ಏಸೂರು ಮರೆತರೂ ಈಸೂರು ಮರೆಯುವಂತಿಲ್ಲ…

ಭಾರತದ ಸ್ವಾತಂತ್ರ್ಯ ಹೋರಾಟ,ಅಸ್ಪ್ರಶ್ಯತೆ ನಿವಾರಣೆ,ಸಾಮಾಜಿಕ ಅನಿಷ್ಟಗಳ ವಿರುದ್ಧದ ಹೋರಾಟದಲ್ಲಿ ಮಹತ್ಮಾಗಾಂಧಿಯವರ ಹೆಸರು ಚಿರಸ್ಥಾಯಿ.ಹಿಂದಿನ ಶತಮಾನದಲ್ಲಿ ಜಾಗತಿಕ ನಾಯಕರಾದ ಭಾರತೀಯ ಯಾರು ಎಂದರೆ ಅದಕ್ಕೆ ಉತ್ತರ ಗಾಂಧಿ ಎನ್ನುವ ನಿಜ ಫಕೀರನ ಹೆಸರು ಬರುವುದು ಪಕ್ಕಾ. ಇಂಥ ಗಾಂಧಿ ಎಲ್ಲೋ ಕೂತು, ಯಾವುದೋ ಊರಿನಲ್ಲಿ ಹೋರಾಟ ಮಾಡುತ್ತಾ ಕರೆ ಕೊಟ್ಟರೆ ಇಡೀ ಭಾರತ ಆ ಕರೆಗೆ ಓಗುಡುತಿತ್ತು. ಇಂಥದ್ದೇ ಒಂದು ಮಹತ್ವದ ಕರೆ ಕ್ವಿಟ್‌ ಇಂಡಿಯಾ, ೧೯೪೨ ರಲ್ಲಿ ಮಹಾತ್ಮಾಗಾಂಧೀಜಿ ಬ್ರಟೀಷರೇ ಭಾರತ ಬಿಟ್ಟು ತೊಲಗಿ ಎಂದಾಗ ಎದ್ದದ್ದು ಸುನಾಮಿ.

ದೇಶಕ್ಕೆ ದೇಶವೇ ಎದ್ದು ನಿಂತು ಬ್ರಟೀಷರಿಗೆ ಕ್ವಿಟ್‌ ಇಂಡಿಯಾ ಎಂದಿತು. ಆಗ ಮೈಸೂರು ಸಂಸ್ಥಾನದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಪುಟ್ಟ ಗ್ರಾಮ ಈಸೂರು ೨೦೦ ಜನ ಹೋರಾಟಗಾರರೊಂದಿಗೆ ಬ್ರಿಟೀಷರ ವಿರುದ್ಧ ಹೂಂಕರಿಸಿತು. ಅದು ೧೯೪೨ ರ ಸೆಪ್ಟೆಂಬರ್‌ ೨೭ ರ ದಿನ ಬ್ರಿಟೀಷ್‌ ಸರ್ಕಾರದ ಒಬ್ಬ ಅಮಲ್ಧಾರ ಮತ್ತು ಸಬ್‌ ಇನ್‌ ಸ್ಪೆಕ್ಟರ್‌ ದಬ್ಬಾಳಿಕೆ ವಿರುದ್ಧ ಸಿಡಿದೆದ್ದು ಅವರನ್ನು ಕೊಂದೇ ಬಿಟ್ಟರು.

ಬ್ರಟೀಷರಿಗೆ ತೆರಿಗೆ ಕೊಡುವುದಿಲ್ಲ ಎಂದು ಪ್ರಾರಂಭವಾದ ಸ್ಥಳಿಯರ ಚಳವಳಿ ಈಸೂರನ್ನು ಸ್ವತಂತ್ರ ಗ್ರಾಮ ಎಂದು ಘೋಶಿಸುವ ವರೆಗೆ ಮುಂದುವರಿಯಿತು. ಮಾರನೇ ದಿನ ಸೆ.೨೮ ಬ್ರಟೀಷ್‌ ಸೇನೆ ಈಸೂರಲ್ಲಿ ದಂಗೆ ಮಾಡಿ ಹೋರಾಟಗಾರರನ್ನು ಹೊಡೆದು ಓಡಿಸಿ ಮಹಿಳೆಯರ ಮೇಲೆ ಅತ್ಯಾಚಾರಕ್ಕೂ ಮುಂದಾದರು. ಇದೇ ದಿನ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ೨೦೦ ಜನರಲ್ಲಿ ೫ ಜನರನ್ನು ಗಲ್ಲಿಗೇರಿಸಲಾಯಿತು.

೨೫ ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಇದು ಈಸೂರು ದಂಗೆ, ಮಾರಣಹೋಮದ ಕತೆ. ಅಂದು ಜೀವತೆತ್ತ ಕೆ.ಗುರಪ್ಪ,ಮಲ್ಲಪ್ಪ,ಸೂರ್ಯನಾರಾಯಣ ರಾವ್‌, ಹಾಲಪ್ಪ ಸೇರಿದ ೫ ಜನ ಮಣ್ಣು ಸೇರಿದರು ಉಳಿದ ೨೫ ಜನರು ಜೀವಿತಾವಧಿ ಶಿಕ್ಷೆಗೊಳಗಾಗಿ ಜೈಲಿನಲ್ಲಿದ್ದವರು ಸ್ವಾತಂತ್ರ್ಯಾ ನಂತರ ಮರಳಿ ಮನೆ ಸೇರಿದರು ಈ ಹೋರಾಟ ಭಾರತದ ಸ್ವಾತಂತ್ರ್ಯ ಹೋರಾಟದ ಮೈಲುಗಲ್ಲು. ಪರಕೀಯ ಆಡಳಿತದ ಪರತಂತ್ರದಿಂದ ಸ್ವತಂತ್ರ ಗ್ರಾಮವಾದ ಈಸೂರು ಹೀಗೆ ಸ್ವಯಂ ಸ್ವತಂತ್ರ ಗ್ರಾಮ ಎಂದು ಘೋಶಿಸಿಕೊಂಡ ಮೊದಲ ಊರು ಈ ಈಸೂರು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *