ಒಂದೇ ಗುಂಪಿಗೆ ಮಾನ್ಯತೆ…ಭಾಜಪದ ಕಾಂಗ್ರೆಸ್ ದಾರಿ, ಉ.ಕ.ದಲ್ಲಿ ಬಿ.ಜೆ.ಪಿ. ಆಡಳಿತದ ಫಲಶೃತಿ!?!

ರಾಜಕೀಯದಲ್ಲಿ ಗುಂಪು ಕಟ್ಟುವುದು,ಗುಂಪುಗಾರಿಕೆ ಮಾಡುವುದು ಸಾಮಾನ್ಯ ವಿಚಾರ. ಆದರೆ ಈ ಗುಂಪುಗಾರಿಕೆ ರಾಜಕೀಯ ಪಕ್ಷ, ನಾಯಕರಿಗೆ ಮಾರಕವಾಗುವುದು ಲಾಗಾಯ್ತಿನ ವಾಸ್ತವ. ದೇಶ,ರಾಜ್ಯಗಳಲ್ಲಿ ನಾನಾ ಪಕ್ಷಗಳ ಇಂಥ ಬಣ,ಗುಂಪುಗಳ ಹಲವು ಸುದ್ದಿಗಳಿವೆ. ಆದರೆ ಉತ್ತರ ಕನ್ನಡ ಜಿಲ್ಲೆಯ ರಾಜಕೀಯ ಗುಂಪುಗಾರಿಕೆ ಇಲ್ಲಿಯ ಬಹುಸಂಖ್ಯಾತರಿಗೇ ಮಾರಕವಾಗುತ್ತಿರುವುದಕ್ಕೆ ಅನೇಕ ಉದಾಹರಣೆಗಳಿವೆ.

ಜನತಾ ದಳ ವಿಭಾಗವಾಗಲು ರಾಮಕೃಷ್ಣ ಹೆಗಡೆ ಮತ್ತು ದೇವೇಗೌಡರ ಬಣ ರಾಜಕೀಯ ಕಾರಣ. ಅದಕ್ಕೂ ಮೊದಲು ದೇವ ರಾಜ್‌ ಅರಸು, ಬಂಗಾರಪ್ಪ ಸೇರಿದ ಕೆಲವು ನಾಯಕರ ಬಣ ರಾಜಕೀಯದಿಂದ ಕಾಂಗ್ರೆಸ್‌ ಅನೇಕ ಬಾರಿ ಸೋತಿದೆ.

ಹಿಂದೆ ಜನತಾದಳದಲ್ಲಿದ್ದು ನಂತರ ಕಾಂಗ್ರೆಸ್‌ ಗೆ ಬಂದಿದ್ದ ಮಾಜಿ ಸಚಿವ ಆರ್.ವಿ. ದೇಶಪಾಂಡೆ ಮೂಲಕಾಂಗ್ರೆಸ್‌ ಗೆ ಪರ್ಯಾಯವಾಗಿ ದೇಶಪಾಂಡೆ ಬಣ ರಚಿಸಿಕೊಂಡು ಕಾಂಗ್ರೆಸ್‌ ಗೆಲ್ಲಿಸಿದ್ದಕ್ಕಿಂತ ಸೋಲಿಸಿದ್ದೇ ಹೆಚ್ಚು. ಇದೇ ದಾರಿಯಲ್ಲಿ ಸಾಗಿದ್ದ ಮಾಜಿ ಕೇಂದ್ರ ಸಚಿವೆ ಮಾರ್ಗರೇಟ್‌ ಆಳ್ವ ಕೂಡಾ ತಮ್ಮ ಬಣ ಬೆಳೆಸಲು ಶ್ರಮಿಸಿ ಬಿ.ಜೆ.ಪಿ.ಗೆ ಸಹಕರಿಸಿದ್ದೇ ಹೆಚ್ಚು. ಇಂಥ ಬಣ.ಗುಂಪುಗಾರಿಕೆಯ ರಾಜಕಾರಣದಿಂದ ಉತ್ತರ ಕನ್ನಡ ಜಿಲ್ಲೆಯ ಅನೇಕ ಉತ್ತಮ ನಾಯಕರಿಗೆ ಅನ್ಯಾಯವಾಗಿದೆ. ಅವರಲ್ಲಿ ದೇವರಾಯ ನಾಯ್ಕ, ಪ್ರಭಾಕರ ರಾಣೆ, ಪ್ರಮೋದ್‌ ಹೆಗಡೆ, ಭೀಮಣ್ಣ ನಾಯ್ಕ ಪ್ರಮುಖರು!

ಇಂಥ ಇತಿಹಾಸದ ರಾಜಕೀಯ ಚರಿತ್ರೆಯ ಉತ್ತರ ಕನ್ನಡದಲ್ಲಿ ಈಗ ಬಿ.ಜೆ,ಪಿ,ಯ ಬಣ ರಾಜಕೀಯ ವಿಜೃಂಬಿಸುತ್ತಿದೆ. ೨೫ ವರ್ಷಗಳಿಂದ ಜನಪ್ರತಿನಿಧಿಗಳಾಗುತ್ತಿರುವ ಹಿರಿಯ ರಾಜಕಾರಣಿಗಳಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಅನಂತಕುಮಾರ ಹೆಗಡೆಗಳ ಬಣ ರಾಜಕೀಯ ಉತ್ತರ ಕನ್ನಡ ಜಿಲ್ಲೆಯ ಬಹುಸಂಖ್ಯಾತರನ್ನು ಮೋಸಗೊಳಿಸುವ ವೈದಿಕ ರಾಜಕೀಯದ ತಂತ್ರ ಎನ್ನುವ ವದಂತಿಗಳಿವೆ. ಇದರ ಮಧ್ಯೆ ಹಿಂದುತ್ವ,ರಾಷ್ಟ್ರೀಯತೆ ಸೋಗಿನಲ್ಲಿ ರಾಜಕೀಯ ಮಾಡಿರುವ ಬಿ.ಜೆ.ಪಿ. ಉತ್ತರ ಕನ್ನಡ ಜಿಲ್ಲೆಯಲ್ಲಿ ಬ್ರಾಹ್ಮಣತ್ವ ಪ್ರತಿಪಾದಿಸುತ್ತಿರುವುದಕ್ಕೆ ನೂರಾರು ಜ್ವಲಂತ ಸಾಕ್ಷಿಗಳಿವೆ. ಇದರ ನಡುವೆ ಬಿ.ಜೆ.ಪಿ. ಯ ಹಿರಿಯ ನಾಯಕರು ಉಪಾಯದಿಂದ ಹಿಂದೆ ಸರಿಸಿರುವ ನಾಯಕರಲ್ಲಿ ಹಿಂದುಳಿದ ವರ್ಗದವರೇ ಹೆಚ್ಚಿರುವುದು ದುರಂತ.

ಈಗ ಉತ್ತರ ಕನ್ನಡ ಜಿಲ್ಲೆಯ ವೈದಿಕ ರಾಜಕೀಯಕ್ಕೆ ಬಲಿಯಾಗುತ್ತಿರುವ ಪ್ರಮುಖ ಹೆಸರು ಕೆ.ಜಿ. ನಾಯ್ಕ ಹಣಜಿಬೈಲ್.‌ ಬಿ.ಜೆ.ಪಿ. ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿರುವ ಕೆ.ಜಿ.ನಾ ವಿರುದ್ಧ ಆಂತರಿಕ,ಬಹಿರಂಗ ಸಂಘರ್ಷಕ್ಕಿಳಿದಿರುವ ರಾಜ್ಯ ವಿಧಾನಸಭೆಯ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಮ್ಮ ಸಂಘಬಲದಿಂದ ವಿರೋಧಿಗಳನ್ನು ಹಣಿಯುತ್ತ ಕೆ.ಜಿ.ನಾಯ್ಕರನ್ನೇ ಗುರಿಯಾಗಿಸಿದ್ದಾರೆ.

ಕೇ.ಜಿ. ನಾಯ್ಕರ ಆಪ್ತರು, ಶಿಷ್ಯರನ್ನೇ ಅವರ ವಿರುದ್ಧ ಎತ್ತಿಕಟ್ಟುತ್ತಿರುವ ಕಾಗೇರಿ ಸರ್ಕಾರಿ ನೇಮಕಾತಿಗಳಲ್ಲಿ,ಪಕ್ಷದ ಹುದ್ದೆಗಳಲ್ಲಿ ಕೆಲವರನ್ನು ಪ್ರತಿಷ್ಠಾಪಿಸಿ ಕೆ.ಜಿ.ನಾಯ್ಕ ಬಣಕ್ಕೆ ಏಟುಕೊಡತೊಡಗಿದ್ದಾರೆ. ಇದರ ಮುಂದುವರಿದ ಭಾಗವಾಗಿ ಸಿದ್ಧಾಪುರದಲ್ಲಿ ಬಿ.ಜೆ.ಪಿ. ಮಂಡಳದ ಅಧ್ಯಕ್ಷರ ಬದಲಾವಣೆಯಾಗಿದೆ. ಕೆ.ಜಿ.ನಾಯ್ಕರ ನಂತರ ಕಾಗೇರಿಯವರ ಗುರಿಯಾದ ಜಿ.ಪಂ. ಮಾಜಿ ಸದಸ್ಯ ನಾಗರಾಜ್‌ ನಾಯ್ಕ ತಮ್ಮ ಹುದ್ದೆ ಕಳೆದುಕೊಳ್ಳುವುದರೊಂದಿಗೆ ಕಾಗೇರಿ ಬಣದ ಪ್ರಮುಖ ಮಾರುತಿ ನಾಯ್ಕ ಈ ಹುದ್ದೆ ಅಲಂಕರಿಸಿದ್ದಾರೆ. ಹೀಗೆ ಮನೆಯ ಕಿಚ್ಚು ಮನೆಯ ಸುಟ್ಟಿತಲ್ಲದೆ ..ಎನ್ನುವಂತೆ ಬಿ.ಜೆ.ಪಿ. ಒಳಬೆಂಕಿ ಬಿ.ಜೆ.ಪಿ.ಗೆ ಮಾರಕವಾಗುತ್ತಿದೆ. ಈ ಅವಕಾಶವನ್ನು ಬಳಸಿಕೊಳ್ಳಬೇಕಾಗಿದ್ದ ಕಾಂಗ್ರೆಸ್‌ ನಲ್ಲಿ ಯುದ್ದೋತ್ಸಾಹ ಕಾಣುತ್ತಿಲ್ಲ. ಆಪ್‌, ಜೆ.ಡಿ.ಎಸ್.‌ ಇತರ ಪಕ್ಷಗಳು ಇಲ್ಲಿ ಆಟಕ್ಕಿದ್ದರೂ ಲೆಕ್ಕಕ್ಕಿಲ್ಲ. ಕಾಗೇರಿ ಎನ್ನುವ ಸೋಲಿಲ್ಲದ ಸರದಾರನನ್ನು ಸೋಲಿಸುವ ವಿಚಾರದಲ್ಲಿ ಮಾತ್ರ ಸಾರ್ವತ್ರಿಕ ಏಕತೆ ಮೂಡುತ್ತಿರುವುದು ೨೫ ವರ್ಷಗಳ ಬಿ.ಜೆ.ಪಿ. ಆಡಳಿತದ ಸಾಧನೆಯ ಫಲಶೃತಿ!

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *