ಸಾಮಾಜಿಕ ಅಶಾಂತಿಗೆ ಗುದ್ದು, ವಿಶ್ವಶಾಂತಿಯ ಮದ್ದು ದೇವರಾಜ್‌ ಅರಸು ಸಾಧನೆ achivement of d.devaraj arasu

೯ನೇ ವರ್ಷದಲ್ಲಿ ತಂದೆಯನ್ನು ಕಳೆದುಕೊಂಡ ಹಡುಗ ಕೃಷಿ ಕೆಲಸ ಮಾಡುತ್ತಾ ಸಣಕಲನಾಗಿ ಬೆಳೆಯುತ್ತಿರುವಾಗ ಸಹಪಾಠಿಯೊಂದಿಗೆ ಜಗಳವಾಡಿ ಹೊಡೆತ ತಿಂದಾಗ ನಾನು ಬಲಿಷ್ಠನಾಗಿದ್ದರೆ ಇವನಿಂದ ಹೊಡೆತ ತಿನ್ನುವ ದರ್ದು ಬರುತಿತ್ತೇ ಎಂದು ಯೋಚಿಸಿ ಕುಸ್ತಿ ಪಯಲ್ವಾನ್‌ ಆಗಿ ಮುಂದೆ ಪ್ರಬಲ ರಾಜಕೀಯ ಶಕ್ತಿಗಳೆದುರು ಮುಖ್ಯಮಂತ್ರಿಯಾಗಿ ತಾನು ರಾಜಕೀಯ ಜಗಜಟ್ಟಿ ಕೂಡಾ ಎಂದು ಸಾಬೀತು ಮಾಡಿದವರು ದೇವರಾಜ್‌ ಅರಸು.

ದೇವರಾಜ್‌ ಅರಸು ಜಮೀನ್ಧಾರರಾಗಿದ್ದ ಮನೆತನದಲ್ಲಿ ಮೈಸೂರು ಜಿಲ್ಲೆ ಹುಣಸೂರಿನ ಕಲ್ಲಹಳ್ಳಿಯಲ್ಲಿ ಹುಟ್ಟಿದಾಗ ಕುಟುಂಬಕ್ಕೆ ಕೃಷಿ ಜಮೀನಿತ್ತಾದರೂ ಸ್ಥಿತಿವಂತಿಕೆ ಇರಲಿಲ್ಲ. ಬಡತನದಲ್ಲಿ ಹುಟ್ಟಿ ಪದವಿ ಪಡೆದು ಗ್ರಾಮದ ಪಂಚಾಯ್ತಿ ನಡೆಸುವ ಮಟ್ಟಕ್ಕೆ ಬೆಳೆದು ಹೆಸರು ಮಾಡುತಿದ್ದಾಗ ಮೈಸೂ ರಿನ ಪ್ರಜಾಪ್ರತಿನಿಧಿ ಸಭೆಗೆ ೧೯೪೧ ರಲ್ಲಿ ಆಯ್ಕೆಯಾಗುತ್ತಾರೆ. ನಂತರ ೧೯೪೫ ರಲ್ಲಿ ನೂರೈವತ್ತು ರೂಪಾಯಿ ಠೇವಣಿ ನೀಡಲು ಹಣವಿಲ್ಲದ ದೇವರಾಜ್‌ ಅರಸುರನ್ನು ಮೈಸೂರು ಪ್ರಜಾಪ್ರತಿನಿಧಿ ಸಭೆ ನಂತರ ಮೈಸೂರು ರಾಜ್ಯದ ವಿಧಾನಸಭೆಗೆ ಕಳುಹಿಸಿದ್ದು ಹುಣಸೂರಿನ ಹೆಚ್ಚುಗಾರಿಕೆ.

೧೯೫೨ ರಲ್ಲಿ ಹುಣಸೂರಿನ ಶಾಸಕರಾಗಿದ್ದ ದೇವರಾಜು ಅರಸು ಮೈಸೂರು ಸಂಸ್ಥಾನ, ಜಮೀನ್ಧಾರಿಕೆ, ರಾಜಪ್ರಭುತ್ವದ ವಿರುದ್ಧ ಸೆಣಸುತ್ತಾ ೧೯೭೨ ರಲ್ಲಿ ಮುಖ್ಯಮಂತ್ರಿಯಾಗುವ ವರೆಗೆ ದೇವರಾಜ್‌ ಅರಸು ಸವೆಸಿದ್ದು ಹೋರಾಟದ ರಾಜಕೀಯ ಬದುಕನ್ನು.

ಸ್ವಾತಂತ್ರ್ಯ ಪೂರ್ವಕಾಲದಿಂದ ಜನಪ್ರತಿನಿಧಿಯಾಗುತ್ತಾ ನಂತರ ಸಚಿವ, ಮುಖ್ಯಮಂತ್ರಿ ಆಗುವವರೆಗೆ ಸಮಾಜದ ಎಲ್ಲಾ ಜನವರ್ಗಗಳನ್ನು ಗಮನಿಸುತ್ತಾ ಬಂದಿದ್ದ ದೇವರಾಜ್‌ ಅರಸು ಅವರಿಗೆ ರಾಜಕೀಯ ಪ್ರಾತಿನಿಧ್ಯ ಇಲ್ಲದ ತಬ್ಬಲಿ ಜಾತಿಗಳ ಬಗ್ಗೆ ಕಳಕಳಿ ಹುಟ್ಟಲು ಕಾರಣವಾದದ್ದು ಲೋಹಿಯಾವಾದ ಮತ್ತು ಸಮಾಜವಾದ.

ಕಾಂಗ್ರೆಸ್‌ ನಲ್ಲಿದ್ದು ಸಮಾಜವಾದ ಲೋಹಿಯಾವಾದಗಳ ಅಧ್ಯಯನ ನಡೆಸಿದ್ದ ದೇವರಾಜ್‌ ಅರಸು ಭೂ ಸುಧಾರಣೆ, ಸ್ಟೈಪಂಡ್ರಿ ಯೋಜನೆ ಜಾರಿಮಾಡಬೇಕಾದಾಗ ನೆರವಿಗೆ ಬಂದಿದ್ದು ಇದೇ ಓದು, ಗೃಹಿಕೆ.

ಭೂಮಾಲಿಕರು,ಜಮೀನ್ಧಾರರ ಒಡನಾಟದ ಕಾಂಗ್ರೆಸ್‌ ಮುಖಂಡ ದೇವರಾಜ್‌ ಅರಸು ಮುಖ್ಯಮಂತ್ರಿಯಾಗಿ ೧೯೭೨ ರಲ್ಲಿ ಊಳುವವನೇ ನೆಲದೊಡೆಯ, ಪದವಿಧರ ನಿರುದ್ಯೋಗಿಗಳಿಗೆ ಸ್ಟೈಪಂಡರಿ ಯೋಜನೆ, ಗ್ರಾಮೀಣ ಬಡವರಿಗೆ ಭಾಗ್ಯಜ್ಯೋತಿ ಯೋಜನೆ ಜಾರಿಮಾಡದಿದ್ದರೆ ಕರ್ನಾಟಕದ ಸಾಮಾಜಿಕ ವ್ಯವಸ್ಥೆ ನಕ್ಸಲ್‌ ಬರಿ ಚಳವಳಿಯತ್ತ ಮುಖಮಾಡುವ ಅಪಾಯವಿತ್ತು ಎಂದು ಅರಿತಿದ್ದ ದೇವರಾಜ್‌ ಅರಸು ಭಾರತದ ರೈತನಿಗೆ ಭೂಮಿ ಭದ್ರತೆಯ ಭಾವ ನೀಡುವ ಜೊತೆಗೆ ನೆಲದಭಾವನಾತ್ಮಕತೆ ಇಲ್ಲಿಯ ಬಡವರ ಉಸಿರು ಎಂಬುದನ್ನೂ ಅರಿತಿದ್ದರು.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ೧೯೩೮ ರಷ್ಟು ಹಿಂದೆ ಉತ್ತರ ಕನ್ನಡಜಿಲ್ಲೆಯ ಅಂಕೋಲಾದಲ್ಲಿ ರೈತಕೂಟದ ಮೂಲಕ ದಿನಕರ ದೇಸಾಯಿಯವರ ನೇತೃತ್ವದಲ್ಲಿ ರೈತಹೋರಾಟ ಪ್ರಾರಂಭವಾಗಿತ್ತು. ಉತ್ತರ ಕನ್ನಡ ಜಿಲ್ಲೆಯ ಸ್ವಾತಂತ್ರ್ಯ ಚಳವಳಿ, ರೈತ ಹೋರಾಟಗಳಿಂದ ಸ್ಫೂರ್ತಿಗೊಂಡಿದ್ದ ಸಿದ್ಧಾಪುರದ ಹೊಸೂರಿನ ಗಣಪತಿಯಪ್ಪ ಸಾಗರದ ಕಾಗೋಡಿನಲ್ಲಿ ರೈತಸಂಘದ ನೇತೃತ್ವದಲ್ಲಿ ಪ್ರಾರಂಭಿಸಿದ್ದ ಕಾಗೋಡು ಹೋರಾಟಸ್ವಾತಂತ್ರ್ಯಾ ನಂತರ ಪ್ರಾರಂಭಗೊಂಡು ಸಮಾಜವಾದಿಗಳ ಅನುಕಂಪ,ಬೆಂಬಲ ಗಿಟ್ಟಿಸಿತ್ತು.

ಈ ಹೋರಾಟ, ಇದರಿಂದ ಆದ ಸಾಮಾಜಿಕ ಸ್ಥಿತ್ಯಂತರಗಳ ಅರಿವಿದ್ದ ಡಿ.ದೇವರಾಜ್‌ ಅರಸು ಭೂಸುಧಾರಣೆ ಮಸೂದೆ ಜಾರಿ ಮಾಡುವ ಮೂಲಕ ಈ ಹೋರಾಟ ಮತ್ತು ಹೋರಾಟಗಾರರಿಗೆ ಗೌರವ ನೀಡಿದರು. ಈ ಸರ್ಕಾರಿ ಕಾನೂನುಕ್ರಮದ ಜನಪರ ಕಾರ್ಯಕ್ರಮವನ್ನು ಡಾ. ಚಂದ್ರಶೇಖರ್‌ ಕಂಬಾರ್‌ ಕರೆದದ್ದು ಈ ಕಾರ್ಯಕ್ರಮ ಕಾಗೋಡು ಹೋರಾಟದ ತಾರ್ಕಿಕ ಅಂತ್ಯ ಎಂದು. ಒಂದು ಚಳವಳಿ ಸಫಲವಾಗುವುದು ಆ ಹೋರಾಟದ ತಾರ್ಕಿಕ ಅಂತ್ಯ ಎನ್ನುವ ಫಲಿತಾಂಶ ದೇವರಾಜ್‌ ಅರಸು ಕಾರ್ಯಕ್ರಮದ ಹೆಚ್ಚುಗಾರಿಕೆ ಕೂಡಾ.

ದೇವರಾಜ್‌ ಅರಸು ದೀನದುರ್ಬಲರಿಗೆ, ಹಿಂದುಳಿದವರಿಗೆ,ನಿಮ್ನವರ್ಗಗಳಿಗೆ ಸಾಮಾಜಿಕ,ರಾಜಕೀಯ ಸಮಾನತೆಯ ಜೊತೆಗೆ ಆರ್ಥಿಕ ಸಮಾನತೆಯ ಮಹತ್ವವನ್ನು ಪ್ರತಿಪಾದಿಸಿದ್ದರು.ಜೀತಪದ್ಧತಿ ನಿವಾರಣೆ, ನಿರುದ್ಯೋಗ ನಿವಾರಣೆ,ಅಶಕ್ತರ ಸಬಲೀಕರಣದ ಕನಸು ಕಂಡಿದ್ದ ದೇವರಾಜ್‌ ಅರಸು ಸಾಹಿತಿಗಳು, ಸಮಾಜವಿಜ್ಞಾನಿಗಳು ಗುರುತಿಸುವ ಕರ್ನಾಟಕದ ಮಹತ್ವದ ಕೊಡುಗೆಗಳಲ್ಲಿ ದೇವರಾಜ್‌ ಅರಸು ನೇತೃತ್ವದ ಸರ್ಕಾರ ಜಾರಿಮಾಡಿದ ಭೂಸುಧಾರಣೆ ಮತ್ತು ಲಂಕೇಶರ ಗದ್ಯ ಎನ್ನುವುದು. ಕರ್ನಾಟಕದ ಅಸ್ಮಿತೆ,ಐಡೆಂಟಿಟಿ ಕೂಡಾ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *