
https://m.youtube.com/watch?v=tuz2dPrQVD4 ದಾಂಡೇಲಿ: ಭಾರತೀಯ ಅಂಚೆ ಇಲಾಖೆ ಸಿರಸಿ ವಿಭಾಗ ದಾಂಡೇಲಿ ತಾಲೂಕಿನ ಕೇಸರೂಳ್ಳಿ ಅಂಚೆ ವ್ಯಾಪ್ತಿಯ ಡೊಮಗೇರಾ ಗ್ರಾಮದಲ್ಲಿ ‘ಸಂಪೂರ್ಣ ಮಹಿಳಾ ಸನ್ಮಾನ’ ಗ್ರಾಮ ಕಾರ್ಯಕ್ರಮ ಸೋಮವಾರ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪೋಸ್ಟ್ ಮಾಸ್ಟರ್ ಜನರಲ್ ಕರ್ನಲ್ ಸುಶೀಲ್ ಕುಮಾರ ಈ ಯೋಜನೆಯ ಮೂಲಕ ಅಂಚೆ ಇಲಾಖೆಯಲ್ಲಿ ಮಹಿಳೆಯರು ಖಾತೆ ತೆಗೆದು 1000ರೂಪಾಯಿ ದಿಂದ 2 ಲಕ್ಷದ ವರೆಗೆ ನಿಗದಿತ ಉಳಿತಾಯ ಮಾಡಿ, ಬಡ್ಡಿ ಪಡೆಯುವ ಅನುಕೂಲವಾಗುವಂತೆ ಯೋಜನೆ ರೂಪಿಸಲಾಗಿದೆ ಎಂದರು.
ಸಿರಸಿ ವಿಭಾಗದ ಅಂಚೆ ಅಧೀಕ್ಷಕರಾದ ಹೂವಪ್ಪ.ಜಿ.ಮಾತನಾಡಿ ಈ ಯೋಜನೆ ಕರ್ನಾಟಕದಲ್ಲಿ ಅನುಷ್ಠಾನಕ್ಕೆ ಒಳಪಟ್ಟು ಮೊದಲ ಗ್ರಾಮ ಈ ಡೊಮ್ಮಗೇರಾ. ಈ ಕಾರ್ಯಕ್ರಮದ ಭಾಗವಾಗಿ ಈ ಗ್ರಾಮದಲ್ಲಿ 100 ಜನರಿಗೆ ಅಂಚೆ ಇಲಾಖೆಯಲ್ಲಿ ಉಳಿತಾಯ ಖಾತೆ ತೆರೆಯಲಾಗಿದೆ. ಯೋಜನೆ ಸಂಪೂರ್ಣ ಲಾಭ ಗ್ರಾಮದ ಮಹಿಳೆಯರು ಪಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಶಿರಶಿ ವಿಭಾಗದ ಮಂಜುನಾಥ ಖಾರ್ವಿ, ದಾಂಡೇಲಿಯ ಅಂಚೆ ನಿರೀಕ್ಷರಾದ ಶಿವಾನಂದದೊಡ್ಡಮನಿ,ಡೊಮ್ಮಗೇರಾ ಅಂಚೆ ಮಾಸ್ಟರ ನೀತಾ ಪಾಟೀಲ, ಅವಿನಾಶ ಸಿ.ಎಸ್. ಪ್ರಕಾಶ್ ಮಹರೇಕರ್ ಇದ್ದರು
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
