

ಕ್ಷುಲ್ಲಕ ಕಾರಣಗಳಿಂದ ರಾಜಕೀಯ ಲಾಭ ಪಡೆಯಲು ಹವಣಿಸುವ ಬಿ.ಜೆ.ಪಿ. ತಂತ್ರ ಜನಸಾಮಾನ್ಯರಿಗೂ ಅರ್ಥವಾಗುತ್ತಿದೆ ಎಂದು ಹೇಳಿರುವ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಪರೇಶ್ ಮೇಸ್ತ ಪ್ರಕರಣದಲ್ಲಿ ಶಾಂತಿ, ಸುವ್ಯವಸ್ಥೆ ಕದಡಿದ ಬಿ.ಜೆ.ಪಿ. ಮುಖಂಡರನ್ನು ಒದ್ದು ಒಳಗೆ ಹಾಕಬೇಕೆಂದು ಆಗ್ರಹಿಸಿದ್ದಾರೆ.

ಸಿದ್ದಾಪುರದಲ್ಲಿ ಸಮಾಜಮುಖಿ ಡಾಟ್ ನೆಟ್ ನ್ಯೂಸ್ ಗೆ ಪ್ರತಿಕ್ರೀಯಿಸಿದ ಅವರು ಬಿ.ಜೆ.ಪಿ. ಸರ್ವವಿಧಗಳಲ್ಲೂ ವಿಫಲವಾಗಿದೆ. ರಚನಾತ್ಮಕ ಕಾರ್ಯಕ್ರಮಗಳಿಲ್ಲದ ಬಿ.ಜೆ.ಪಿ. ಕೋಮುವಿಚಾರಗಳಿಂದ ಜನರ ದಿಕ್ಕುತಪ್ಪಿಸಿ ಲಾಭ ಪಡೆಯಲು ಹವಣಿಸುತ್ತಿದೆ. ಪರೇಶ್ ಮೇಸ್ತ ಸಾವಿನಲ್ಲಿ ಜನಸಾಮಾನ್ಯರಿಗೆ ಉರಿ ನೀಡಿ ಬಿ.ಜೆ.ಪಿ. ಬೆನ್ನು ಕಾಯಿಸಿಕೊಂಡಿದೆ. ಸಿ.ಬಿ.ಐ. ವರದಿ ಪರೇಶ್ ಮೇಸ್ತಾ ಸಾವನ್ನು ಸಹಜ ಸಾವು ಎಂದು ಹೇಳಿದೆ. ಪರೇಶ್ ಮೇಸ್ತಾ ಪ್ರಕರಣದಲ್ಲಿ ಗಂಟಲು ಹರಿದುಕೊಂಡು ಶಾಂತಿ-ಸುವ್ಯವಸ್ಥೆ ಹಾಳು ಮಾಡಿದ ಸಿ.ಟಿ. ರವಿ, ಶೋಭಾ ಕರಂದ್ಲಾಜೆ ಅನಂತಕುಮಾರ ಹೆಗಡೆಯವರನ್ನು ಒದ್ದು ಒಳಹಾಕಬೇಕು. ರಾಜಕೀಯ ಲಾಭಕ್ಕಾಗಿ ವ್ಯವಸ್ಥೆ ಹಾಳುಮಾಡುವ ರಾಜಕೀಯ ಪಕ್ಷಗಳಿಗೆ ಜನರು ಬುದ್ದಿ ಕಲಿಸಬೇಕು ಎಂದು ಕೆ.ಪಿ.ಸಿ.ಸಿ. ವಕ್ತಾರರೂ ಆಗಿರುವ ಗೋಪಾಲಕೃಷ್ಣ ವಿನಂತಿಸಿದರು.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
