ನಾಳೆ-ನಾಡಿದ್ದು ಉತ್ತರ ಕನ್ನಡ ಜಿಲ್ಲೆಗೆ ಐತಿಹಾಸಿಕ ಪಾದಯಾತ್ರೆ

ಸಿದ್ದಾಪುರ: ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠ ಕಲಬುರಗಿ ಜಿಲ್ಲೆಯ ಪೀಠಾದೀಶರಾದ ಶ್ರೀ ಪ್ರಣವಾನಂದ ಸ್ವಾಮೀಜಿ ನೇತ್ರತ್ವದಲ್ಲಿ ಮಂಗಳೂರಿನಿಂದ ಬೆಂಗಳೂರು ವರೆಗೆ ನಡೆಯಲಿರುವ ಪಾದಯಾತ್ರೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ದಲ್ಲಿ ಜನವರಿ 18, ಮತ್ತು 19 ನಡೆಯಲಿದೆ ಎಂದು ಸಿದ್ದಾಪುರ ತಾಲೂಕಿನ ಪಾದಯಾತ್ರೆ ಸಮಿತಿಯವರು ತಿಳಿಸಿದ್ದಾರೆ.


ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಾದಯಾತ್ರೆ ಸಮಿತಿಯ ಅಧ್ಯಕ್ಷ ಕನ್ನೇಶ್ವರ ನಾಯ್ಕ ಕೋಲಶಿರ್ಸಿ ಐತಿಹಾಸಿಕ ಪಾದಯಾತ್ರೆ ಯಲ್ಲಿ ನಾಮಧಾರಿ, ಬಿಲ್ಲವ, ಈಡಿಗ, ಸಮಾಜದ ಬೇಡಿಕೆ ಗಳಾದ ಈಡಿಗ ಸಮುದಾಯದ ಎಲ್ಲಾ ಉಪಪಂಗಡಗಳನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಬೇಕು, ಬ್ರಹ್ಮ ಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಅಭಿವೃದ್ಧಿ ನಿಗಮ ಮಾಡಿ 500 ಕೋಟಿ ರೂಪಾಯಿ ಮೀಸಲಿಡಬೇಕು, ಸೇರಿದಂತೆ ಹಲವು ಬೇಡಿಕೆ ಇಡೆರಿಕೆಗೆ ನಡೆಯಲಿರುವ ಪಾದಯಾತ್ರೆ ಜನವರಿ 18 ಸಂಜೆ ತಾಲೂಕಿನ ಮನ್ಮನೆಗೆ ಬರಲಿದ್ದು, ಜನವರಿ 19 ರಂದು ಕಾವಂಚೂರು, ಅಕ್ಕುಂಜಿ, ಸಿದ್ದಾಪುರ ಪಟ್ಟಣ ಪ್ರವೇಶಿಸಿ, ಕೊಂಡ್ಲಿ ಜಾತ್ರೆ ಮೈದಾನದಲ್ಲಿ ಜಾಗೃತಿ ಸಭೆ ನಡೆಯಲಿದೆ. ಈ ಸಭೆಯ ದಿವ್ಯ ಸಾನಿಧ್ಯ ವನ್ನು ಚಿತ್ತಾಪುರ ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ವಹಿಸಲಿ ದ್ದಾರೆ. ಸಿಗಂದೂರು ಧರ್ಮದರ್ಶಿ ರಾಮಪ್ಪ ಉದ್ಘಾಟಿಸಲಿದ್ದಾರೆ. ಪಾದಯಾತ್ರೆ ಸಮಿತಿಯ ಅಧ್ಯಕ್ಷ ಕನ್ನೇಶ್ವರ ನಾಯ್ಕ ಅಧ್ಯಕ್ಷತೆ ವಹಿಸಲಿ ದ್ದಾರೆ. ಗೌರವಾಧ್ಯಕ್ಷ ವೀರಭದ್ರ ನಾಯ್ಕ ಪ್ರಾಸ್ತಾವಿಕವಾಗಿ ನುಡಿಗಳನ್ನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಮಾಜದ ಪ್ರಮುಖರಾದ ಭೀಮಣ್ಣ ನಾಯ್ಕ, ಕೆ ಜಿ ನಾಯ್ಕ ಹಣಜಿಬೈಲ್,ಆನಂದ ನಾಯ್ಕ ಹೊಸೂರ, ಹೊನ್ನಗೋಡ ರತ್ನಾಕರ, ಸಿ ಎಫ್ ನಾಯ್ಕ, ರವೀಂದ್ರ ನಾಯ್ಕ, ಡಾ. ವೆಂಕಟೇಶ ನಾಯ್ಕ, ಕೆ ಜಿ ನಾಗರಾಜ, ವಿ ಎನ್ ನಾಯ್ಕ ಬೇಡ್ಕಣಿ, ವಸಂತ ನಾಯ್ಕ ಮನ್ಮನೆ, ಉಲ್ಲಾಸ ನಾಯ್ಕ ಅಂಕೋಲಾ, ನಾಗರಾಜ ನಾಯ್ಕ ಬೇಡ್ಕಣಿ, ಎಂ ಹೆಚ್ ನಾಯ್ಕ, ಈಶ್ವರ ನಾಯ್ಕ ಮನ್ಮನೆ, ಶ್ರೀ ಮತಿ ಚಂದ್ರಕಲಾ ನಾಯ್ಕ ದಿವಾಕರ ನಾಯ್ಕ ಹೆಮ್ಮನಬೈಲ್, ರವಿಕುಮಾರ್ ನಾಯ್ಕ, ಸುಧೀರ ನಾಯ್ಕ ಕೊಂಡ್ಲಿ, ಬಿಜಿ ನಾಯ್ಕ ಹಲಗೇರಿ,ಎನ್ ಜಿ ಕುಮಾರ್, ಪಿ ವಿ ನಾಯ್ಕ ಬೇಡ್ಕಣಿ, ಹಿತೇಂದ್ರ ನಾಯ್ಕ, ಮಾಬ್ಲೇಶ್ವರ ನಾಯ್ಕ ಕರಮನೆ, ಎಸ್ ಎಮ್ ನಾಯ್ಕ, ಕೆ ಆರ್ ವಿನಾಯಕ, ಮೋಹನ ನಾಯ್ಕ ಕೊಂಡ್ಲಿ, ಗೌರವ ಉಪಸ್ಥಿತಿ ಯಲ್ಲಿ ಸಮಾಜದ ಹಲವು ಪ್ರಮುಖ ಗಣ್ಯರು ಉಪಸ್ಥಿತರಿರುವರು.

ಸಮಾರಂಭದಲ್ಲಿ ಪುನಿತ್ ರಾಜಕುಮಾರ ಆಶ್ರಮಧಾಮದ ಮುಖ್ಯಸ್ಥ ನಾಗರಾಜ ನಾಯ್ಕ, ರಾಷ್ಟ್ರ ಪ್ರಶಸ್ತಿ ವಿಜೇತ ಈಶ್ವರ ನಾಯ್ಕ ಹಸವಂತೆ ರಾಜ್ಯ ಪರಿಸರ ಪ್ರಶಸ್ತಿ ವಿಜೇತ ಎಂ. ಬಿ. ನಾಯ್ಕ ಕಡಕೇರಿ, ಕಲಾವಿದೆ ಅರ್ಚನಾ ಸುರೇಶ ನಾಯ್ಕ ತೆಂಗಿನಮನೆ, ಕಲಾವಿದ ನಾಗರಾಜ ನಾಯ್ಕ ಬರೂರ, ರಂಗಭೂಮಿ ಸಂಗೀತ ನಿರ್ದೇಶಕ ಶ್ರೀ ಧರ ಮಾವಿನಗುಂಡಿ, ಸಂಗೀತ ಕಲಾವಿದ ಗಣಪತಿ ನಾಯ್ಕ ಕೊಂಡ್ಲಿ, ಪ್ರಗತಿಪರ ಕೃಷಿಕ ಹನುಮಂತ ಪರಶುರಾಮ ಕುಣಜಿ, ಯಕ್ಷಗಾನ ಕಲಾವಿದ ನಂದನ ನಾಯ್ಕ ಅಕಿಶಿನಗೋಡು ರನ್ನು ಸನ್ಮಾನಿಸಲಾ ಗುವುದು.
ಜನವರಿ 20ರಂದು ಮುಂಜಾನೆ 8 ಗಂಟೆಗೆ ಹೊರಡುವ ಪಾದಯಾತ್ರೆ ಶಿರಳಗಿ ಮೂಲಕ ಸೊರಬ ತಾಲೂಕಿನ ಮೂಲಕ ಮುಂದುವರಿಯಲಿದೆ ಎಂದರು.
ಕೊಂಡ್ಲಿ ಐತಿಹಾಸಿಕ ಜಾತ್ರೆ ಮೈದಾನದಲ್ಲಿ ಸಂಜೆ ನಡೆಯುವ ಜಾಗೃತಿ ಸಮಾವೇಶ ಕ್ಕೆ ಹಾಗೂ ಮನ್ಮನೆ ಯಿಂದ ನಡೆಯುವ ಪಾದಯಾತ್ರೆಯಲ್ಲಿ ಡೊಳ್ಳು ಕುಣಿತ, ಮಹಿಳೆಯರ ಪೂರ್ಣಕುಂಭ ಮೇಳ ಹಾಗೂ ಇತರ ಸಾಂಸ್ಕೃತಿಕ ಕಲಾ ತಂಡಗಳು ಪಾದಯಾತ್ರೆ ಮೆರಗು ಹೆಚ್ಚಿಸಲಿವೆ.
ಸಮಾಜ ಭಾoದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತನು ಮನ: ಧನ ಸಹಕಾರ ನೀಡಬೇಕಾಗಿ ಗೌರವಾಧ್ಯಕ್ಷ ವೀರಭದ್ರ ನಾಯ್ಕ ವಿನಂತಿ ಸಿದ್ದಾರೆ.
ಸುದ್ದಿಗೋಷ್ಠಿ ಯಲ್ಲಿ ಪಾದಯಾತ್ರೆ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿನಾಯಕ ಕೊಂಡ್ಲಿ, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಕಾವಂಚೂರ, ಸಂಚಾಲಕ ರವಿ ಕುಮಾರ್ ಕೊಠಾರಿ, ಸಮಿತಿಯ ಗಾಂಧೀಜಿ ಆರ್ ನಾಯ್ಕ, ಅನಿಲ್ ಕೊಠಾರಿ ಉಪಸ್ಥಿತರಿದ್ದರು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *