೀಡಿ ಕಾಡಿನಲ್ಲಿ ಬಿತ್ತುತ್ತಾರೆ.
ಕಳೆದ ೨೦ ವರ್ಷಗಳಿಂದ ಇದನ್ನು ಹವ್ಯಾಸವಾಗಿಸಿಕೊಂಡಿರುವ ಗಣಪತಿ ಹೆಗಡೆ ಕಾಡಿನ ಮತ್ತಿ, ಆಲ, ಅಂಜೂರ, ನೇರಳೆ ಜೊತೆಗೆ ವಿನಾಶದ ಅಂಚಿನಲ್ಲಿರುವ ಸಸ್ಯಪ್ರಭೇದಗಳನ್ನು ರಕ್ಷಿಸುತಿದ್ದಾರೆ. ಸಾರ್ವಜನಿಕರು ಅರಣ್ಯ ಇಲಾಖೆಯ ನೆರವಿನೊಂದಿಗೆ ಬೀಜಬಿತ್ತನೆ, ಸಸಿ ವಿತರಣೆ ಮಾಡುವ ಹವ್ಯಾಸದ ಗಣಪತಿ ಹೆಗಡೆ ಪ್ರತಿವರ್ಷ ವಿಶ್ವಪರಿಸರ ದಿನವನ್ನು ಆಚರಿಸಿ ಬೀಜಬಿತ್ತನೆ ಮಾಡಿ ಸಾರ್ವಜನಿಕರಿಗೆ ಗಿಡ ವಿತರಿಸುತ್ತಾರೆ.


 ಅಪರೂಪದ ಮರಗಳ ಕಷಿ ಗಿಡ ಮಾಡುವ ಅಭ್ಯಾಸದ ಇವರು ಅನೇಕ ಜಾತಿಯ ಕಷಿಗಿಡಗಳನ್ನು ಮಾಡಿ ವಿತರಿಸುತ್ತಾರೆ. ಕೋಲಾರ, ಬೆಂಗಳೂರು, ಚಿಂತಾಮಣಿ ಕಡೆ ಬೆಳೆಯುವ ದೊಡ್ಡ ನೇರಳೆ ಹಣ್ಣುಗಳನ್ನು ತಂದು ಸಸಿ ಬೆಳೆಸಿರುವ ಗಣಪತಿ ಅವುಗಳನ್ನು ಸಾರ್ವಜನಿಕರು ಮತ್ತು ಅರಣ್ಯ ಇಲಾಖೆಗೆ ನೀಡಿದ್ದಾರೆ.ಅಪರೂಪದ ಬೀಜ,ಸಸ್ಯಗಳನ್ನು ಕಾಪಾಡಿ ಪೋಶಿಸುವ ಇವರ ಕೆಲಸದಿಂದಾಗಿ ಮಲೆನಾಡಿನ ಕಷಿಮಾವಿನ ಗಿಡಗಳು, ಬಯಲುಸೀಮೆಯ ನೇರಳೆ,ಕರಾವಳಿ ಮಲೆನಾಡಿನ ನೈಸರ್ಗಿಕ ಹಣ್ಣಿನ ಗಿಡಗಳನ್ನು ಸಂರಕ್ಷಿಸಿದ್ದಾರೆ.
ರುದ್ರಾಕ್ಷಿ,ಬರ್ಕಬಾಳೆ,ದೇವದಾರು,ಏಕನಾಯಕ ʼ ದಾರುಹರಿದ್ರ ಸೇರಿದಂತೆ ಅನೇಕ ವನಗಳನ್ನು  ಸೃಷ್ಟಿಸಿರುವ ಗಣಪತಿ ಬೇರೆ,ಬೇರೆ ಕಾಲ, ಪ್ರದೇಶ, ವಾತಾವರಣದಲ್ಲಿ ಹೂ,ಹಣ್ಣುಬಿಡುವ ಮರಗಳು ಉದುರಿಸುವ ಬೀಜ ಬೇರೆ ಬೇರೆ ಕಾಲದಲ್ಲಿ  ಸಸಿಗಳಾಗುತ್ತವೆ. ಕೆಲವು ಪ್ರಭೇದಗಳಿಗೆ ನೀರಿನಲ್ಲಿ ಕೊಳೆಸಿ ನಂತರ ಮೊಳಕೆ ತರಿಸಬೇಕಾಗುತ್ತದೆ. ನೆಲ್ಲಿ ಗಣಪೇಕಾಯಿ ಯಂಥ ಕೆಲವು ಸಸ್ಯಗಳಿಗೆ ಈ ಸಂಸ್ಕಾರವಿಲ್ಲದೆ  ಅವುಗಳ ಸಂತತಿ ಬೆಳೆಯುವುದಿಲ್ಲ. ಇಂಥ ಸಸ್ಯಗಳು ಈಗ ನಾಶವಾಗುತ್ತಿವೆ. ನಮ್ಮ ಬಾಲ್ಯದಲ್ಲಿ ಕಂಡು ತಂದು ತಿಂದ ಹಣ್ಣುಗಳುನಮ್ಮ ಮುಂದಿನ ಪೀಳಿಗೆಗೂ ಸಿಗಬೇಕೆಂಬ ಆಸೆಯಿಂದ ಈ ಕೆಲಸವನ್ನು ನಿಸ್ವಾರ್ಥದಿಂದ ಮಾಡುತ್ತೇನೆ ಎನ್ನುತ್ತಾರೆ.

https://samajamukhi.net/2022/05/27/shivrajkumar-memory-recall-sirsi/

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *