ಲೋಕಲ್ news – ಕಾಗೇರಿ ಜಾತಿಪ್ರೇಮ,ಮಡಿವಾಳರಿಗೆ ಅನ್ಯಾಯ ಆರೋಪ

ಸಿದ್ದಾಪುರ: ತಾಲೂಕು ಬೇಡ ಜಂಗಮದ ಸಮಾಜದ ವತಿಯಿಂದ ಸಮಾಜಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ವಿತರಿಸುವಂತೆ ಆಗ್ರಹಿಸಿದ ಮನವಿಯನ್ನು ತಹಶಿಲ್ದಾರ ಸಂತೋಷ ಭಂಡಾರಿ ಯವರ ಮೂಲಕ ಮುಖ್ಯ ಮಂತ್ರಿಗಳಿಗೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪರಮೇಶ್ವರಯ್ಯ ಕಾನಳ್ಳಿಮಠ
ಬೇಡ ಜಂಗಮರಿಗೆ ಸಂವಿಧಾನಾತ್ಮಕವಾಗಿ ಸಿಗುವ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡಬೇಕೆಂದು ಆಗ್ರಹಿಸಿ ವಕೀಲರಾದ ಬಿ.ಡಿ ಹಿರೇಮಠ್ ರವರ ನೇತೃತ್ವದಲ್ಲಿ 21 ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಸತ್ಯ ಪ್ರತಿಪಾದನಾ ಸತ್ಯಾಗ್ರಹ ನಡೆಯುತ್ತಿದೆ. ಇದನ್ನು ತಾಲೂಕು ಬೇಡ ಜಂಗಮ ಸಮುದಾಯವು ಸಹ ಬೆಂಬಲಿಸುತ್ತದೆ. ನಮ್ಮ ಬೇಡಿಕೆ ನ್ಯಾಯಸಮ್ಮತವಾದುದ್ದಾಗಿದೆ. ಬೇಡ ಜಂಗಮ ಸಮುದಾಯವು ಆರ್ಥಿಕವಾಗಿ ಶೈಕ್ಷಣಿಕವಾಗಿ ಮತ್ತು ಔದ್ಯೋಗಿಕವಾಗಿ ಹಿಂದುಳಿದಿರುವ ಸಮಾಜವಾಗಿದ್ದು ಹಿಂದಿನಿಂದಲೂ ಬೇಡ ಜಂಗಮ ಪ್ರಮಾಣ ಪತ್ರ ವಿತರಿಸುವಂತೆ ಆಗ್ರಹಿಸಿತ್ತಾ ಬಂದಿದ್ದೇವೆ. ಇದು ಸಂವಿಧಾನಾತ್ಮಕವಾಗಿ ಸಿಗಬೇಕಾದ ಹಕ್ಕು. ಈ ಹಿಂದೆ ಸರಕಾರದ ಕೆಲವು ಸೂತ್ತೋಲೆಗಳು ಹಾಗೂ ಕರ್ನಾಟಕ ಸರಕಾರ ದ ಮುಖ್ಯ ಗೆಜೆಟಿಯರ್ ಸೂರ್ಯನಾಥ ಕಾಮತ್ ರವರ ವರದಿಯಂತೆ ನಮಗೆ ಜಾತಿಪ್ರಮಾಣ ಪತ್ರ ಸಿಗಬೇಕು. ಬೇಡಜಂಗಮ, ಬುಡ್ಗು ಜಂಗಮ, ಮಾಲ ಜಂಗಮರಾದ ನಮಗೆ ಸರಕಾರದ ಸುತ್ತೋಲೆಗಳನ್ನು ಪರಿಶೀಲಿಸಿ ಸಂವಿಧಾನಾತ್ಮಕವಾಗಿ ಜಾತಿ ಪ್ರಮಾಣಪತ್ರ ನೀಡಬೇಕು ಎಂದು ಅವರು ಆಗ್ರಹಿಸಿದರು.


ಈ ಸಂದರ್ಭದಲ್ಲಿ ಚಂದ್ರಶೇಖರಯ್ಯ ಕಾನಳ್ಳಿಮಠ, ಸಂಗಮೇಶ, ರಾಜಶೇಖರ ಸ್ವಾಮಿ, ವೀರಭದ್ರ ಸ್ವಾಮಿ, ಅರುಣ ತೆಂಗಿನಮಠ, ಶಿವಕುಮಾರ ಹಿರೇಮಠ, ಪುಟ್ಟಯ್ಯ ಅಲಳ್ಳಿಮಠ, ಮಹಾಲಿಂಗಯ್ಯ ಕುಂದುಗೋಳ ಮಠ, ರಾಜು ಕುಂದಗೋಳ್ಳಮಠ, ಸೋಮಶೇಖರ ಸೋಗೆಮಠ, ಶಂವುಲಿಂಗಯ್ಯ ಹಂಚಿನ ಮಠ ಮೊದಲಾದವರು ಉಪಸ್ಥಿತರಿದ್ದರು.

ಸಿದ್ದಾಪುರ:- ಸ್ಥಳೀಯ ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಯವರು ಪ್ರಕೃತಿ ವಿಕೋಪದಲ್ಲಿ ಪರಿಹಾರ ನೀಡುವಲ್ಲಿ ನಮ್ಮ ಮಡಿವಾಳ ಜಾತಿಯವರಿಗೆ ತಾರತಮ್ಯ ಮಾಡಿದ್ದಾರೆ. ತಮ್ಮ ಹವ್ಯಕ ಜಾತಿಯವರಿಗೆ ಮುತುವರ್ಜಿ ವಹಿಸಿ ತಕ್ಷಣದಲ್ಲಿ ಪರಿಹಾರ ನೀಡಿದ್ದಾರೆ. ಶಾಸಕರು ಆಯ್ಕೆಯಾಗಲು ನಮ್ಮ ಮಡಿವಾಳರು ಮತ ಹಾಕಿದ್ದಾರೆ. ಆದರೆ ತಮ್ಮ ಜಾತಿಯವರಿಗೆ ಇರುವ ಕಾಳಜಿ ನಮಗೇ ಕಿಲ್ಲಾ ಎಂದು ಡಿಸಿಸಿ ಸದಸ್ಯ ಶ್ರೀನಿವಾಸ್ ಜಿಡ್ಡಿ ಪ್ರಶ್ನಿಸಿದ್ದಾರೆ.
ಅವರು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ
ಈ ವರ್ಷ ಸರಕಾರ ಪ್ರಕೃತಿ ವಿಕೋಪ ಪೀಡಿತ ತಾಲೂಕು ಎಂದು ಘೋಷಣೆ ಮಾಡದಿದ್ದರೂ, ಆ ಸಂದರ್ಭದಲ್ಲಿ ಮಳೆ ಹೆಚ್ಚಾಗದಿದ್ದರೂ, ಹಳ್ಳದಲ್ಲಿ ಅತ್ಯಂತ ಕಡಿಮೆ ನೀರು ಹರಿಯುತ್ತಿರುವ ಸಂದರ್ಭದಲ್ಲಿ ತೋಟ ಕಾಲುಸಂಕದಿಂದ ಕಾಲು ಜಾರಿ ಹೊಳೆಯಲ್ಲಿ ಬಿದ್ದು ಮೃತಪಟ್ಟ ತಾರೀಸರ ಗ್ರಾಮದ ಪರಮೇಶ್ವರ ಕೃಷ್ಣಪ್ಪ ಹೆಗಡೆ ಯವರ ಕುಟುಂಬಕ್ಕೆ ಕಾಗೇರಿಯವರು ಮುತವರ್ಜಿ ವಹಿಸಿ ಸರ್ಕಾರದಿಂದ ತಕ್ಷಣ 5 ಲಕ್ಷ ರೂಪಾಯಿ ಪರಿಹಾರ ಹಣ ಬಿಡುಗಡೆ ಮಾಡಿಸಿದ್ದಾರೆ.
ಕಾಗೇರಿಯವರು ಸ್ವತಃ ಮುತವರ್ಜಿ ವಹಿಸಿ ಪರಿಹಾರ ಕೊಡಿಸಿದ್ದಾರೆ. ಇದಕ್ಕೆ ನಮ್ಮ ಸ್ವಾಗತವಿದೆ.
ಆದರೆ ಕಳೆದ ವರ್ಷದಲ್ಲಿ ಪ್ರಕೃತಿ ವಿಕೋಪ ತಾಲೂಕು ಎಂದು ಘೋಷಣೆ ಯಾಗಿದ್ದಾಗ ಮುಟ್ಟಳ್ಳಿ ಗ್ರಾಮದ ಕಂಚಿ ಮನೆ ಭಂಡಾರ ಕೇರಿಯ ನಿವಾಸಿ ನಾಗರಾಜ್ ಮಡಿವಾಳರವರ ಮನೆಗೆ ಧರೆ ಕುಸಿತವಾಗಿ ಬಾಗಿಲು ಚೌಕಟ್ಟು ಜಾರಿ ಅವರ ಮಗಳಾದ ಕುಮಾರಿ ದೀಕ್ಷಾ ನಾಗರಾಜ್ ಮಡಿವಾಳ ರವರ ಮೇಲೆ ಬಿದ್ದು ಬಾಲಕಿ ಮೃತಪಟ್ಟಿದ್ದರು. ಮಾನವೀಯತೆಯಿಂದ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಇದೇ ಕಾಳಜಿಯಿಂದ ತಕ್ಷಣದಲ್ಲಿ ಅವಳಿಗೆ ಪ್ರಕೃತಿ ವಿಕೋಪ ಅಡಿಯಲ್ಲಿ ಪರಿಹಾರ ನೀಡಬಹುದಾಗಿತ್ತು. ಆದರೆ ಅವರಿಗೆ ಪರಿಹಾರವಾಗಲಿ, ಮನೆ ಕಟ್ಟಿಕೊಳ್ಳಲು ಅವರ ಮನೆಯವರಿಗಾಗಲಿ ಪ್ರಕೃತಿ ವಿಕೋಪ ದಡಿಯಲ್ಲಿ ಇನ್ನೂ ತನಕ ಪರಿಹಾರ ನೀಡಲಿಲ್ಲ. ಇದರಲ್ಲಿ ಜಾತಿ ರಾಜಕಾರಣ ಎದ್ದು ಕಾಣುತ್ತಿದೆ.




ಶಾಸಕರು ಮುತುವರ್ಜಿ ವಹಿಸಿ ಪುನರ್ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಬೇಕಿತ್ತು. ಅವಳು ಧರೆ ಕುಸಿದಿದ್ದರಿಂದ ಬಾಗಿಲು ಬಡಿದು ಮೃತಪಟ್ಟಿದ್ದಾಳೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಅಧಿಕಾರಿಗಳ ಸಭೆಯಲ್ಲಿ ಮಾನವೀಯತೆ ದೃಷ್ಟಿಯಿಂದ ಪರಿಹಾರ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸುವ ಶಾಸಕರ ಮಾನವೀಯತೆ ಸಭೆಯಲ್ಲಿ ಮಾತ್ರವೇ?. ತಮ್ಮ ಜಾತಿಯವರಿಗೆ ಮಾತ್ರವೇ ಮಾನವೀಯತೆ ದೃಷ್ಟಿಯಿಂದ ಪರಿಹಾರ ನೀಡಬೇಕು ಎಂದರ್ಥವೇ?. ಎಂದು ದೂರಿದ ಅವರು ಎಲ್ಲಾ ಜಾತಿಯವರಿಗೂ ಇದೇ ಕಾಳಜಿ ಮಾನವೀಯತೆ ಇರಬೇಕು. ಶಾಸಕರು ಈ ಪ್ರಕರಣವನ್ನು ಪುನರ್ ಪರಿಶೀಲಿಸಿ ಕುಮಾರಿ ದೀಕ್ಷಾ ನಾಗರಾಜ್ ಮಡಿವಾಳ ಕುಟುಂಬಕ್ಕೆ ಪ್ರಕೃತಿ ವಿಕೋಪ ದಡಿಯಲ್ಲಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಸುರೇಂದ್ರ ಗೌಡ, ಗಂಗಾಧರ ಮಡಿವಾಳ, ವಿಶ್ವ ಮಡಿವಾಳ, ಮುಂತಾದವರು ಇದ್ದರು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *