

ಸಾಯಿಸಮರ್ಥ ಗೆ ಶುಭಹಾರೈಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ …………. ಸಿದ್ದಾಪುರ… ಹಾಳದಕಟ್ಟಾ ನಾಗರಕಟ್ಟೆಯ ಸುವರ್ಣ ಹಾಗೂ ರಜತ ಶಿಲ್ಪಿ ಪ್ರಶಾಂತ್ ಶೇಟ ಮನೆಗೆ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸೌಹಾರ್ದ ಭೇಟಿ ನೀಡಿ ಇತ್ತೀಚಿಗೆ ಬ್ರಹ್ಮೋಪದೇಶ ಪಡೆದ ನಿವೃತ್ತ ಮುಖ್ಯ ಅಧ್ಯಾಪಕರಾದ ಡಿ.ಎನ್.ಶೇಟ್ ಇವರ ಮೊಮ್ಮಗ ಹಾಗೂ ಪ್ರಶಾಂತ್ ಶೇಟ್ ರ ಸುಪುತ್ರ ಚಿ/ ಸಾಯಿಸಮರ್ಥ ಗೆ. ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸ್ಪೀಕರ್ ಬ್ರಹ್ಮೋಪದೇಶ ಪಡೆದ ನಂತರ ಗಾಯತ್ರಿ ಮಂತ್ರ ಜಪ,ಸಂಧ್ಯಾವಂದನೆ ಹಾಗೂ ದೇವರ ಪೂಜಾ ಪಾಠವನ್ನು ವಿದ್ಯಾಭ್ಯಾಸದ ಜೊತೆಗೆ ಪ್ರತಿನಿತ್ಯ ಪಾಲಿಸುವುದರಿಂದ ಮಕ್ಕಳಲ್ಲಿ ಧಾರ್ಮಿಕ ಜ್ಞಾನ ವೃದ್ಧಿಯಾಗಿ ಉಜ್ವಲ ಭವಿಷ್ಯ ನಿರ್ಮಾಣಗೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು .ನಂತರ ಪ್ರಶಾಂತ್ ಶೇಟ್ ತಯಾರಿಸಿದ ರಜತ ಕಲಾಕೃತಿಯನ್ನು ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿದರು .ಈ ಸಂದರ್ಭದಲ್ಲಿ ಶೇಟ್ ಕುಟುಂಬದವರ ಪರವಾಗಿ ಕಾಗೇರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು .
ಈ ಸಮಯದಲ್ಲಿ ಹಿರಿಯರಾದ ವಿಠ್ಠಲ್ ಎನ್.ಶೇಟ್, ಐ.ಕೆ.ನಾಯ್ಕ,ಅಚ್ಚುತ್ ಶಾನಭಾಗ್ , ಶಿರಿಷ್ ವಿ.ಬೆಟಗೇರಿ ,ಪಟ್ಟಣ ಪಂಚಾಯತ್ ಸದಸ್ಯರಾದ ಮಾರುತಿ ನಾಯ್ಕ ಹೊಸೂರು ,ನಂದನ್ ಬೋರ್ಕರ್, ಮತ್ತು ವಾದಿರಾಜ ಡಿ.ಶೇಟ್,ಗಜಾನನ ವಿ.ಶೇಟ್,ನಾಗರಾಜ್ ವಿ.ಶೇಟ್, ಹಾಗೂ ನಾಗದೇವತಾ ಮಹಿಳಾ ಮಂಡಳಿಯ ಸದಸ್ಯರು ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು,

