

ಜಾತಿ,ಧರ್ಮ ಪ್ರೇರಿತ ರಾಜಕಾರಣದಿಂದ ಯಾರಿಗೂ ಶ್ರೇಯಸ್ಸು ದೊರೆಯುವುದಿಲ್ಲ ಎಂದು ಪ್ರತಿಪಾದಿಸಿರುವ ಜಾತ್ಯಾತೀತ ಜನತಾದಳದ ಶಿರಸಿ ಕ್ಷೇತ್ರದ ಅಭ್ಯರ್ಥಿ ಉಪೇಂದ್ರ ಪೈ ಜಾತ್ಯಾತೀತವಾಗಿ, ಧರ್ಮರಾಜಕಾಣ ಮಾಡದೆ ಈ ಬಾರಿ ಚುನಾವಣೆ ಗೆದ್ದು ತೋರಿಸುತ್ತೇವೆ ಎಂದಿದ್ದಾರೆ.

ಸಿದ್ಧಾಪುರದಲ್ಲಿ ಜೆ.ಡಿ.ಎಸ್. ಚುನಾವಣಾ ಕಾರ್ಯಾಲಯದಲ್ಲಿ ಮಾಧ್ಯಮಗಳ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ನಾವು ರೈತ ಪರ ರಾಜಕಾರಣ ಮಾಡುತ್ತೇವೆ. ನಮ್ಮ ಪ್ರತಿಸ್ಫರ್ಧಿಗಳು ಜಾತಿರಾಜಕಾರಣ ಮಾಡುತಿದ್ದಾರೆ. ಸಂದರ್ಭ ಬಂದರೆ ಜಾತಿ ರಾಜಕಾರಣ ಮಾಡುತ್ತಿರುವವರ್ಯಾರು ಎಂಬುದನ್ನು ಬಹಿರಂಗಪಡಿಸುತ್ತೇವೆ ಎಂದು ಎಚ್ಚರಿಸಿದರು.
ಸಮಾಜಸೇವೆಯಿಂದ ನಾವು ರಾಜಕಾರಣಕ್ಕೆ ಬಂದಿದ್ದೇವೆ. ಈ ಹಿಂದೆ ೪ವರ್ಷಗಳ ವರೆಗೆ ಪಕ್ಷದ ಚಟುವಟಿಕೆ ಮಾಡದೆ ಅಭ್ಯರ್ಥಿಗಳು ಚುನಾವಣೆಗೆ ಬರುತಿದ್ದರು. ಈಗ ಪಕ್ಷವನ್ನು ಪುನರ್ ಸಂಘಟಿಸುವ ಮೂಲಕ ನಾವು ಹೊಸ ಪ್ರಯೋಗದೊಂದಿಗೆ ಹೊಸ ಮುಖ ಗೆಲ್ಲಿಸುತ್ತೇವೆ ಎಂದರು.
ಬೆಟ್ಟ ಭೂಮಿ ವಿಚಾರವಿರಲಿ,ಮೂಲಭೂತ ಸಮಸ್ಯೆಗಳಿರಲಿ ಎಲ್ಲದಕ್ಕೂ ಮಾತಿನಲ್ಲಿ ಪರಿಹಾರ ಸಾಧ್ಯವಿಲ್ಲ ೩೦ ವರ್ಷ ಜನಪ್ರತಿನಿಧಿಗಳಾದವರಿಗೆ ಸ್ಥಳೀಯ ಸಮಸ್ಯೆ ಅರ್ಥವಾಗದೆ ಪುಕ್ಕಟ್ಟೆ ಮಾತು,ಭರವಸೆಗಳಿಂದ ಚುನಾವಣೆ ಗೆಲ್ಲುವ ದುಸ್ಥಿತಿ ಬರಬಾರದು ಎಂದು ಪರೋಕ್ಷವಾಗಿ ಶಾಸಕ ವಿಶ್ವೇಶ್ವರ ಹೆಗಡೆಯವರನ್ನು ತಿವಿದರು.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
