ಬಿಂಗಿಯಲ್ಲಿ ಪುನೀತ್‌ ಭಾವಚಿತ್ರ,ಅಪ್ಪು ನೆನೆದ ಅವರಗುಪ್ಪಾ ಗ್ರಾಮಸ್ಥರು

ಕರ್ನಾಟಕ ರತ್ನ ಪುನೀತ್‌ ರಾಜ್ಕುಮಾರ್‌ ಹೀಗೆ ಬಂದು ಹಾಗೇ ಹೋದ ದೃವತಾರೆ. ಪುನೀತ್‌ ರಾಜ್ಕುಮಾರ ರನ್ನು ನೆನಪಿಸದ ದಿನಗಳೇ ಇಲ್ಲ. ಕಳೆದ ವರ್ಷ ಈ ಅವಧಿಯಲ್ಲಿ ಬದುಕಿದ್ದ ಪುನೀತ್‌ ರಾಜಕುಮಾರ ಎಂಥಾ ಸಮಾಜಮುಖಿ ವ್ಯಕ್ತಿ ಎನ್ನುವ ವಾಸ್ತವ ಅರಿವಾದದ್ದು ಅವರ ನಿಧನದ ನಂತರ. ಪುನೀತ್‌ ಎಡಗೈಯಲ್ಲಿ ಕೊಟ್ಟದ್ದು ಬಲಗೈಗೆ ಗೊತ್ತಾಗದಂತೆ ದಾನ ಧರ್ಮ ಮಾಡಿದ ಕಲಿಯುಗದ ಕರ್ಣ. ಪುನೀತ್‌ ನೆನಪಿಸುವ ಮೂಲಕ ಪುಳಕ ಹೊಂದ ದವರಿಲ್ಲ ಎನ್ನುವಷ್ಟು ಪುನೀತ್‌ ಸರ್ವಸ್ಫರ್ಶಿ,ಸರ್ವವ್ಯಾಪಿಯಾಗಿದ್ದಾರೆ. ಎಲ್ಲೆಡೆ ಅವರ ಹೆಸರಿನ ರಸ್ತೆಗಳು, ವೃತ್ತಗಳು ಪ್ರಾರಂಭವಾಗಿವೆ.

ಆರಿದ್ರಮಳೆಯಲ್ಲಿ ಮಿಂದ ಪುನೀತ್!

ಹೌದು ಆರಿದ್ರಮಳೆ ಮತ್ತು ಆರಿದ್ರಮಳೆ ಹಬ್ಬವೆಂದರೆ ಮಲೆನಾಡಿನ ಜನ ಕುಣಿದು ಕುಪ್ಪಳಿಸುವ ಮಲೆನಾಡಿನ ಹನಿ ಹಬ್ಬ, ಈ ಆರಿದ್ರಮಳೆಯ ಹನಿಹಬ್ಬದಲ್ಲಿ ಪೂರ್ವಜರು, ಸೈನಿಕರಾಗಿದ್ದ ಪೂರ್ವಜರ ಧೈರ್ಯ, ಸಾಹಸಗಳನ್ನು ನೆನಪಿಸುವ ಕಾರಣಕ್ಕೆ ಆರಿದ್ರಮಳೆಯಲ್ಲಿ ದೇವರ ಆರಾಧನೆಯ ಜೊತೆಗೆ ಗಾಮನ ಮುಖಗಳ ಮೆರವಣಿಗೆ,ಆರಾಧನಾ ಮೆರವಣಿಗೆಗಳನ್ನು ಮಾಡುವುದು ಮಾಮೂಲು.

ಶಿವಮೊಗ್ಗ ಜಿಲ್ಲೆಯ ಕೆಲೆವೆಡೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ಧಾಪುರ ಸೊರಬ, ಸಾಗರಗಳ ಬಹುತೇಕ ಕಡೆ ಆರಿದ್ರಮಳೆ ಹಬ್ಬ ಮಾಡಿ ಕುಮಾರರಾಮನನ್ನು ಸ್ಮರಿಸುವುದು ಸಂಪ್ರದಾಯ ಮತ್ತು ರೂಢಿ ಇಂಥ ಆರಿದ್ರ ಮಲೆ ಹಬ್ಬದಲ್ಲಿ ಕುಮಾರ ರಾಮ, ಗಾಮ, ಗ್ರಾಮದೇವರುಗಳ ಜೊತೆಗೆ ಒಬ್ಬ ವಿಶೇಶ ವ್ಯಕ್ತಿಯ ಚಿತ್ರಪಟವನ್ನೂ ಮೆರವಣಿಗೆಯಲ್ಲಿ ಹೊತ್ತೊಯ್ದು ಗೌರವಿಸಲಾಯಿತು. ಆ ವ್ಯಕ್ತಿ ಪುನೀತ್‌ ರಾಜ್‌ ಕುಮಾರ. ದೀವರ ಆದಿ ಪುರುಷ ಕುಮಾರರಾಮನೊಂದಿಗೆ, ಗಾಮ, ಗ್ರಾಮದೇವರ ಹಬ್ಬದ ಮೆರವಣಿಗೆಯಲ್ಲಿ ಅವರಗುಪ್ಪಾದ ಯುವಕರು ಪುನೀತ್‌ ರಾಜ್ ಕುಮಾರ ಚಿತ್ರಪಟವನ್ನೂ ಮೆರವಣಿಯಲ್ಲಿ ಹೊತ್ತೊಯ್ದು ಗೌರವ ನೀಡಿದರು. ಆರಿದ್ರಮಳೆಯ ಗಾಮ, ರಾಮ, ಬೀರಲು,ಗ್ರಾಮ ದೇವರ ಜೊತೆ ಪುನೀತ್‌ ಕೂಡಾ ದೇವರಾಗಿ ಮೆರವಣಿಗೆಯಲ್ಲಿ ಸಾಗಿದ್ದು ವಿಶೇಶವೆನಿಸಿತು. ಆರಿದ್ರಮಳೆ ಹಬ್ಬದ ಆಚರಣೆಯಲ್ಲಿ ಮರವಣಿಯಲ್ಲಿ ಸಾಗಿದ ಪುನೀತ್‌ ರಾಜ್‌ ಕುಮಾರ ಚಿತ್ರಪಟ ನೋಡುಗರನ್ನು ಸೆಳೆಯಿತು.

ನಟರೊಬ್ಬರ ಚಿತ್ರ ಸಾಂಸ್ಕೃತಿಕ, ಪ್ರಾದೇಶಿಕ, ಜನಾಂಗೀಯ ರೂಢಿ, ಆಚರಣೆಗಳಲ್ಲಿ ಕಾಣಿಸಿಕೊಂಡದ್ದು ಪುನೀತ್‌ ರಾಜ್‌ ಕುಮಾರ ಜನಪ್ರೀಯತೆಗೆ ಸಾಕ್ಷಿಯಾಯಿತು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *