ಗಮನಸೆಳೆದ ಅಯ್ಯಪ್ಪ ಜಾತ್ರೆಯ ಅಂಬಾರಿ

ಜಾತ್ರೆ,ಹಬ್ಬಗಳು ಪ್ರತಿ ಊರಿನ ವಿಶೇಶಗಳು. ದಿನದ ಜಂಜಡದಲ್ಲಿರುವ ಜನರ ಮನೋರಂಜನೆ,ಉತ್ಸಾಹಕ್ಕೆ ಹಬ್ಬ,ಜಾತ್ರೆಗಳು ನೆರವಾಗುತ್ತವೆ. ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ಅಯ್ಯಪ್ಪನ ವಾರ್ಷಿಕ ಜಾತ್ರೆ ಇಂಥ ವಿಶೇಶಗಳಿಗೆ ಒಂದು ಉದಾಹರಣೆ. ಶಬರಿಮಲೆ ಅಯ್ಯಪ್ಪನ ದೇವಸ್ಥಾನದ ಮಾದರಿಯಲ್ಲಿ ಸಿದ್ಧಾಪುರದ ಬಾಲಿಕೊಪ್ಪದ ಬೆಟ್ಟದಲ್ಲಿ ನಿರ್ಮಾಣವಾಗಿರುವ ಅಯ್ಯಪ್ಪ ದೇವಾಲಯದಲ್ಲಿ ಪ್ರತಿವರ್ಷ ಸಂಕ್ರಾತಿಗೆ ವಾರ್ಷಿಕ ಜಾತ್ರೆ ನಡೆಯುತ್ತದೆ. ಮನೋರಂಜನೆ, ಅಂಗಡಿ ಮುಂಗಟ್ಟುಗಳಲ್ಲದೆ ಆನೆಯ ಮೇಲೆ ಅಯ್ಯಪ್ಪನ ಮೆರವಣಿಗೆ ಈ ಜಾತ್ರೆಯ ವಿಶೇಶ. ದಸರಾದ ಆನೆಯ ಅಂಬಾರಿಯಂತೆ ಅಯ್ಯಪ್ಪನ ಜಾತ್ರೆಯ ಆನೆಯ ಮೇಲಿನ ಅಯ್ಯಪ್ಪನ ಮೆರವಣಿಗೆ ಹಲವು ವಿಶೇಶಗಳಿಂದ ಜನಮಾನಸದ ಸಂಭ್ರಮಕ್ಕೆ ಕಾರಣವಾಗುತ್ತದೆ.


ಸಂಕ್ರಾಂತಿಯ ಮೊದಲು ೫ ದಿವಸಗಳ ಕಾಲ ನಡೆಯುವ ಈ ಅಯ್ಯಪ್ಪನ ಜಾತ್ರೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು,ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಕೊನೆಯ ದಿನ ಆನೆಯ ಮೇಲೆ ಅಯ್ಯಪ್ಪನ ಮೆರವಣಿಗೆಯ ಅಂಬಾರಿ ನೋಡುವುದೇ ಸೊಬಗು.ವಿಭಿನ್ನ ಪ್ರದೇಶಗಳ ಕಲಾಪ್ರಕಾರಗಳ ಪ್ರದರ್ಶನ,ಸ್ಥಳಿಯರ ಸಹಭಾಗಿತ್ವದ ರಂಗೋಲಿ,ಈ ಮರವಣಿಗೆಯ ಮಹತ್ವ ಹೆಚ್ಚಿಸುತ್ತವೆ.
ದೂರದ ಅಯ್ಯಪ್ಪ ದೇವಾಲಯಕ್ಕೆ ತೆರಳಲು ಸಾಧ್ಯವಾಗದ ಸ್ಥಳೀಯರಿಗೆ ಈ ಅಯ್ಯಪ್ಪ ದೇವಾಲಯ ಸ್ಥಳೀಯವಾಗಿ ಶಬರಿಮಲೆಯಷ್ಟೇ ಮಹತ್ವದ್ದು. ಐದು ದಿವಸಗಳ ಜಾತ್ರೆಯಲ್ಲಿ ಪಾಲ್ಗೊಳ್ಳುವ ಜನರು ಕೊನೆಯ ದಿವಸದ ಆನೆಯ ಮೇಲೆ ಅಯ್ಯಪ್ಪನ ಮೆರವಣಿಗೆಯ ವಿಶೇಶವನ್ನು ತಪ್ಪಿಸುವುದೇ ಇಲ್ಲ.ಸ್ಥಳೀಯರು ಪರ ಊರುಗಳಿಂದ ಬರುವ ಭಕ್ತರು ಈ ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಬ್ರಮಿಸುತ್ತಾರೆ.

ಕಳೆದ ಎರಡ್ಮೂರು ವರ್ಷಗಳಿಂದ  ಕೋವಿಡ್‌ ಭಯದ ಆತಂಕದಲ್ಲಿ ಕಳೆಗುಂದಿದ್ದ ಈ ಅಯ್ಯಪ್ಪ ಜಾತ್ರೆ ಈ ವರ್ಷ ಅತಿ ವಿಜೃಂಬಣೆಯಿಂದಲೇ ನಡೆಯಿತು.ಲಕ್ಷಾಂತರ ಜನರು ಪಾಲ್ಗೊಂಡು ಸಂಬ್ರಮಿಸಿದ ಈ ಜಾತ್ರೆಯಲ್ಲಿ ಪ್ರತಿವರ್ಷದಂತೆ ಈ ವರ್ಷ ಕೂಡಾ ಕೊನೆಯ ದಿನದ ಅಯ್ಯಪ್ಪನ ಮೆರವಣಿಗೆಯಲ್ಲಿ ಹೆಚ್ಚು ಜನರು ಪಾಲ್ಗೊಂಡಿದ್ದು ವಿಶೇಶ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *