ಮಳೆಹಾನಿಯಿಂದ ಕಂಗೆಟ್ಟ ರೈತ,ವಿಶೇಶ ಪ್ಯಾಕೇಜ್‌ ಗೆ ಆಗ್ರಹ

ಅರ್ಧಕ್ಕರ್ಧ ನಾಟಿ ಮಾಡದ ಭತ್ತದ ಪ್ರದೇಶ, ಮದ್ದು ಕಾಣದ ಅಡಿಕೆ ತೋಟ, ಮಳೆಯಿಂದ ಆನೆ ಹೊಕ್ಕಂತಾದ ಬಾಳೆ ಬೆಳೆಯುವ ಪ್ರದೇಶ ಈ ವಿಚಿತ್ರ ಸನ್ನಿವೇಶಕ್ಕೆ ಮೂಖಾಮುಖಿಯಾದ ರೈತ ಸರ್ಕಾರದ ಬೆಳೆವಿಮೆ,ಹವಾಮಾನ ಆಧಾರಿತ ಬೆಳೆವಿಮೆಯ ಪರಿಹಾರದ ನಿರೀಕ್ಷೆಯಲ್ಲಿದ್ದಾನೆ.

ತುಸು ಕಡಿಮೆಯಾದ ಕರಾವಳಿ,ಮಲೆನಾಡಿನ ಮಳೆ ಸ್ಥಳಿಯರಿಗೆ ಹಿತಾನುಭವ ನೀಡತೊಡಗಿದೆ. ಈ ವರ್ಷಾವಧಿಗೆ ಮೊದಲೇ ಪ್ರಾರಂಭವಾಗಿದ್ದ ಮುಂಗಾರು ಮಳೆ ಕೃಷಿಕರಿಗೆ ಗೊಂದಲ ಹುಟ್ಟಿಸಿತ್ತು. ಬಿತ್ತನೆಗೆ ಅನುಕೂಲವಾಗದೆ ನಂತರ ಮಳೆಯ ಆರ್ಭಟದಲ್ಲಿ ಕೃಷಿಕ್ಷೇತ್ರ ಹಸನು ಮಾಡಲಾರದೆ ಕಂಗೆಟ್ಟಿದ್ದ ರೈತನಿಗೆ ಜುಲೈ,ಆಗಸ್ಟ್‌ ನ ಮಳೆ ಸಂಕಷ್ಟ ತಂದಿಟ್ಟಿತ್ತು.ಜುಲೈ ತಿಂಗಳಲ್ಲಿ ಭತ್ತದ ಬಿತ್ತನೆ, ನಾಟಿ ಕೆಲಸ ಮಾಡುತಿದ್ದ ರೈತರಿಗೆ ಈ ವರ್ಷದ ಮಳೆ ಈ ಕೆಲಸಗಳಿಗೆ ಅನುಕೂಲ ಮಾಡಿಕೊಡಲಿಲ್ಲ.


ಇದೇ ಅವಧಿಯಲ್ಲಿ ಅಡಿಕೆ ಗೊನೆಗಳಿಗೆ ಕೊಳೆ ಮದ್ದು ಸಿಂಪಡಿಸುತಿದ್ದ ಅಡಿಕೆ ಬೆಳೆಗಾರರಿಗೆ ಅವಶ್ಯ ಸಮಯದಲ್ಲಿ ಅಡಿಕೆಗೆ ಮದ್ದು ಸಿಂಪಡನೆ ಮಾಡಲು ಅನುಕೂಲವಾಗಲಿಲ್ಲ. ಆಗಸ್ಟ್‌ ತಿಂಗಳ ಮಧ್ಯಾಂತರದ ನಂತರ ನಿಂತು ನೋಡಿದರೆ ಈ ವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ವಾಡಿಕೆಗಿಂತ ೨೫ ಶೇ ಕಡಾ ಹೆಚ್ಚುವರಿ ಮಳೆ ಈಗಾಗಲೇ ಸುರಿದಿದೆ. ಪ್ರತಿವರ್ಷ ಈ ಅವಧಿಯಲ್ಲಿ ನೂರಕ್ಕೆ ಪ್ರತಿಶತ ೯೦ ರಷ್ಟು ಬಿತ್ತನೆಯಾಗುತಿದ್ದ ಭತ್ತದ ಬೆಳೆ ಪ್ರದೇಶದಲ್ಲಿ ಈ ವರ್ಷ ಅರ್ಧಕ್ಕರ್ಧ ಬಿತ್ತನೆ,ನಾಟಿ ಕೆಲಸ ಮುಗಿದಿಲ್ಲ.


ಆಗಷ್ಟ್‌ ತಿಂಗಳಲ್ಲಿ ನೂರಕ್ಕೆ ನೂರರಷ್ಟು ಕೊಳೆ ಮದ್ದು ಸಿಂಪಡಿಸುತಿದ್ದ ಅಡಿಕೆ ಬೆಳೆಗಾರ ಈ ವರ್ಷ ಸೂಕ್ತ ಸಮಯದಲ್ಲಿ ಮದ್ದು ಸಿಂಪಡಣೆ ಮಾಡದೆ ಅಡಿಕೆಗೊನೆಗಳು ಕೊಳೆಗೆ ತುತ್ತಾಗಿವೆ.


ಅವಶ್ಯ,ಅಗತ್ಯ ಸಮಯದಲ್ಲಿ ಕೃಷಿ ಚಟುವಟಿಕೆಗಳಿಗೆ ಅಡ್ಡಿ ಮಾಡಿದ ಮಳೆ ಈಗ ತುಸು ನಿಂತಿದೆ. ಆದರೆ ವಿಳಂಬವಾದ ಕೃಷಿ ಚಟುವಟಿಕೆ ಈ ವರ್ಷಕ್ಕೆ ಹಾನಿಯ ಮುನ್ಸೂಚನೆ ನೀಡಿದೆ.
ಬಿತ್ತನೆಯಾಗದ ಭತ್ತ ದ ಗದ್ದೆಗಳು, ಮದ್ದು ಹೊಡೆಯದ  ಅಡಿಕೆ ತೋಟಗಳು ಈ ವರ್ಷ ರೈತನ ಕೈ ಹಿಡಿಯುವ ಸಾಧ್ಯತೆ ಕ್ಷೀಣಿಸಿದೆ.ಹಿಂಗಾರು ಮಳೆಯ ಈ ಅವಧಿಯಲ್ಲಿ ಪ್ರತಿವರ್ಷ ಖುಷಿಯಿಂದ ಇರುತಿದ್ದ ರೈತ ಈ ವರ್ಷ ಮುಂದೇನು ಎನ್ನುವ ಆತಂಕದಲ್ಲಿದ್ದಾನೆ. ವಾರ್ಷಿಕ ಕೃಷಿ ಚಟುವಟಿಕೆಗಳ ಸರಾಸರಿ ಪ್ರಗತಿ ಲೆಕ್ಕದಲ್ಲಿ ಕೂಡಾ ಸರ್ಕಾರದ ವರದಿ ನಿರಾಶಾದಾಯಕವಾಗಿದೆ.


ಅರ್ಧಕ್ಕರ್ಧ ನಾಟಿ ಮಾಡದ ಭತ್ತದ ಪ್ರದೇಶ, ಮದ್ದು ಕಾಣದ ಅಡಿಕೆ ತೋಟ, ಮಳೆಯಿಂದ ಆನೆ ಹೊಕ್ಕಂತಾದ ಬಾಳೆ ಬೆಳೆಯುವ ಪ್ರದೇಶ ಈ ವಿಚಿತ್ರ ಸನ್ನಿವೇಶಕ್ಕೆ ಮೂಖಾಮುಖಿಯಾದ ರೈತ ಸರ್ಕಾರದ ಬೆಳೆವಿಮೆ,ಹವಾಮಾನ ಆಧಾರಿತ ಬೆಳೆವಿಮೆಯ ಪರಿಹಾರದ ನಿರೀಕ್ಷೆಯಲ್ಲಿದ್ದಾನೆ. ಆದರೆ ಈ ವಿಮಾ ಪರಿಹಾರಗಳು ಸಿಗುವುದು ಮುಂದಿನ ವರ್ಷಕ್ಕೆ ಈ ಅನಿವಾರ್ಯತೆಯಲ್ಲಿ ಸರ್ಕಾರ ಬೆಳೆನಷ್ಟದ ಸರ್ಕಾರದ ವಿಶೇಶ ಪ್ಯಾಕೇಜ್‌ ಗೆ ಆಗ್ರಹಿಸಿದ್ದಾನೆ.ಸರ್ಕಾರ ರೈತನ ಸಂಕಷ್ಟ ಅರಿತುಪ್ಯಾಕೇಜ್‌ ನ ಪರಿಹಾರದ ಭರವಸೆ ನೀಡುವುದೇ ಈಗಿರುವ ತಾತ್ಕಾಲಿಕ ಪರಿಹಾರವಾಗಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *