harsha kugve -ವ್ಯಾಕರಣ ಧಿಕ್ಕರಿಸಿ ದಿನಬಳಕೆಯ ಭಾಷ್ಯ ಬರೆದ ಹುಡುಗ

ಪಟ್ಯಪರಿಸ್ಕರಣೆಹೋರಾಟದ_ರಿಪೋರ್ಟ

ನಲ್ಬೆಳಗು ಪ್ರೆಂಡ್ಸ…..

ನೆನ್ನೆ ಸಾವಿರಾರು ಕನ್ನಡಿಗರು ಬಾಗವಹಿಸಿ ಸಾದಿಸಿದ ಗೆಲುವು ಏನು ಅನ್ನುವುದನ್ನು ಮೊದಲು ತಿಳಿಯೋಣ.

  1. ನನ್ನ ಒಂದಸ್ಟು ಸ್ನೇಹಿತರು ಒಂದು ಮಹತ್ವದ ಅಂಶವನ್ನು ಈ ಹೋರಾಟದ ಹಿನ್ನೆಲೆಯಲ್ಲಿ ಗಮನಿಸಿದ್ದಾರೆ. ಅದು ಏನು ಅಂದರೆ ಇಲ್ಲಿಯವರೆಗೂ ಯಾವೆಲ್ಲ ರಾಜ್ಯಗಳಲ್ಲಿ ಬಿಜೆಪಿ ಅದಿಕಾರಕ್ಕೆ ಬಂದಿದೆ ಅಲ್ಲೆಲ್ಲ ಯಾವುದೇ ಪ್ರತಿರೋದವಿಲ್ಲದೆ ಪಟ್ಯ ಪುಸ್ತಕಗಳಲ್ಲಿ RSS ಅಜೆಂಡಾವನ್ನು ತುಂಬಿದ್ದಾರೆ. ಆದರೆ ಪಟ್ಯ ಪುಸ್ತಕಗಳಲ್ಲಿ ಬಂದಿರುವ RSS ಅಜೆಂಡಾವನ್ನು ಬಲವಾಗಿ ಪ್ರತಿರೋದಿಸುತ್ತಿರುವ ಮೊದಲಿಗರು ಕನ್ನಡಿಗರು ಆಗಿದ್ದಾರೆ.
  2. ಇಲ್ಲಿಯವರೆಗೂ ಸಂಗಿ ಬ್ರೆಮಿನ್ಸ ಗಳು ಏನೋ ನಾವೆಲ್ಲರೂ ಹಿಂದೂ ಅನ್ನುತ್ತಿದ್ದಾರೆ ಎಂದು ನಂಬಿದ್ದ ಇತರೆ ಎಲ್ಲ ಜಾತಿ ಸಮುದಾಯಗಳಿಗೆ ಸಂಗಿ ಬ್ರೆಮಿನ್ಸ ಗಳ ಪಿತೂರಿ ಏನು ಅನ್ನುವುದು ಸ್ಪಸ್ಟವಾಗಿ ಅರ್ತವಾಗಿದೆ.
  3. ದೇಶದಲ್ಲೇ ಮೊದಲ ಬಾರಿಗೆ RSS ಅನ್ನು ಸಾರ್ವಜನಿಕವಾಗಿ expose ಮಾಡುತ್ತಿರುವವರು ಕನ್ನಡಿಗರು ಆಗಿದ್ದಾರೆ.
  4. ಬಹಳ ವರುಶಗಳ ನಂತರ ಎಲ್ಲ ಜಾತಿ ಸಮುದಾಯದ ಜನರು ಕನ್ನಡ ಅಸ್ಮಿತೆಗಾಗಿ ಒಂದು ವೇದಿಕೆಗೆ ಬಂದಿದ್ದಾರೆ. ಅದರಲ್ಲೂ OBC ಗಳಿಗೆ ದಲಿತ ತತ್ವದ ಅರಿವು ಮೂಡುತ್ತಿದೆ. ಇದೊಂದು ಈ ಹೋರಾಟದ ದೊಡ್ಡ ಬೆಳವಣಿಗೆ.

ಹೋರಾಟದಮುಂದಿನದಾರಿ_ಏನು

  1. ನೆನ್ನೆಯ ಸಬೆಯಲ್ಲಿ ರಾಜ್ಯ ಸರ್ಕಾರಕ್ಕೆ ಪಟ್ಯ ಪುಸ್ತಕಗಳನ್ನು ಹಿಂಪಡೆಯಲು ಹತ್ತು ದಿನಗಳ ಗಡುವು ನೀಡಲಾಗಿದೆ. ಪುಸ್ತಕ ಹಿಂಪಡೆಯಲಿಲ್ಲ ಅಂದರೆ ಹೋರಾಟ ತೀವ್ರ ಸ್ವರೂಪದೊಂದಿಗೆ ಮುಂದುವರೆಯುತ್ತದೆ.
  2. ಹತ್ತು ದಿನಗಳ ಒಳಗಾಗಿ ಪುಸ್ತಕ ಹಿಂಪಡೆಯಲಿಲ್ಲ ಅಂದರೆ ಮೊದಲ ಪ್ರತಿರೋದವಾಗಿ ಸಾವಿರಾರು ಕನ್ನಡಿಗರು ತಿಪಟೂರು ಚಲೋ ಮಾಡಲಿದ್ದಾರೆ.
  3. ಪ್ರತಿಯೊಂದು ಜಿಲ್ಲೆ, ತಾಲ್ಲೂಕು ಗಳಲ್ಲಿ ದೊಡ್ಡ ಮಟ್ಟದ ಪ್ರತಿರೋದ ಸಬೆಗಳು ನಡೆಯಲಿವೆ.
  4. ಪಟ್ಯ ಪರಿಸ್ಕರಣೆಯ ಅವಾಂತರಗಳ ಸಂಪೂರ್ಣ ತಿಳುವಳಿಕೆ ಇದ್ದು ಪ್ರತಿರೋದ ತೋರದ ಮಟಾದೀಶರು, ಕಾಂಗ್ರೆಸ್ ಮತ್ತು ಜೆಡಿಎಸ್ ನ ನಾಯಕರ ವಿರುದ್ದ ಕೂಡ ಜನರು ತಮ್ಮ ಆಕ್ರೋಶ ವನ್ನು ವ್ಯಕ್ತಪಡಿಸಲಿದ್ದಾರೆ. ಅದರಲ್ಲೂ ಮಟಾದೀಶರ ವಿರುದ್ದ ಆ ಜಾತಿಗಳ ಸಮುದಾಯದ ಯುವಕ ಯುವತಿಯರು ದೊಡ್ಡ ಮಟ್ಟದ ವಿದ್ರೋಹ ತೋರಲಿದ್ದಾರೆ. ನಾಡಿನ ಅಸ್ಮಿತೆಗಾಗಿ ಹೋರಾಡದ ಮಟಾದೀಶರು ಮತ್ತು ರಾಜಕೀಯ ನಾಯಕರು ಇದ್ದರೆಸ್ಟು ಹೋದರೆಸ್ಟು ಅನ್ನುವ ಜನಾಬಿಪ್ರಾಯನ್ನು ಕೋಟ್ಯಂತರ ಕನ್ನಡಿಗರಲ್ಲಿ ತಪ್ಪದೇ ಮೂಡಿಸಲಿದ್ದಾರೆ.
  5. ಇಡೀ ಹೋರಾಟದ ಅಂತಿಮ ಗುರಿ RSS ಅಜೆಂಡಾವನ್ನು ಪುಸ್ತಕಗಳಿಂದ ಮಾತ್ರವಲ್ಲ ಕರ್ನಾಟಕದ ಮಣ್ಣಿನಿಂದಲೇ ಹಿಮ್ಮೆಟ್ಟಿಸುವುದು.

ಸಂಕ್ಶಿಪ್ತವಾಗಿ ಹೇಳುವುದಾದರೆ RSS ಮತ್ತು ಬ್ರಾಹ್ಮಣ್ಯದ ವಿರುದ್ದ ದೊಡ್ಡ ಮಟ್ಟದ ರಾಜಕೀಯ ಮತ್ತು ಸಾಂಸ್ಕ್ರತಿಕ ಪ್ರತಿರೋದ ಈ ಕನ್ನಡ ಮಣ್ಣಿನಲ್ಲಿ ಹುಟ್ಟಲಿದೆ…..

ಎಲ್ಲರೂ ಯೋಗದ ಗುಂಗಿನಲ್ಲಿದ್ದಾಗ ಸಾಮಾಜಿಕ ಜಾಲತಾಣದಲ್ಲಿ ಇಂಥದ್ದೊಂದು ಪೋಸ್ಟ್‌ ಕಂಡರೆ…. ಏನಾಗಬೇಕು? ಹೆಚ್ಚಿನವರಿಗೆ ಏನೂ ಆಗಲಿಕ್ಕಿಲ್ಲ, ಎನಿಸಲಿಕ್ಕಿಲ್ಲ. ಆದರೆ ಒಳಗೊಳಗೆ ಎಲ್ಲವನ್ನೂ ಇಟ್ಟುಕೊಂಡು ತಮ್ಮ ಸಿದ್ಧಾಂತ, ಅಸಲಿತನ ತೋರದವರಿಗೆ ಹರ್ಷಾ ಕುಗ್ವೆ ಎಂದರೆ ಗ್ರಾಮರ್‌ ಬರದ ಬರಹಗಾರ ಎನಿಸಬಹುದು.

ಸ್ವಲ್ಪ ಮತಾಂಧತೆಯ ಅಮಲುತುಂಬಿಕೊಂಡವನಾದರೆ ಸಹಜವಾಗಿ ಇದೇನ್‌ ಬಿಡು……. ಎಂದು ಪ್ರಾರಂಭಿಸಿ ಭಾರತೀಯತೆ ಎಂದರೆ ವಿದೇಶಿ ಪರಿವಾರವನ್ನು ಒಪ್ಪಿಕೊಳ್ಳುವುದು ಎನ್ನುವವರೆಗೆ ೧೦೧ ಪ್ಲಾಂಟೆಡ್‌ ಕಾರಣಗಳನ್ನು ಕೊಟ್ಟು ಹರ್ಷ ಮತ್ತವರ ಬಳಗ ಸರಿ ಇಲ್ಲ ಎಂದುಬಿಡಬಹುದು.

ವಿಷಯ ಏನಪಾ ಅಂದರೆ… ಅವರವರ ಭಾವಕ್ಕೆ ಭಕುತಿಗೆ ಎನ್ನುವ ಮೊದಲು ಹರ್ಷ ವಿದ್ಯಾವಂತ ಕುಟುಂಬದ ಸರ್ಕಾರಿ ಅರೆಸರ್ಕಾರಿ ನೌಕರರೇ ತುಂಬಿರುವ ಕುಟುಂಬ,ಸಂಬಂಧಗಳ ನೆರಳಲ್ಲಿ ಬೆಳೆದವರು. ಈ ಹೋರಾಟ,ಚಳವಳಿ ಎಂದೆಲ್ಲಾ ತಲೆ ಕೆಡಿಸಿಕೊಂಡು ಅಲೆಮಾರಿಯಾಗಿರದಿದ್ದರೆ ಹರ್ಷ ಏನು ಅವರಪ್ಪ ಶಿವಾನಂದ ಕುಗ್ವೆ ಕೂಡಾ ಕೈತುಂಬ ಸಂಬಳ ಕೊಡುವ ಉದ್ಯೋಗದಲ್ಲಿರುತಿದ್ದರು. ಆದರೆ ಶಿವಾನಂದ ಮತ್ತು ಹರ್ಷ ಅಪ್ಪಮಕ್ಕಳು ನಕ್ಷತ್ರದ ಧೂಳು ಅರಸಿ ಹೊರಟರು.‌

ಅಪ್ಪನ ದಾರಿ ಮಕ್ಕಳಿಗೆ ಇಷ್ಟವಾಗುವುದು ಬಲುಅಪರೂಪ ಎಲ್ಲೆಲ್ಲೋ ಕುವೆಂಪು ರಿಗೆ ತೇಜಸ್ವಿ, ಗೌರೀಶರಿಗೆ ಜಯಂತ ಕಾಯ್ಕಿಣಿ,ಲಂಕೇಶ್‌ ರಂಥ ಲಂಕೇಶ್‌ ರಿಗೆ ಗೌರಿ ಲಂಕೇಶ್‌, ರಂಥ ಅಪರೂಪದಲ್ಲಿ ಅನುರೂಪ ಮಕ್ಕಳು ಬೆಳೆಯುವುದು ಬಿಟ್ಟರೆ ಬಹುತೇಕ ಪ್ರಸಿದ್ಧರಿಗೆ ಇವರು ಅವರ ಅಪ್ಪ ಎನ್ನುವುದು ಬಿಟ್ಟರೆ ಜೈವಿಕ ಸಂಬಂಧಗಳ ಹೊರತಾಗಿ ಯಾವ ಸೋಂಕೂ ತಾಕಿರುವುದಿಲ್ಲ.

ಇಂಥ ಅಪರೂಪದ ಕುಗ್ವೆ ಹೋರಾಟ, ಚಳವಳಿ, ಸಂಶೋಧನೆ, ಅಧ್ಯಯನಗಳ ಜೊತೆಗೆ ಸಮಾಜಮುಖಿಯಾಗಿ ಬದುಕಲು ತಮ್ಮ ಬದುಕನ್ನು ಮುಡಿಪಾಗಿಟ್ಟವರು. ದಸಂಸ ಹೋರಾಟ, ಕಾಗೋಡು ಚಳವಳಿ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಚಟುವಟಿಕೆಗಳಿಂದಲೇ ಕ್ರೀಯಾಶೀಲರಾಗಿದ್ದ ಶಿವಾನಂದ ಕುಗ್ವೆ ಮಗ ಹರ್ಷರನ್ನು ಬೇರೆ ದಾರಿಯಲ್ಲಿ ಬೆಳೆಸಬಹುದಿತ್ತು. ಆದರೆ ಶಿವಾನಂದರ ಬದ್ಧತೆ ತಮ್ಮ ಬದುಕು,ಜೊತೆಗೆ ಕುಟುಂಬ, ಊರನ್ನೂ ಒಳಗೊಳ್ಳುತ್ತಾ ಜೀವಂತವಾಗಿದ್ದಕ್ಕೆ ಹರ್ಷ ಇಂದು ಪಟ್ಟಭದ್ರರ ವ್ಯಾಕರಣದ ಶುದ್ಧ ಕನ್ನಡಕ್ಕೆ ಸೆಡ್ಡು ಹೊಡೆದು ದಿನಬಳಕೆಯ, ಜನಬಳಕೆಯ ಭಾಷೆಯನ್ನೇ ಪ್ರತಿರೋಧದ ಅಸ್ತ್ರವನ್ನಾಗಿಸಿಕೊಂಡಿದ್ದಾರೆ.

ಅಕಾಡೆಮಿಕ್‌ ಕೆಲಸಗಳ ಜೊತೆಗೆ ಹೋರಾಟವನ್ನು ಬದುಕಾಗಿಸಿಕೊಂಡವರು ವಿರಳ ಅಂಥ ವಿರಳಾತಿವಿರಳರ ಪಂಕ್ತಿ ಯಲ್ಲಿರುವ ಹರ್ಷಾ ಪಂಕ್ತಭೇದದ ವಿರುದ್ಧದ ಚಳವಳಿ ಸೇರಿ ಅನೇಕ ಹೋರಾಟಗಳಲ್ಲಿ ಸಕ್ರೀಯವಾಗಿ ತೊಡಗಿಕೊಂಡವರು ಇಂಥವರಿಂದ ಈ ನಾಡು ಈಗಲೂ ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುತ್ತಿದೆ. ನಕಲಿದೇಶಪ್ರೇಮಿ ಅಧಿಕಾರದಾಹಿ ಲಾಭಕೋರರ ನಡುವೆ ಈ ನಾಡು ಸಮಾನತೆ,ಸೌಹಾರ್ಧತೆಗಾಗಿ ತುಡಿಯುತ್ತಿದೆ. ಈ ಆಶಾವಾದವೊಂದೇ ಈಗಿರುವ ಭರವಸೆ ಎನ್ನುವುದಕ್ಕಾಗಿ ನಾಲ್ಕಕ್ಷರ ಬರೆಯಬೇಕಾಯಿತು. -ಕನ್ನೇಶ್.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *