

ಸಿದ್ಧಾಪುರ ನಗರದ ಶಾಂತಲಾ ವೈನ್ ಶಾಪ್ ಸಾಗರ ಹೋಟೆಲ್ ಬಳಿ ನಡೆದ ಚಿಕ್ಕ ಗಲಾಟೆಯ ಹಿನ್ನೆಲೆಯಲ್ಲಿ ೫ ಜನ ಯುವಕರ ಮೇಲೆ ಪೊಲೀಸ್ ದೂರು ದಾಖಲಾಗಿದೆ.

ಪ್ರಜ್ವಲ್ ಶನೇಶ್ವರ ಕಿಂದ್ರಿ ಎಂಬ ಯುವಕ ತನಗೆ ಅವಾಚ್ಯವಾಗಿ ಬೈದು ಹಲ್ಲೆ ನಡೆಸಿದರೆಂದು ಪವನ್ ರಾಜು ನಾಯ್ಕ, ಆದಿತ್ಯ ರಾಮಾ ನಾಯ್ಕ, ಗಣೇಶ್ ಮಡಿವಾಳ, ಹೇಮಂತ ಮಡಿವಾಳ, ದಿನೇಶ್ ಮಡಿವಾಳ ಎನ್ನುವ ೫ ಯುವಕರ ಮೇಲೆ ಪೊಲೀಸ್ ದೂರು ದಾಖಲಿಸಿದ್ದಾನೆ. ಆರೋಪಿತರು ೨ ಜನ ಬಳ್ಳಟ್ಟೆಯವರು ಮತ್ತು ಮೂರುಜನ ಮರಲಿಗೆಯವರಾಗಿದ್ದಾರೆ. ಹೋಟೆಲ್ ಎದುರು ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದು ಗಲಾಟೆಗೆ ಪ್ರಚೋದಿಸಿ ಅಪರಾಧ ಮಾಡಿದ ಬಗ್ಗೆ ಪೊಲೀಸ್ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆ- ಬ್ಯಾಂಕ್ ನೋಟೀಸ್ ಗೆ ಹೆದರಿ ನಗರದ ಕೋಳಿ ಅಂಗಡಿ ಮಾಲಿಕನೊಬ್ಬ ವಿಷಕುಡಿದು ಮೃತರಾದ ಘಟನೆ ಅಮೀನಾ ವೃತ್ತದಲ್ಲಿ ನಡೆದಿದೆ. ಮೃತ ವ್ಯಕ್ತಿ ಪ್ರಭು ಎನ್ನಲಾಗಿದ್ದು ಬ್ಯಾಂಕ್ ನೋಟೀಸ್ ನಿಂದ ಮನನೊಂದು ಕಳೆದ ಎರಡು ದಿವಸಗಳ ಹಿಂದೆ ವಿಷ ಕುಡಿದಿದ್ದ ವ್ಯಕ್ತಿ ಇಂದು ಮೃತರಾಗಿರುವ ಬಗ್ಗೆ ಮೂಲಗಳು ಸಮಾಜಮುಖಿ ಡಾಟ್ ನೆಟ್ ಗೆ ತಿಳಿಸಿವೆ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
