

ಜಿ ಟಿ ವಿತ್ truth… 89

ಅಕ್ಷರ ಹಣತೆ ಬೆಳಗಲು ಜತೆಯಾಗಿ….
ಸಿಗಂದೂರು ಲಾಂಚ್ ನಿಲ್ದಾಣದಲ್ಲಿ ಟಿ ಮಂಡಕ್ಕಿ ಮಾರುವ ಪುಟ್ಟ ಟೀ ಸ್ಟಾಲ್ ನಲ್ಲಿ ಭಾನುವಾರ ಮತ್ತು ಇತರೆ ಕಾಲೇಜು ರಜೆ ದಿನಗಳಲ್ಲಿ ಅಪ್ಪನ ಜತೆ ಮಂಡಕ್ಕಿ ಮಾರಲು ಸಹಾಯ ಮಾಡುತ್ತಾ, ರಾತ್ರಿ ಅಮ್ಮನ ಜತೆಗೆ ಅಡಿಕೆ ಸೊಲಿಯುತ್ತ ಕೂಲಿ ಕಾರ್ಮಿಕ ಬಡವರ ನಮ್ಮೂರಿನ ಚಕ್ಕೋಡು ರಘುಪತಿ ಮಗಳು ದಿವ್ಯಶ್ರೀ ದ್ವಿತೀಯ ಪಿಯುಸಿ ಯಲ್ಲಿ 94% ಅಂಕವನ್ನ ವಾಣಿಜ್ಯ ವಿಭಾಗದಲ್ಲಿ ಗಳಿಸಿದ್ದಾಳೆ. ತುಮರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಟಾಪರ್ ಆಗಿದ್ದಾಳೆ.
ಇವಳ ಅಕ್ಕ ಕಾವ್ಯಶ್ರೀ ಕೂಡಾ 2 ವರ್ಷ ಹಿಂದೆ 95% ದ್ವಿತೀಯ ಪಿಯುಸಿಯಲ್ಲಿ ಅಂಕ ಗಳಿಸಿ ತೇರ್ಗಡೆ ಆಗಿದ್ದಳು. ಈಗ ತಂಗಿಯ ಸರದಿ.
ತನ್ನ ಮಂಡಕ್ಕಿ ಟೀ ಅಂಗಡಿಯಲ್ಲಿ ಬರುವ ಆದಾಯದಲ್ಲಿ ಮಕ್ಕಳ ವಿದ್ಯಭ್ಯಾಸಕ್ಕಾಗಿ ಹಣ ಎಲ್ಲಿಂದ ತರಲಿ ಎಂಬುದು ರಘುಪತಿ ಅಂತರಾಳ. ಈ ಹಿಂದೆ ಕಾವ್ಯಶ್ರೀ ಗೆ ನೀವೆಲ್ಲ ಜಿ ಟಿ ವಿತ್ truth.. ನ ನನ್ನ ಕೋರಿಕೆಗೆ ನೀವೆಲ್ಲ ಸಹಕಾರ ನೀಡಿದ್ದೀರಿ. ಈಗ ಕಾವ್ಯಶ್ರೀ ಕುಂದಾಪುರದಲ್ಲಿ ವಾಣಿಜ್ಯ ದ್ವಿತೀಯ ಪದವಿ ಓದುತಾ ಇದ್ದಾಳೆ 95%ಸರಾಸರಿ ಕಾಯ್ದುಕೊಂಡಿದ್ದಾಳೆ.
ದಿವ್ಯಶ್ರೀ ಪದವಿ ಓದಲಿ….
ನಿಮ್ಮ ಸಹಕಾರ ಸಿಕ್ಕರೆ ಈ ಹಾದಿ ಸುಗಮ
ಪ್ಲೀಸ್ ಜತೆಯಾಗಿ…..
ತುಮರಿ ಕೆನರಾ ಬ್ಯಾಂಕ್ ಆಕೆಯ ವಯಕ್ತಿಕ ಖಾತೆ ಹೀಗಿದೆ….
Divyashree
19132200062857
CNRB0011913
ಪೋನ್ ಪೇ ಅವರ ಬಳಿ ಇಲ್ಲದೆ ಇರುವ ಕಾರಣ.
ಜಿ ಟಿ ವಿತ್ truth.. ನನ್ನ ಪೋನ್ ಪೇ, ಗೂಗಲ್ ಪೇ ಸಂಖ್ಯೆ 9482283612 ಬಳಸಬಹುದು.
ಬನ್ನಿ ಅಕ್ಷರ ಹಣತೆ ಬೆಳಗುವ…..
ಜಿ. ಟಿ ತುಮರಿ
9448018212

ಲೋಕದ ಅದಾಲತ್ ನಲ್ಲಿ ಚೆಕ್ ಬೌನ್ಸ್ ಪ್ರಕರಣಗಳು, ಮೋಟಾರು ವಾಹನ ಅಪಘಾತ ಪರಿಹಾರದ ಪ್ರಕಾರಗಳು, ಆದಿನ ಭೂ ಸ್ವಾಧೀನ ಪ್ರಕರಣಗಳು, ರಾಜಿಯಾಗುವಂತಹ ಅಂತ ಎಲ್ಲಾ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳು ,ವ್ಯಾಜ್ಯ ಪೂರ್ವ ಪ್ರಕರಣಗಳು, ಬ್ಯಾಂಕ್ ಮತ್ತು ಹಣಕಾಸು ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಲು ವೇದಿಕೆಯನ್ನು ಕಲ್ಪಿಸಿಕೊಡಲಾಗಿದೆ ಹೆಚ್ಚಿನ ಮಾಹಿತಿಗಾಗಿ ಸಿದ್ದಾಪುರ ನ್ಯಾಯಾಲಯದ ಸಂಪರ್ಕದಲ್ಲಿರುವ ತಾಲೂಕು ಕಾನೂನು ಸೇವಾ ಸಮಿತಿ ಭೇಟಿ ನೀಡಬಹುದು ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳುವಂತೆ ನ್ಯಾಯಾಧೀಶರು ವಿನಂತಿಸಿಕೊಂಡಿದ್ದಾರೆ.
ಸಿದ್ದಾಪುರ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ತಿಮ್ಮಯ್ಯ. ಜಿ ಮಾತನಾಡಿ ಕೆಳವರ್ಗದವರು ಮತ್ತು ಕಾರ್ಮಿಕರಿಗೆ ಅನುಕೂಲ ಆಗುವ ದೃಷ್ಟಿಯಿಂದ ಈ ಅದಾಲತ್ ಅನ್ನು ಹಮ್ಮಿಕೊಳ್ಳಲಾಗಿದೆ.
ಬಹಳ ವರ್ಷಗಳಿಂದ ಇತ್ಯರ್ಥವಾಗದೆ ಇರುವ ಪ್ರಕರಣಗಳನ್ನು ಈ ಲೋಕದಲ್ಲಿ ಪರಿಹರಿಸಿಕೊಳ್ಳು ಬಹುದಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಬಂದು ಲಾಭ ಪಡೆಯಲು ವಿನಂತಿಸಿಕೊಂಡಿದ್ದಾರೆ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
