ಸಾವಿನಲ್ಲೂ ಒಂದಾದ ದಂಪತಿಗಳು…..

ಸಾವಿನಲ್ಲೂ ಒಂದಾದ ರಾಮಣ್ಣ ದಂಪತಿಗಳು


ಸಿದ್ದಾಪುರ: ತಾಲ್ಲೂಕಿನ ಮನಮನೆ ವ್ಯವಸಾಯ ಸೇವಾ ಸಹಕಾರಿ ಸಂ ,ಹಾಗೂ ಶ್ರೀ ಮಹಾಸತಿ( ಮಾಸ್ತೆಮ್ಮ) ದೇವಾಲಯದ ಅಧ್ಯಕ್ಷ ರಾಮ ಚೌಡ ನಾಯ್ಕ ಉದ್ದಿನ ಹಕ್ಲರ ಮನೆ ಮೊನ್ನೆ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಶಸ್ತ್ರ ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದ್ದಾರೆ. ಇವರೊಂದಿಗೇ ಬಾಳ ಸಂಗಾತಿ ಬಂಗಾರಮ್ಮ ಕೂಡ ಪತಿಯ ದುಃಖದಿಂದ ಹೊರಬರಲಾರದೆ ಮರು ದಿನವೇ ಪತಿಯ ದಾರಿಹಿಡಿದಿರುವುದು ವಿಧಿ ವಿಲಾಸಕ್ಕೆ ಸಾಕ್ಷಿಯಾಗಿದೆ.


ದಿ- ರಾಮ ಚೌಡ ನಾಯ್ಕರವರು ಪ್ರಗತಿಪರ ರೇಷ್ಮೆ , ಅಡಿಕೆ ಬೆಳೆಗಾರರಾಗಿದ್ದು, ಸಾಮಾಜಿಕ, ಧಾರ್ಮಿಕ ಮುಖಂಡರೂ ಆಗಿದ್ದರು. ಸಿದ್ದಾಪುರ ಹಾಗೂ ಸಾಗರ ತಾಲೂಕಿನಲ್ಲಿ ಉತ್ತಮ ಹೆಸರನ್ನು ಗಳಿಸಿದ್ದ ಇವರು ಸ್ವಾತಂತ್ರ್ಯ ಹೋರಾಟಗಾರ ಉದ್ದಿನಹಕ್ಲರ ಮನೆ ಚೌಡ ನಾಯ್ಕರ ಪುತ್ರರಾಗಿದ್ದರು.


ಮೃತ ದಂಪತಿಗಳು ಸಾಗರ ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಲಕ್ಷ್ಮಣ ನಾಯ್ಕ ಒಳಗೊಂಡಂತೆ ಮೂವರು ಮಕ್ಕಳನ್ನು, ಸಹೋದರ , ಸಹಕಾರ ಇಲಾಖೆಯ ನಿವೃತ್ತ ನಿರ್ದೇಶಕ ಗಣಪತಿ ನಾಯ್ಕ ಸೇರಿದಂತೆ ಅಪಾರ ಸ್ನೇಹಿತರು, ಬಂಧುಬಳಗವನ್ನು ಅಗಲಿದ್ದಾರೆ.

ಮೃತರ ದಿವ್ಯಾತ್ಮಗಳಿಗೆ ಸಂದ್ಘತಿಗಾಗಿ ಲಲಿತಾ ನಾಯ್ಕ ಗುಲ್ಲುಮನೆ,ಎ.ಬಿ.ನಾಯ್ಕ ಕಡಕೇರಿ, ಮಳಲವಳ್ಳಿಯ ಗಣೇಶ್ ಮತ್ತು ವಸಂತ ನಾಯ್ಕ,ಬಿಳಗಿ ಗ್ರಾ.ಪಂ.ಸದಸ್ಯೆ ಸುವರ್ಣಾ ಪ್ರಭಾಕರ ನಾಯ್ಕ,ಕ.ಸಾ.ಪ. ತಾಲೂಕಾಧ್ಯಕ್ಷ ಗೋಪಾಲ ನಾಯ್ಕ,ಸಮಾಜಮುಖಿ ಕನ್ನೇಶ್‌ ಕೋಲಶಿರ್ಸಿ ಸೇರಿದಂತೆ ಅನೇಕರು ಪ್ರಾರ್ಥಿಸಿದ್ದಾರೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಇಬ್ಬರು ಅಂದರ್….ಇಬ್ಬರು ಸಸ್ಪೆಂಡ್‌, ಒಬ್ಬ ಸೇಫ್!‌ ಇದು ತೌಡತ್ತಿ ಆತ್ಮಹತ್ಯೆ ಪ್ರಕರಣದ ಮುಂದುವರಿದ ಭಾಗ

ಮಲೆನಾಡಿನ ಮಳೆಯ ನಡುವೆಯೂ ಜನರ ಬಿಸಿ ಏರಿಕೆಗೆ ಕಾರಣವಾದ ಸೊರಬಾ ತೌಡತ್ತಿ ಸಂತೋಷ ಆತ್ಮಹತ್ಯೆಯ ಪ್ರಕರಣ ಹಾವು-ಏಣಿ ಆಟದಂತೆ ಮುಂದುವರಿದಿದೆ. ಡೈನಾಮಿಕ್ ಎಸ್ಪಿ ನೇತೃತ್ವದಲ್ಲಿ‌...

ಸಂತೋಷ್‌ ಆತ್ಮಹತ್ಯೆ ಪ್ರಕರಣ….. ತಮಿಳುನಾಡಿನಲ್ಲಿ ಆರೋಪಿಗಳ ಸೆರೆ!

ಒಂದು ಲವ್‌ ಪ್ರಕರಣ, ಪತ್ತೆದಾರಿ ರಕ್ಷಕನನ್ನಾಗಿ ಮಾಡಿ ನಂತರ ಆ ಪತ್ತೆಧಾರಿಯೇ ಹಣದ ಹಿಂದೆ ಬಿದ್ದು ತನಗೆ ಮೋಸ ಮಾಡಿದ ಪ್ರೇಯಸಿಗಾಗಿ ಪ್ರಾಣ ಕೊಡುವ...

ವಸಂತ ನಾಯ್ಕರ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ…. ಕೆ.ಜಿ. ನಾಯ್ಕ ಹಣಜಿಬೈಲ್‌ ಸವಾಲು

ತೌಡತ್ತಿ ಸಂತೋಷ ಆತ್ಮಹತ್ಯೆ ಪ್ರಕರಣದ ವಿಚಾರದಲ್ಲಿ ಈಗಲೂ ನಿಷ್ಪಕ್ಷಪಾತ ಮತ್ತು ನಿರ್ಭೀತ ವಿಚಾರಣೆಗೆ ಒತ್ತೇಯಿಸುತ್ತೇವೆ ಎಂದು ಪ್ರತಿಪಾದಿಸಿರುವ ಬಿ.ಜೆ.ಪಿ. ನಾಯಕ ಕೆ.ಜಿ. ನಾಯ್ಕ ಹಣಜಿಬೈಲ್‌...

ಅಪರಾಧಿಗಳನ್ನು ಬಂಧಿಸಿ…ನಿರಪರಾಧಿಗಳನ್ನಲ್ಲ… ವಸಂತ ನಾಯ್ಕ

ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರೀಯಿಸಿದ ವಸಂತ ನಾಯ್ಕ ಬಿ.ಜೆ.ಪಿ. ಹೆಣಗಳನ್ನಿಟ್ಟುಕೊಂಡು ರಾಜಕಾರಣ ಮಾಡುವ ದರಿದ್ರ ಪಕ್ಷ, ಬಿ.ಜೆ.ಪಿ. ಮೂರ್ಖ ಮುಖಂಡರ ವಿರುದ್ಧ ರಾಜಕೀಯವಾಗಿ ಮತ್ತು...

ವಸಂತ್‌ ಬಂಧಿಸುವ ವಿರೋಧಿಗಳ ಪ್ರಯತ್ನಕ್ಕೆ ಸೋಲು ಬಿ.ಜೆ.ಪಿ. ಕಾರ್ಯತಂತ್ರ ಫೇಲು!

ಸೊರಬಾ ಚಿಕ್ಕ ತೌಡತ್ತಿ ಆತ್ಮಹತ್ಯೆ ಪ್ರಕರಣ ಮುಂದಿಟ್ಟುಕೊಂಡು ಸಿದ್ಧಾಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಸಂತ ನಾಯ್ಕ ಬಂಧಿಸುವ ವಿರೋಧಿಗಳ ತಂತ್ರಕ್ಕೆ ಫೇಲಾಗಿದೆ. ಪೊಲೀಸರ ತಪ್ಪೋ?...

Latest Posts

ಇಬ್ಬರು ಅಂದರ್….ಇಬ್ಬರು ಸಸ್ಪೆಂಡ್‌, ಒಬ್ಬ ಸೇಫ್!‌ ಇದು ತೌಡತ್ತಿ ಆತ್ಮಹತ್ಯೆ ಪ್ರಕರಣದ ಮುಂದುವರಿದ ಭಾಗ

ಮಲೆನಾಡಿನ ಮಳೆಯ ನಡುವೆಯೂ ಜನರ ಬಿಸಿ ಏರಿಕೆಗೆ ಕಾರಣವಾದ ಸೊರಬಾ ತೌಡತ್ತಿ ಸಂತೋಷ ಆತ್ಮಹತ್ಯೆಯ ಪ್ರಕರಣ ಹಾವು-ಏಣಿ ಆಟದಂತೆ ಮುಂದುವರಿದಿದೆ. ಡೈನಾಮಿಕ್ ಎಸ್ಪಿ ನೇತೃತ್ವದಲ್ಲಿ‌ ವ್ಯಾಪ್ತಿ ವಿಚಾರದಲ್ಲಿ ಎಡವಿದರು ಎನ್ನಲಾದ ಪೊಲೀಸರು ಚುರುಕಾಗಿದ್ದರೆ ಸಂತೋಷ ಆತ್ಮಹತ್ಯೆ ತಪ್ಪಿಸಬಹುದಿತ್ತು! ಆದರೆ ನಿಧಾನವೇ ಪ್ರಧಾನ ಎಂದುಕೊಂಡ ಪೊಲೀಸರ ತಪ್ಪಿಗೆ ಈಗ ತಲೆದಂಡವಾಗಿದೆ. ಸೈಬರ್‌ ವಿಚಾರ ಮತ್ತು ಗುಪ್ತವಾರ್ತೆ...

Recommended For You

About the Author: Kanneshwar Naik

Leave a Reply

Your email address will not be published. Required fields are marked *