



ನಾ ಕಾವೂಂಗಾ ಕಾನೆದೂಂಗಾ ಎನ್ನುವ ಪ್ರಧಾನಿ ನರೇಂದ್ರ ಮೋದಿ ಬ್ರಷ್ಟಾಚಾರದ ವಿಚಾರದಲ್ಲಿ ಕಣ್ಣುಮುಚ್ಚಿ ಕೂತಿದ್ದಾರೆ ಎಂದು ಲೇವಡಿ ಮಾಡಿರುವ ರಾಜ್ಯ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಬಿ.ಜೆ.ಪಿ. ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಕರಾವಳಿ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬಿ.ಜೆ.ಪಿ.ಯವರಿಗೆ ಜನಪರತೆ ಇಲ್ಲ. ಅವರ ರಾಜ್ಯಾದ್ಯಕ್ಷರು ಲವ್ ಜಿಹಾದ್, ಟಿಪ್ಪು ಸುಲ್ತಾನ್ ಬಗ್ಗೆ ಮಾತನಾಡಿ ಎನ್ನುತ್ತಾರೆ. ಉತ್ತಮ ಆಡಳಿತ ನೀಡಿದ್ದರೆ ಹೇಳಿಕೊಳ್ಳಲು ಏನಾದರೂ ಇರುತಿತ್ತು. ಕೋವಿಡ್ ಅವಧಿ ಸೇರಿದಂತೆ ಬಿ.ಜೆ.ಪಿ. ಆಡಳಿತದ ಅವಧಿಯಲ್ಲಿ ಯಾವ ಉತ್ತಮ ಕೆಲಸಗಳೂಆಗಿಲ್ಲ. ಗಾಂಧಿ ಕೊಂದವರಿಂದ ಲವ್ ಜಿಹಾದ್ ಬಗ್ಗೆ ಕೇಳಿಸಿಕೊಳ್ಳುತ್ತಾ ಮೂರ್ಖರಾಗುವ ಮತದಾರರು ಕರ್ನಾಟಕದಲ್ಲಿಲ್ಲ ಎಂದರು.
ಸಿದ್ಧಾಪುರ ಹಾರ್ಸಿಕಟ್ಟಾದಲ್ಲಿ ಮಾತನಾಡಿದ ಅವರು ಗ್ರಾ.ಪಂ. ಕೆಳಹಂತದ ನೌಕರರು ಡಿ ದರ್ಜೆಯ ನೌಕರರೂ ಅಲ್ಲ ಎಂದಿರುವ ಸರ್ಕಾರದ ಬಗ್ಗೆ ತರಾಟೆಗೆ ತೆಗೆದುಕೊಂಡ ಬಿ.ಕೆ. ಹರಿಪ್ರಸಾದ್ ರಾಜ್ಯ ಸರ್ಕಾರಕ್ಕೆ ಉದ್ಯೋಗ ಸೃಷ್ಟಿಸುವ ಯೋಗ್ಯತೆ ಇಲ್ಲ, ಇರುವ ನೌಕರರನ್ನೂ ನಿರುದ್ಯೋಗಿಗಳನ್ನಾಗಿಸುವ ಸರ್ಕಾರಕ್ಕೆ ಬಾಧಿತರ ಶಾಪ ತಟ್ಟದೆ ಇರದು ಎಂದರು.
ಮಾತೆತ್ತಿದರೆ ಗಾಂಧಿ ಸೋನಿಯಾ ಎನ್ನುವ ಬಿ.ಜೆ.ಪಿ. ಗಾಂಧಿ ಕುಟುಂಬದಿಂದ ತ್ಯಾಗ, ಬಲಿದಾನ, ಸಮರ್ಪಣೆಗಳೇನು ಎಂಬುದನ್ನು ಅರಿಯಬೇಕು ಎಂದರು.


_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
