ಸಾಯಿ ಪಲ್ಲವಿಯವರ ವಿವಾದಾತ್ಮಕ ಸಂದರ್ಶನದ ಸಾರ

ತೆಲುಗಿನಲ್ಲಿ ಸಾಯಿ ಪಲ್ಲವಿಯವರು ಆಡಿದ ಮಾತಿನ ಯಾಥಾವತ್ ಸಾರ ಹೀಗಿದೆ :

( ತೆಲುಗಿನಿಂದ ಕನ್ನಡಕ್ಕೆ ಅನುವಾದ ಮಾಡಿರುವೆ)

ಪತ್ರಕರ್ತ : ನೀವು ಹೊಸ ಸಿನಿಮಾದಲ್ಲಿ ನಕ್ಸಲ್ ಆಗಿ ನಟಿಸುತ್ತಿದ್ದೀರಿ. ಆ ಗನ್ ಮತ್ತು ಸಮವಸ್ತ್ರ ಧರಿಸಿ ನಿಮಗೆ ಹೇಗೆ ಅನ್ನಿಸಿತು, ನೀವು ನಿಮ್ಮ ಬದುಕಿನಲ್ಲಿ ಹೀಗೆ ಓಡಾಡುತ್ತೀನಿ ಅಂತ ಭಾವಿಸಿದ್ದಿರಾ? ಅಥವಾ ಅವರ ಮೇಲೆ ನಿಮಗೇನಾದರೂ ಕರುಣೆ ಬಂದಿದೆಯೇ? ಎಂದು ಕೇಳುತ್ತಾರೆ. ಅದಕ್ಕೆ

ಸಾಯಿ ಪಲ್ಲವಿ : ನಕ್ಸಲ್ ಎನ್ನುವುದೂ ಕೂಡಾ ಒಂದು ಐಡಿಯಾಲಜಿ ಎಂದು ನಂಬಲಾಗಿದೆ ಅಲ್ಲವೇ ಸರ್, ಉದಾಹರಣೆಗೆ ನಮಗೆಲ್ಲರಿಗೂ ಶಾಂತಿಯ ತತ್ವವು ಒಂದು ಐಡಿಯಾಲಜಿ ಆಗಿರುವಂತೆ ಅವರಿಗೆ ಹಿಂಸಾ ಮಾರ್ಗವು ಒಂದು ಐಡಿಯಾಲಜಿ ಆಗಿದೆ. ಇಲ್ಲಿ ನಾನು ಹಿಂಸೆಯ ಐಡಿಯಾಲಜಿ ಎಂಬುದನ್ನು “ Wrong Form of Communication” ಎಂದು ಭಾವಿಸುತ್ತೇನೆ. ಆದರೆ ಅದನ್ನು ನಂಬಿಕೊಂಡವರು “ ಹಿಂಸಾ ಮಾರ್ಗದಿಂದಲೇ ನಾವು ಸಮಾಜದ ದುಷ್ಟ ಶಕ್ತಿಯನ್ನು ಎದುರಿಸುತ್ತೇವೆ, ಅದರಿಂದ ಜನರಿಗೆ ಮತ್ತು ನಮ್ಮ ಕುಟುಂಬಕ್ಕೆ ಒಳ್ಳೆಯದಾಗುತ್ತದೆ ಎಂದು ನಂಬುತ್ತಾರೆ” ಇದು ಸರಿಯಾ ತಪ್ಪಾ ಎಂದು ವಿಮರ್ಶಿಸುವುದು ನಂತರದ ಸಂಗತಿಯಾದರೆ, ಆ ದಾರಿಯನ್ನು ಅವರು ಹಿಡಿದಿರುವುದಕ್ಕೆ ಅವರದ್ದೇ ಕಾರಣವನ್ನು ನೀಡುತ್ತಾರೆ, ಎಂಬುದನ್ನು ನಾವು ಗಮನಿಸಬಹುದು. ಇದು ಈ ಹಿಂದೆ ನಡೆಯುತ್ತಿದ್ದ ಸಂಗತಿಯಾಗಿದ್ದು ಈಗ ಇದರ ಪ್ರಭಾವ ಇಲ್ಲ.

ಗಡಿಗಳ ವಿಭಜನೆಯ ಕಾರಣಕ್ಕೆ ಪಾಕಿಸ್ತಾನಿ ಸೈನಿಕರು ಭಾರತೀಯ ಸೈನಿಕರನ್ನು ಭಯೋತ್ಪಾದಕರು ಎಂದುಕೊಳ್ಳುತ್ತಾರೆ, ಕಾರಣ ಅವರು ನಮಗೆ ಹಾನಿ ಮಾಡುತ್ತಾರೆ, ಎಂಬ ಭಾವನೆ ಅವರಲ್ಲಿ ಇರುತ್ತದೆ. ಹಾಗೆಯೇ ಭಾರತೀಯ ಸೈನಿಕರೂ ಕೂಡಾ ಪಾಕಿಸ್ತಾನಿ ಸೈನಿಕರನ್ನು ಭಯೋತ್ಪಾದಕರು ಎಂದುಕೊಳ್ಳುತ್ತಾರೆ, ಕಾರಣ ಅವರು ನಮ್ಮನ್ನು ಹಾನಿ ಮಾಡಬಹುದು ಎಂಬ ಕಾರಣಕ್ಕೆ.

ಇಂತಹ ಆಲೋಚನಾ ಕ್ರಮವು ಜಾರಿಯಲ್ಲಿ ಇರುವಾಗ ಹಿಂಸೆ ಎಂಬುದನ್ನು ನಾನು ಹೇಗೆ ಅರ್ಥ ಮಾಡಿಕೊಳ್ಳಬೇಕು ಎಂದೇ ನನಗೆ ಅರ್ಥವಾಗುತ್ತಿಲ್ಲ, ಇದನ್ನು ಸರಿ ತಪ್ಪು ಎಂದು ಅರ್ಥ ಮಾಡಿಕೊಳ್ಳರಲು ನನಗೆ ಬಹಳ ಕಷ್ಟ ಎನಿಸುತ್ತದೆ.

ಪತ್ರಕರ್ತ : ನೀವು ಓದಿದವರಾಗಿರುವುದರಿಂದ ನಿಮ್ಮ ಓದಿನ ಸಂದರ್ಭದಲ್ಲಿ ನಕ್ಸಲ್ ಚಳುವಳಿಯನ್ನು ನೀವು ಗಮನಿಸಿರುತ್ತೀರಿ ಅಲ್ಲವೇ ?

ಸಾಯಿ ಪಲ್ಲವಿ : ಅಲ್ಲ ಸರ್, ನಾವು ಬೆಳೆಯೋ ವಾತಾವರಣ ಎಷ್ಟು ತಟಸ್ಥವಾಗಿತ್ತು ಎನ್ನುವುದು ನನಗೆ ಮುಖ್ಯ. ನಾನು ಈ ಎರಡೂ ಸಿದ್ಧಾಂತಗಳನ್ನು ತಟಸ್ಥವಾಗಿ ನಿಂತು ನೋಡುತ್ತಿದ್ದೇನೆ, ನೀವು ಹೇಳಿದಂತೆ ನಾನೇನಾದರೂ ಎಡ ಅಥವಾ ನೀವು ಹೇಳುವ ಬಲ ಸಿದ್ಧಾಂತದ ಕುಟುಂಬದಲ್ಲಿ ಬೆಳೆದಿದ್ದರೆ, ನಾನು ಯಾರೋ ಒಬ್ಬರ ಪರ ವಹಿಸುವ ಇಲ್ಲವೇ ಅವರಿಗೆ ಅನುಕೂಲಕರವಾಗಿರುವ ಸಾಧ್ಯತೆ ಇತ್ತೇನೋ? ಆದರೆ ನಾನು ಈ ಎರಡೂ ಸಿದ್ಧಾಂತದ ತಿಳುವಳಿಕೆ ಇರುವ ಕುಟುಂಬದಲ್ಲಿ ಬೆಳೆದಿಲ್ಲ. ನಮ್ಮ ಮನೆಯಲ್ಲಿ “ ಮನುಷ್ಯತ್ವ ಇಟ್ಟುಕೊಳ್ಳಬೇಕು, ಯಾರಿಗೂ ಯಾವ ರೀತಿಯಲ್ಲೂ ಹಾನಿ ಮಾಡಬಾರದು, ಯಾರು ತುಳಿತಕ್ಕೆ ಒಳಗಾಗುತ್ತಾರೋ, ಅಂತವರನ್ನು ಅವರು ದೊಡ್ಡವರಾ ಸಣ್ಣವರಾ ಎಂದು ನೋಡದೇ ಅವರ ರಕ್ಷಣೆ, ಮಾಡಬೇಕೆಂದು ಹೇಳಿಕೊಟ್ಟಿದ್ದಾರೆ (The Opressed Should Be protected). ಅಂತವರ ಕುಟುಂಬದ ವಾತಾವರಣದಲ್ಲೇ ನಾನು ಬೆಳೆದಿದ್ದೇನೆ.

ನಾನು ಈ ಎಡ ಮತ್ತು ಬಲ ಸಿದ್ಧಾಂತಗಳ ಬಗ್ಗೆ ಕೇಳಿದ್ದೇನೆ, ಆದರೆ ಅವರಲ್ಲಿ ಯಾರು ಸರಿ ಯಾರು ತಪ್ಪು ಎಂದು ಹೇಳುವುದಕ್ಕೆ ನನಗೆ ಸಾಧ್ಯವಿಲ್ಲ. ಏಕೆಂದರೆ ಇತ್ತೀಚೆಗೆ ಬಿಡುಗಡೆಯಾದ ಕಾಶ್ಮೀರಿ ಫೈಲ್ಸ್ ಎಂಬ ಸಿನಿಮಾದಲ್ಲಿ “ ಆ ಕಾಲದಲ್ಲಿ ಕಾಶ್ಮೀರಿ ಪಂಡಿತರನ್ನು ಹೇಗೆ ಹತ್ಯೆ ಮಾಡಿದ್ದಾರೆ ಎಂಬುದರ ಬಗ್ಗೆ ತೋರಿಸಿದ್ದಾರೆ, ಅಂತೆಯೇ ಇತ್ತೀಚೆಗೂ ಕೂಡಾ ಯಾರೋ ಒಂದಿಷ್ಟು ವಾಹನ ಒಂದರಲ್ಲಿ ಹಸುವನ್ನು ಸಾಗಿಸುತ್ತಿದ್ದು, ಆ ವಾಹನ ಚಾಲಕ ಮುಸ್ಲಿಂ ಎಂಬ ಕಾರಣಕ್ಕೆ ಅವನ ಮೇಲೆ ಹಲ್ಲೆ ಮಾಡಿ ಜೈ ಶ್ರೀರಾಮ್ ಜೈ ಶ್ರೀ ರಾಮ್ ಎಂದು ಹೇಳಿದರು. ಧಾರ್ಮಿಕ ವೈಷಮ್ಯದ ಆಧಾರದಲ್ಲಿ ನೋಡುವುದಾದರೆ ಹಿಂಸೆಯ ವಿಷಯದಲ್ಲಿ ಆಗ ಜರುಗಿದ್ದಕ್ಕೂ ಈಗ ಜರುಗಿದ್ದಕ್ಕೂ ವ್ಯತ್ಯಾಸ ಏನಿದೆ?

ಒಂದು ಧಾರ್ಮಿಕ ವಾತಾವರಣದಲ್ಲಿ ನಾವು ಉತ್ತಮರಾಗಿ ಇರಬೇಕು, ಯಾರ ಮೇಲೂ ಕೆಟ್ಟದಾಗಿ ಒತ್ತಡ ಹೇರಬಾರದು ಎಂದು ಹೇಳುವಾಗಲೂ ಕೂಡಾ ಹಾಗಿದ್ದುಕೊಂಡು ನೀವು ಎಡವೇ ಅಥವಾ ಬಲವೇ ಎಂದು ಕೇಳಿದರೆ “ನೀವು ಮನುಷ್ಯತ್ವ ಇಟ್ಟುಕೊಳ್ಳದೇ ಇದ್ದರೆ ನೀವು ಎಲ್ಲಿದ್ದರೂ ಕೂಡಾ ಅಲ್ಲಿ ನ್ಯಾಯ ಪ್ರಜ್ಞೆ ಇರುವುದಿಲ್ಲ, ಎಂದು ನಾನು ಹೇಳುತ್ತೇನೆ. ನೀವು ಯಾರನ್ನೂ ಹಿಂಸಿಸದ ಮತ್ತು ಯಾರ ಮೇಲೂ ಒತ್ತಡ ಹೇರದ ಮನುಷ್ಯತ್ವ ರೂಪಿಸಿಕೊಂಡರೆ ಆ ವಾತಾವರಣವೂ ತಿಳಿಯಾಗುತ್ತದೆ ಮತ್ತು ನೀವೂ ಸಹ ನಿಮಗೆ ಅರಿವಿಲ್ಲದೇ ಯಾರ ಗೋಜಿಗೂ ಹೋಗದೇ ಉತ್ತಮ ಮನುಷ್ಯರಾಗುತ್ತೀರಿ.

ಇದಿಷ್ಟು ಅವರು ಹೇಳಿರುವ ಯಥಾವತ್ ಮಾತುಗಳಾಗಿವೆ.

ನನ್ನ ಪ್ರಕಾರ ಎಡ, ಬಲ ಪೂರ್ವ ಪಶ್ಚಿಮ ಉತ್ತರ, ದಕ್ಷಿಣ ಎನ್ನದೇ ಬಾಬಾ ಸಾಹೇಬರ ಪರಮೋಚ್ಛ ಸಂವಿಧಾನದ ನೀಡಿದ ತಿಳುವಳಿಕೆಯ ಅನುಸಾರ ಸಾಯಿ ಪಲ್ಲವಿ ಅವರು ಮಾತನಾಡಿದ್ದಾರೆ. ಸರಳವಾಗಿ ಎಲ್ಲರಿಗೂ ಬೇಕಾದ ಸಂವಿಧಾನದ ತಿಳುವಳಿಕೆಯನ್ನು ದಾಟಿಸಿರುವ ಅವರನ್ನು ನಾನು ಅಭಿನಂದಿಸುತ್ತೇನೆ.

ಹಾಗೆಯೇ ಆಕೆಯ ಸಂವಿಧಾನಾತ್ಮಕ ಮಾತನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲದೇ ಭಾಷೆ ಬರದೇ ಒದ್ದಾಡುತ್ತಿರುವ ಚಿಪ್ಪು ರಂಗ ಮತ್ತವನ ಜಾತಿಗ್ರಸ್ಥ ಹಿಂಬಾಲಕರಿಗೆ ಮೊದಲು ಭಾಷೆ ಮತ್ತು ಸಂವಿಧಾನವನ್ನು ಕಲಿಯಿರಿ ಎಂದು ಹೇಳಲು ಬಯಸುತ್ತೇನೆ (deepak kalkere)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *