ಮುಂಗಾರು ಮಳೆ.. ರೈತರಿಗೆ ಶಾಪವಾದ ಕತೆ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ವರ್ಷದ ಮಳೆ ಆರ್ಭಟ ಪ್ರಾರಂಭವಾಗಿದ್ದು ಬಹುನಿರೀಕ್ಷೆಯ ಮಲೆಗಾಲ ಸಾರ್ವಜನಿಕರಲ್ಲಿ ಮಿಶ್ರ ಅಭಿಪ್ರಾಯ ಮೂಡಿಸಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸರಾಸರಿ ಗರಿಷ್ಠ ನೂರು ಸೆಂ.ಟಿ.  ಮೀಟರ್ಗಳ ವರೆಗೆ ಮಳೆಯಾದ ಉದಾಹರಣೆಗಳಿವೆ. ಕಳೆದ ವರ್ಷದ ಒಂದೆರಡು ದಿವಸಗಳ ಮಳೆಯ ಆರ್ಭಟ ಜಿಲ್ಲೆಯ ಜನರನ್ನು ಕಂಗಾಲುಗೊಳಿಸಿತ್ತು.
ಈ ವರ್ಷ ಮುಂಗಾರಿನ ಪೂರ್ವ ಬಂದಿದ್ದ ಮಳೆ ಒಂದೆರಡು ದಿವಸಗಳಲ್ಲೇ ಪ್ರವಾಹದ ಭೀತಿ ಹೆಚ್ಚಿಸಿತ್ತು. ಈಗ ಪ್ರಾರಂಭವಾಗಿರುವ ಮಳೆ ಈ ವಾರ ಪೂರ್ತಿ ಸುರಿಯುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಘಟ್ಟದ ಕೆಳಗಿನ ತಾಲೂಕುಗಳಲ್ಲಿ ಎರಡು ದಿವಸಗಳ ಮಳೆ ಸಾರ್ವಜನಿಕ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಘಟ್ಟದ ಮೇಲೆ ಮಳೆಯ ಪ್ರಮಾಣ ಅಷ್ಟು ವಿಪರೀತವಲ್ಲದಿದ್ದರೂ ಮಂಗಳವಾರ,ಬುಧವಾರಗಳ ಸಂತೆಗೆ ಮಳೆ ಅಡ್ಡಿಯಾಗಿತ್ತು.ಸಿದ್ಧಾಪುರದಲ್ಲಿ ಬುಧವಾರ ಮುಂಜಾನೆಯಿಂದ ಸುರಿದ ಮಳೆಯಿಂದಾಗಿ ವಾರದ ಸಂತೆ ಪ್ರಾರಂಭವಾಗುವುದೇ ವಿಳಂಬವಾಯಿತು. ಮಳೆಯ ರಭಸ ನೋಡಿ ಸಂತೆ ಪ್ರಾರಂಭಿಸಬೇಕಿದ್ದ ವ್ಯಾಪಾರಸ್ಥರು ತಮ್ಮ ಮೂಟೆಗಳೊಂದಿಗೆ ಎರಡ್ಮೂರು ಗಂಟೆ ಕಾಯುವಂತಾಯಿತು. ಜೂನ್‌ ತಿಂಗಳಲ್ಲಿ ಮೊದಲೆಂಬಂತೆ ಪ್ರಾರಂಭವಾದ ಈ ವಾರದ ಮಳೆ ಆರಿದ್ರಮಳೆ ಹಬ್ಬಕ್ಕೂ ಅಡಚಣೆ ಉಂಟುಮಾಡಿದೆ. ವಿಳಂಬವಾಗಿ ಪ್ರಾರಂಭವಾಗಿ ರಭಸದಿಂದ ಬೀಳುತ್ತಿರುವ ಮಳೆಯಿಂದ ಕೃಷಿ ಚಟುವಟಿಕೆಗಳಿಗೂ ತೊಂದರೆಯಾಗಿದೆ.

https://l.facebook.com/l.php?u=https%253A%252F%252Fsamajamukhi.net%252F2022%252F06%252F21%252Fabout-harsha-kugve%252F%253Ffbclid%253DIwA


ಜಿಲ್ಲಾ ಕೇಂದ್ರ ಕಾರವಾರ ಸೇರಿದಂತೆ ಕರಾವಳಿಭಾಗದಲ್ಲಿ ಕಳೆದ ಎರಡುದಿವಸಗಳ ಮಳೆ ಸ್ಥಳೀಯ ಜನಜೀವನದ ಮೇಲೆ ಪರಿಣಾಮ ಬೀರಿದೆ. ಮಳೆಯ ರಭಸ, ಪ್ರವಾಹದ ಭೀತಿಯಿಂದಾಗಿ ಸರ್ಕಾರಿ ಕಾರ್ಯಕ್ರಮಗಳೊಂದಿಗೆ ಇತರ ಚಟುವಟಿಕೆಗಳಿಗೂ ಹಿನ್ನಡೆಯಾಗುವ ಸಾಧ್ಯತೆ ಇದೆ. ಕಾರವಾರದಲ್ಲಿ ಶಾಸಕಿ ರೂಪಾಲಿ ನಾಯ್ಕ ಮಳೆಯಿಂದ ತೊಂದರೆಗೆ ಒಳಗಾದವರ ಅಹವಾಲು ಕೇಳಿದ್ದಾರೆ. ಜಿಲ್ಲಾಧಿಕಾರಿಗಳು ಪ್ರವಾಹಪೀಡಿತರ ನೆರವಿಗೆ ವಿಶೇಶ ಪಡೆಯೊಂದನ್ನು ಸಿದ್ಧಪಡಿಸಿದ್ದಾರೆ. ಜಿಲ್ಲಾ ಉಸ್ತವಾರಿ ಸಚಿವ ಶ್ರೀನಿವಾಸ ಪೂಜಾರಿ ಜಿಲ್ಲೆಯ ಪ್ರವಾಹ ಪರಿಸ್ಥಿತಿ,ಮಳೆ ಅನಾನುಕೂಲತೆ ಬಗ್ಗೆ ಜಿಲ್ಲಾಡಳಿತದಿಂದ ಮಾಹಿತಿ ತರಿಸಿಕೊಳ್ಳುತಿದ್ದು ಜಿಲ್ಲಾಡಳಿತ ಮಳೆ, ಪ್ರವಾಹದ ತೊಂದರೆಗಳಿಗೆ ಶೀಘ್ರ ಸ್ಪಂದಿಸಲು ಆದೇಶ ಮಾಡಿದ್ದಾರೆ.


ರೈತರಿಗೆ ತೊಂದರೆ- ಮಳೆಗಾಲ ಪ್ರಾರಂಭದಲ್ಲಿ ರೈತರಿಗೆ ನೀಡುವ ಬೆಳೆಸಾಲದ ವಿಚಾರದಲ್ಲಿ ಹೊಸ ನಿಯಮಗಳಿಂದ ರೈತರಿಗೆ ತೊಂದರೆಯಾಗಿದೆ. ಪಹಣಿಪತ್ರಿಕೆಯಲ್ಲಿ ಸಾಮೂಹಿಕ ಹಕ್ಕುದಾರರು ಪ್ರತ್ಯೇಕವಾಗಿ ದಾಖಲಾತಿ ನೀಡುವ ಆದೇಶಕ್ಕೆ ರೈತರ ವಿರೋಧ ವ್ಯಕ್ತವಾಗಿದೆ. ತೋಟಗಾರಿಕೆ ಇಲಾಖೆಯ ಫ್ರೂಟ್‌  ನೋಂದಣಿ, ಪ್ರತ್ಯೇಕವಾಗಿ ಪಹಣಿಪತ್ರದ ಹಕ್ಕು ಮಾನ್ಯತೆ ಧೃಢೀಕರಣ ಪತ್ರ ನೀಡುವ ವಿಷಯ ರೈತರಿಗೆ ಬಿಸಿತುಪ್ಪವಾಗಿದೆ. ಕರ್ನಾಟಕ ಸರ್ಕಾರದ ಹಕ್ಕುಪತ್ರದ ಪಹಣಿಪತ್ರಿಕೆ ದಾಖಲಾತಿ ಬದಲಾವಣೆ, ಸಾಮೂಹಿಕ ಹಕ್ಕುದಾರರ ಪ್ರತ್ಯೇಕ ಪ್ರಮಾಣ ಪತ್ರ ನೀಡಿಕೆ ವಿಚಾರವಾಗಿ ಜಿಲ್ಲಾಡಳಿತ ಸ್ಫಷ್ಟನೆ ನೀಡಿಲ್ಲ. ಆದರೆ ಬೆಳೆಸಾಲ ಪಡೆಯಲು ಹೋಗುತ್ತಿರುವ ರೈತರು ಈ ಹೊಸ ನಿಯಮದ ಬಗ್ಗೆ ಕೇಳಿ ಮನನೊಂದು ಬರುವಂತಾಗಿರುವುದು ರೈತರ ಕೋಪಕ್ಕೆ ಕಾರಣವಾಗಿದೆ. ಮುಂಗಾರಿನ ಬಿತ್ತನೆ ಮೊದಲು ಬೆಳೆಸಾಲ ದೊರೆಯದಿರುವುದು ಮುಂಗಾರಿನ ಮಳೆ ಕಣ್ಣುಮುಚ್ಚಾಲೆ ಆಟ ಆಡುತ್ತಿರುವುದು. ಈ ವಿದ್ಯಮಾನಗಳಿಗೆ ಸರ್ಕಾರ ಸ್ಫಂದಿಸದಿರುವುದು ರೈತ ರ ದುಗುಡ ಹೆಚ್ಚಿಸಿದೆ. ಈ ವರ್ಷದ ಬಿತ್ತನೆ ಮೊದಲು ಅನಿರೀಕ್ಷಿತ ಬೆಳವಣಿಗೆಗಳಾಗಿರುವುದು ರೈತ ಸಮೂಹದ ಅಸಮಾಧಾನಕ್ಕೆ ಕಾರಣವಾಗಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *