![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
ಮಲೆನಾಡಿನಲ್ಲಿ ಬೆಳೆಯುವ ಅಡಿಕೆ,ತೆಂಗು ಬೆಳೆಗಳು ಕಾಡುಪ್ರಾಣಿಗಳಿಗೆ ಬಲಿಯಾಗುತ್ತಿದ್ದು ಈ ಬೆಳೆಗಳಿಗೆ ನೀಡುವ ಬೆಳೆಹಾನಿ ಪರಿಹಾರ ಅವೈಜ್ಞಾನಿಕವಾಗಿದೆ ಎಂದು ಸೋವಿನಕೊಪ್ಪ ಭಾಗದ ರೈತರು ದೂರಿದ್ದಾರೆ.
ಸಿದ್ಧಾಪುರ, ಉತ್ತರ ಕನ್ನಡ ಸೇರಿದಂತೆ ರಾಜ್ಯದಾದ್ಯಂತ ಬೆಳೆಗಳ ಹಾನಿಗೆ ಪರಿಹಾರ ನಿಗದಿಮಾಡಲಾಗಿದೆ. ಆದರೆ ತೆಂಗು ಮತ್ತು ಅಡಿಕೆ ಬೆಳೆಗಳ ಫಸಲು ನಾಶಕ್ಕೆ ಬೆಳೆಪರಿಹಾರ ದರ ಕಡಿಮೆಯಾಗಿದೆ. ಅಡಿಕೆಗೆ ಕಿಲೋ ಒಂದಕ್ಕೆ ನಿಗದಿಪಡಿಸಿದ ೭೦ ರೂಪಾಯಿ ಪರಿಹಾರದ ಬದಲು ೫೫೦ ರೂಪಾಯಿ ತೆಂಗಿನ ಮಿಳ್ಳೆಗಳಿಗೆ ಕನಿಷ್ಠ ೮ ರೂಪಾಯಿ ನಿಗದಿಪಡಿಸಲು ಕೋರಿ ರೈತ ಮುಖಂಡ ಬಿ.ಆರ್. ನಾಯ್ಕ ನೇತೃತ್ವದಲ್ಲಿ ಹತ್ತಕ್ಕೂ ಹೆಚ್ಚು ಜನ ರೈತರು ಅರಣ್ಯ ಇಲಾಖೆಗೆ ಲಿಖಿತ ಮನವಿ ಮಾಡಿದ್ದಾರೆ.
ಈ ಮನವಿ ಪತ್ರವನ್ನು ಮಾಧ್ಯಮಗಳಿಗೆ ನೀಡಿದ ರೈತರು ಈ ಬಗ್ಗೆ ಸರ್ಕಾರ ಶೀಘ್ರ ನಿರ್ಧಾರ ಪ್ರಕಟಿಸಲು ಕೋರಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.
![](https://i0.wp.com/samajamukhi.net/wp-content/uploads/2023/02/20230202_114603.jpg?resize=760%2C570&ssl=1)
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)