ಜಾನಪದ,ಎಲ್.ಆರ್.ಹೆಗಡೆ ಎಂಬ ಅಚ್ಚರಿ!

ಏನೂ ಹುಡುಕುತ್ತ ಓದುತ್ತಾ ಹೋಗುತ್ತಿದ್ದೆ . ಆಗ ಕಣ್ಣಿಗೆ ಬಿದ್ದದ್ದು ಡಾ. ಎಲ್ ಆರ್ ಹೆಗಡೆ ಆವರು ಬರೆದ ದೀರ್ಘ ಪತ್ರ. ಅವರು ನನಗೆ ಪತ್ರ ಬರೆದಿದ್ದಾರೆ ಎನ್ನುವುದೇ ಮರೆತು ಹೋಗಿತ್ತು. ಅದು ೧೦.೪.೧೯೯೦ ರಂದು ಬರೆದ ಪತ್ರ. ನನ್ನ “ಜಾನಪದ ಶೋಧ” ಕೃತಿ ಪ್ರಕಟವಾದ ವರ್ಷ ಆ ಕೃತಿಯನ್ನು ಅವರಿಗೆ ಕಳುಹಿಸಿಕೊಟ್ಟಿದ್ದೆ. ಅದಕ್ಕೆ ಪ್ರತಿಯಾಗಿ ಬರೆದ ಪತ್ರವಿದು.

ಸ್ವಾರಸ್ಯವೆಂದರೆ ಈ ಪತ್ರದಲ್ಲಿ ಅವರು ನಾನು ಕಳುಹಿಸಿದ “ಜಾನಪದ ಶೋಧ” ಪುಸ್ತಕದ ಬಗ್ಗೆ ಬರೆದದ್ದಕ್ಕಿಂತ ಅಧಿಕವಾಗಿ ಇದಕ್ಕಿಂತಲೂ ಮೊದಲು ಪ್ರಕಟವಾದ “ಜಾನಪದ ವ್ಯಾಸಂಗ” ಎನ್ನುವ ಕೃತಿ ಗೆ ಸಂಬಂಧಿಸಿ ಹೆಚ್ಚು ಬರೆದಿದ್ದಾರೆ ! ಆ ಪುಸ್ತಕ ನಾನು ಕಳಿಸಿದ್ದಲ್ಲ!!

ಅವರ ಪುಸ್ತಕಗಳ ರಾಶಿಯಲ್ಲಿ ಸಿಕ್ಕಿಬಿದ್ದ ಈ ಪುಸ್ತಕವನ್ನು ಪ್ರಯಾಸದಿಂದ ಹುಡುಕಿ ತೆಗೆದು ಸಂಪೂರ್ಣವಾಗಿ ಮತ್ತೆ ಆ ಪುಸ್ತಕ ಓದಿ ಬರೆದದ್ದು ನೋಡಿ ನನಗೆ ಆಶ್ಚರ್ಯವೆನಿಸಿತು. ಪುಸ್ತಕ ಹುಡುಕಲು ಪಟ್ಟ ಪ್ರಯಾಸದ ಬಗ್ಗೆಯೂ, ಮತ್ತು ಆ ಜಾನಪದ ವ್ಯಾಸಂಗ ಕೃತಿ ನನ್ನಲ್ಲಿ ಹೇಗೆ ಬಂತು? ಎಲ್ಲಿಂದ ಬಂತು?ಯಾಕೆ ಬಂತು? ಯಾವಾಗ ಬಂತು?ಎನ್ನುವುದರ ಬಗ್ಗೆ ಸಹಜ ತರ್ಕದಿಂದ ಬರೆದಿದ್ದಾರೆ.

ಪತ್ರಿಕೆಗಳಿಗೆ ಪುಸ್ತಕದ ಬಗ್ಗೆ ವಿಮರ್ಶೆ ಬರೆಯುವಾಗ ಹತ್ತು ರೂ ಕೊಡುತ್ತಿದ್ದುದನ್ನು ಸ್ಮರಿಸಿಕೊಂಡಿದ್ದಾರೆ. ಬಹುಶಃ ವಿಮರ್ಶೆಗಾಗಿ ಬಂದ ಪುಸ್ತಕ ಇರಬಹುದು ಎಂದುಕೊಂಡೆ, ಅದೂ ಅಲ್ಲ. ಸಂಕ್ರಮಣ ಪತ್ರಿಕೆ ಯಿಂದ ಬಂದಿರಬೇಕು ಎಂದರೆ ಅದೂ ಅಲ್ಲ. ಅಕಾಡೆಮಿಯಿಂದ ಗ್ರಂಥ ಬಹುಮಾನದ ಪರಿಶೀಲನೆಗಾಗಿ ಬಂದ ಪುಸ್ತಕವೇನೂ ಎಂದುಕೊಂಡರೆ ಅದೂ ಅಲ್ಲ. ಇಷ್ಟೆಲ್ಲಾ ಆ ಪುಸ್ತಕದ ಬಗ್ಗೆ ಚಿಂತಿಸಲು ಕಾರಣ, ಆ ಪುಸ್ತಕದಲ್ಲಿ ವಿಮರ್ಶೆಗಾಗಿ ಎಂಬ ಕೈ ಬರಹವಾಗಲಿ, ಬಹುಮಾನಕ್ಕೆ ಎನ್ನುವ ಬರಹವಾಗಲಿ ಇಲ್ಲದೇ ಹೋದದ್ದು. ಕೊನೆಯಲ್ಲಿ ಬಹುಶಃ ಈ ಪುಸ್ತಕ ನಾನು ಕೊಂಡಿರಬೇಕು ಎನ್ನುವ ವಿಚಾರಕ್ಕೆ ಬರುತ್ತಾರೆ. ಆ ಪುಸ್ತಕ ನಾನವರಿಗೆ ಕಳಿಸಿದ್ದಲ್ಲ ಎನ್ನುವುದು ನಿಜ.

ಡಾ. ಎಲ್ ಆರ್ ಹೆಗಡೆ ಅವರು ನಾಡಿನ ಮಹತ್ವದ ಜಾನಪದ ವಿದ್ವಾಂಸರಲ್ಲಿ ಅವರೂ ಒಬ್ಬರು. ಅವರ ಕೃತಿಗಳನ್ನು ನಾನು ಒಬ್ಬ ಕಟ್ಟಾ ವಿದ್ಯಾರ್ಥಿಯಾಗಿ ಓದಿದ್ದೇನೆ. ನನ್ನ ಜಾನಪದದ ಸಂಶೋಧನೆ ವಿಮರ್ಶೆಯ ಸಂದರ್ಭದಲ್ಲಿ ಇವರ ಕೃತಿಗಳನ್ನು ಬಳಸಿಕೊಂಡಿದ್ದೇನೆ. ಬಹಳ ಅಪರೂಪದ ಉತ್ತರ ಕನ್ನಡ ಜಿಲ್ಲೆಯ ಜಾನಪದವನ್ನು ಸಂಗ್ರಹಿಸಿಕೊಟ್ಟಿದ್ದಾರೆ. ಬಹುಶಃ ಆ ಜಿಲ್ಲೆಯಲ್ಲಿ ಆದಿವಾಸಿಗಳ ಸಾಹಿತ್ಯಕ್ಕೆ ಬೃಹದಾಕಾರದಲ್ಲಿ ಕೈಹಾಕಿದ ಮೊದಲಿಗರು ಇವರೇ ಎನಿಸುತ್ತದೆ. ಅನಂತರ ಡಾ. ಎನ್ ಆರ್ ನಾಯಕ್ ಅವರು ತೊಡಗಿಸಿಕೊಂಡಿದ್ದಾರೆ .

ಆ ಜಾನಪದ ವ್ಯಾಸಂಗ ಕೃತಿಯ ಬಗ್ಗೆ ಅಷ್ಟೆಲ್ಲಾ ಶೋಧಿಸಲು ಮುಖ್ಯ ಕಾರಣ ನನಗನಿಸಿದ್ದು,ಅವರು ಪುಸ್ತಕಗಳನ್ನು ಪುಕ್ಕಟೆಯಾಗಿ ಪಡೆಯುವದು ಸರಿಯಲ್ಲ ಎಂದು ವಾದಿಸುವವರು. ಅದನ್ನು ಪತ್ರದಲ್ಲೂ ಕಾಣಿಸಿದ್ದಾರೆ. ಪುಸ್ತಕ ಕಾಣಿಕೆಯಾಗಿ ನೀಡುವ ಪರಂಪರೆಯೂ ಸರಿ ಅಲ್ಲ ಎಂದವರು. ಪತ್ರದಲ್ಲಿ ಅವರು ತಮ್ಮ ಶಿಷ್ಯರಾದ ಡಾ. ಎನ್ ಆರ್ ನಾಯಕ್ ಅವರು ಪುಸ್ತಕಗಳನ್ನು ಕೊಡಲು ಬಂದಾಗ, ರಿಯಾಯಿತಿ ಬೆಲೆಯಲ್ಲಿ ಖರೀದಿಸಿದ್ದರ ಬಗ್ಗೆ ದಾಖಲಿಸುತ್ತಾರೆ. ನನ್ನ “ಜಾನಪದ ಶೋಧ” ಪುಸ್ತಕ ಅವರಿಗೆ ಕಳುಹಿಸಿಕೊಟ್ಟದ್ದು ಇಷ್ಟೆಲ್ಲ ವಿಚಾರ ಮಾಡಿ ಶೋಧಿಸಲು ಒತ್ತಾಯಿಸಿದೆ ಮತ್ತು ಒಳಗೊಳಗೇ ಕಸಿವಿಸಿಗೊಂಡಿದ್ದರ ಅಭಿವ್ಯಕ್ತಿ ಎನಿಸಿತು. ಹಾಗೆಯೇ ಜಾನಪದದ ಪುಸ್ತಕಗಳ ಮಾರಾಟದ ವ್ಯವಸ್ಥೆಯ ಬಗ್ಗೆ, ಬೆಲೆ ಬಗ್ಗೆ, ಓದುಗರ ಮನಸ್ಥಿತಿಯ ಬಗ್ಗೆಯೂ ಬರೆದಿದ್ದಾರೆ.

ಈ ಸ್ವರೂಪದ ಲೇಖಕರು ವಿದ್ವಾಂಸರು ಸಿಕ್ಕುವುದು ತುಂಬಾ ಅಪರೂಪ. ನಾನಂತೂ ದೊಡ್ಡ ಲೇಖಕ ಅಲ್ಲದೇ ಹೋದರೂ ಈ ಸಣ್ಣ ಬರಹಗಾರನಿಗೆ ಅವರು ಕೊಟ್ಟ ಮಹತ್ವ ಮತ್ತು ವ್ಯಯಿಸಿದ ಸಮಯ ನೋಡಿ ನನಗೆ ಅಚ್ಚರಿ ಎನಿಸುತ್ತದೆ. ಇಂಥವರೊಂದಿಗೆ ನಾನೂ ಒಡನಾಡಿದ್ದೇನೆ ಎನ್ನುವುದೇ ಹೆಮ್ಮೆಯ ಸಂಗತಿ. -ಅರವಿಂದ ಮಾಲಗತ್ತಿ (kpc)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

ಸಮಾಜಮುಖಿ ಡಾಟ್‌ ನೆಟ್‌ ಬ್ರೇಕಿಂಗ್……‌ ಅವರಗುಪ್ಪಾದ ಮಹಿಳೆ ಸೊರಬಾದಲ್ಲಿ ಆತ್ಮಹತ್ಯೆ

ಸೊರಬಾದ ವಸತಿನಿಲಯದ ಮುಖ್ಯ ಅಡುಗೆ ಸಿಬ್ಬಂದಿ ಮಹಿಳೆ ವಸತಿ ನಿಲಯದಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಸಿದ್ಧಾಪುರದ ಅವರಗುಪ್ಪಾ ಮೂಲದ ನೇತ್ರಾವತಿ ನಾಯ್ಕ ಆತ್ಮಹತ್ಯೆಗೆ...

ಹೋರಾಟಗಳ ಮೂಲಕ ಸುಧಾರಣೆ ಇಂದಿನ ಅನಿವಾರ್ಯತೆ

ಬಹುಜನ ಚಳವಳಿಗಳಿಗೆ ನಾರಾಯಣ ಗುರುಗಳು ಮತ್ತು ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಚಿಂತನೆಗಳು ಪೂರಕ ಎಂದಿರುವ ಯುವ ಚಿಂತಕ ಲೋಹಿತ್‌ ನಾಯ್ಕ ಈಗಲೂ ಸೈದ್ಧಾಂತಿಕ...

ಅಕ್ರಮ ಮದ್ಯ ಮಾರಾಟ, ಮದ್ಯ ಸೇವಿಸಿ ವಾಹನ ಚಾಲನೆ ನಿಯಂತ್ರಣಕ್ಕೆ ಭೀಮಣ್ಣ ಆದೇಶ

ಶಿರಸಿ-ಸಿದ್ಧಾಪುರಗಳಲ್ಲಿ ಸಾಮಾಜಿಕ ಪಿಡುಗಾಗಿ ಜನರ ಜನಜೀವನಕ್ಕೆ ತೊಂದರೆ ಕೊಡುತ್ತಿರುವ ಅಕ್ರಮ ಮದ್ಯ ಮತ್ತು ಮದ್ಯ ಸೇವಿಸಿ ವಾಹನ ಚಲಾಯಿಸುವ ಬಗ್ಗೆ ಸ್ಥಳೀಯ ಶಾಸಕ ಭೀಮಣ್ಣ...

ಪಿ.ಎಂ.ಶ್ರೀ ಎಲ್.ಕೆ.ಜಿ.ಗೆ ಚಾಲನೆ ನೀಡಿದ ಶಾಸಕ ಭೀಮಣ್ಣ

ಸಿದ್ದಾಪುರ: ತಾಲೂಕಿನ ಕೋಲಶಿರ್ಸಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸಕ್ತ ಸಾಲಿನಿಂದ ಪ್ರಾರಂಭವಾಗಿರುವ ಪಿ.ಎಮ್.ಶ್ರೀ ಪೂರ್ವ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಗೆ ಶಿರಸಿ-ಸಿದ್ದಾಪುರ ಕ್ಷೇತ್ರದ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *