

ಸಿದ್ಧಾಪುರ ತಾಲೂಕಿನ ಪಂಚಾಯತ್ ರಾಜ್ ಇಲಾಖೆ ನೌಕರರೊಂದಿಗೆ ಶಾಸಕ ಭೀಮಣ್ಣ ನಾಯ್ಕ ಇಂದು ಚರ್ಚೆ ನಡೆಸಿದರು. ವಿವಿಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿದ ನಂತರ ನಿರೀಕ್ಷಣಾ ಗೃಹದಲ್ಲಿ ಪಂಚಾಯತ್ ರಾಜ್ ನೌಕರರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು ಪಂಚಾಯತ್ ರಾಜ್ ನೌಕರರಿಂದ ಜನಪರ ಆಡಳಿತ ಸಿಗಬೇಕು ಉತ್ತಮ ಆಡಳಿತದಿಂದ ಜನರಿಗೆ ಅನುಕೂಲ ಮಾಡಬೇಕು ಎಂದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕೊರತೆ ಬಗ್ಗೆ ಪಂಚಾಯತ್ ನೌಕರರ ಬೇಡಿಕೆ ಆಲಿಸಿದ ಶಾಸಕರು ಆ ಬಗ್ಗೆ ವಿಚಾರಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
https://www.youtube.com/watch?v=fHp6m7QaqG0

