ಇಂದು ವಿಠ್ಠಲ್‌ ಭಂಡಾರಿ ಜನ್ಮದಿನ… ವಿಠ್ಠಲ್‌ ಸ್ಮರಣೆ

ಕಡಕೇರಿಯಪ್ರಾಥಮಿಕ ಶಾಲೆಯಲ್ಲಿ ಇಂದು ನಡೆದ ವಿಠ್ಠಲ್‌ ಜನ್ಮ ದಿನಾಚರಣೆ ನಿಮಿತ್ತದ ಪುಟ್ಟ ಕಾರ್ಯಕ್ರಮದಲ್ಲಿ ವಿಠ್ಠಲ್ ಸಂಗಾತಿ‌ ಯಮುನಾ ಜೊತೆ ಪಾಲ್ಗೊಂಡಿದ್ದೆ.ವಿಠ್ಠಲ್‌ ಭಂಡಾರಿ ಬದುಕಿದ್ದಾಗ ನಿಮ್ಮ ಜನ್ಮ ದಿನ ಎಂದರೆ ಅದರಷ್ಟಕ್ಕೆ ಅದು ಬಂದು ಹೋಗುತ್ತೆ ಬಿಡಿ ಎನ್ನುತಿದ್ದರೇನೋ?

ಸಿದ್ಧಾಪುರದಲ್ಲಿ ಪ್ರಗತಿಪರವಾದ, ಜಾತ್ಯಾತೀತವಾದ ಯಾವುದೇ ಕಾರ್ಯಕ್ರಮವಾದರೂ ಅವರು ಇರುತಿದ್ದರು. ವಿಠ್ಠಲ್‌ ಮತ್ತು ನಮ್ಮ ನಡುವೆ ಒಂದು ಅಲಿಖಿತ ಒಪ್ಪಂದವಿತ್ತು. ನಮ್ಮ ಸಮೂಹದ ಕಾರ್ಯಕ್ರಮಗಳಲ್ಲಿ ಅವರಿರಬೇಕು, ಅವರ ಕೆಲವು ಕಾರ್ಯಕ್ರಮಗಳಲ್ಲಿ ನಾವಿರಬೇಕು, ಸುಮಾರು ಹತ್ತು ವರ್ಷಗಳ ಹಿಂದಿನ ಕತೆ ಆಗಷ್ಟೇ ಎಷ್ಟೋ ವರ್ಷಗಳ ನಂತರ ನಮ್ಮೂರಿಗೆ ಮರಳಿದ್ದ ನನಗೆ ಜೊತೆಗೆ ಆಪ್ತ-ಆತ್ಮೀಯನೆನಿಸಿ ಭಾಸ್ಕರ್‌,ನರೇಂದ್ರ ಇರುತಿದ್ದರು. ಭಂಡಾರಿ ಆಗಾಗ ಸಿಕ್ಕು ಮಿಂಚಂತೆ ಮಾಯವಾಗುವ ಸಖನಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳೂ ಸೇರಿ ಬಹುತೇಕ ನಮ್ಮ ಕಾರ್ಯಕ್ರಮಗಳಲ್ಲಿ ನಮಗೆ ಥಟ್ಟನೆ ಹೊಳೆಯುತಿದ್ದ ಹೆಸರುಗಳೇ ಡಾ. ವಿಠ್ಠಲ್‌ ಭಂಡಾರಿ,ಸುಬ್ರಾಯ ಮತ್ತೀಹಳ್ಳಿ ಉಳಿದಂತೆ ತಮ್ಮಣ್ಣ, ಎಂ.ಕೆ.ನಾಯ್ಕ, ರತ್ನಾಕರ ಸೇರಿದ ಕೆಲವು ಸರ್ಕಾರಿ ನೌಕರರು.‌

ಭಂಡಾರಿ ಮತ್ತು ಮತ್ತೀಹಳ್ಳಿ ಹೆಸರು ಬರೆದಿಟ್ಟು ಉಳಿದ ಹೆಸರುಗಳಿಗೆ ಹುಡುಕಾಡುತಿದ್ದ ಸಮಯದಲ್ಲಿ ನಾನ್‌ ಬರ್ತೆ ಬೇರೆ ಯಾರಾದ್ರೂ ಸಿಕ್ಕರೆ ಒಳ್ಳೆಯದು ಎನ್ನುತಿದ್ದ ಈ ಎರಡು ಹೆಸರುಗಳು ನಮ್ಮ ಆಹ್ವಾನಿತರ ಮೊದಲೆರಡು ಹೆಸರುಗಳಾಗಿರುತಿದ್ದವು. ಈಗಲೂ ಸುಬ್ರಾಯ ಮತ್ತೀಹಳ್ಳಿ ನಮಗೆ ಸಿಗುವ ಹಿರಿಯ ಮಿತ್ರ ಆದರೆ ವಿಠ್ಠಲ್‌ ಭಂಡಾರಿ ಹುಡುಕುವುದೆಲ್ಲಿ?

ಇಂಥ ಅನೇಕ ನೆನಪುಗಳು ನಮ್ಮ ನಡುವಿನ ವಿಠ್ಠಲ್‌ ರ ಅನುಪಸ್ಥಿತಿಯನ್ನು ಮತ್ತೆ ಮತ್ತೆ ನೆನಪಿಸುತ್ತವೆ.

ಗ್ರಹಣ, ವೈಜ್ಞಾನಿಕ, ವೈಚಾರಿಕ ವಿಷಯಗಳ ಚರ್ಚೆ, ಕಾರ್ಯಕ್ರಮ, ಚಟುವಟಿಕೆ ಏನಿದ್ದರೂ ವಿಠ್ಠಲ್‌ ರ ಕರೆ ತಪ್ಪದೇ ನಮಗೆ ಬರುತಿತ್ತು. ಹಲವು ಕೆಲಸ, ಕೆಲವು ಮಿತಿಗಳ ನಡುವೆ ಸದಾ ಪಾದರಸದಂತೆ ಕ್ರೀಯಾಶೀಲವಾಗಿರುತಿದ್ದ ವಿಠ್ಠಲ್‌ ಕಲಿಯುವುದು, ಕಲಿಸುವುದರಲ್ಲಿ ನಿಸ್ಸೀಮ, ಓದು, ಸಂಘಟನೆ, ಸಂಶೋಧನೆಗಳ ನಡುವೆ ಪ್ರವಾಸ, ವಿಹಾರ ಸಂಘಟನೆಯ ಕೆಲಸಕ್ಕಾಗಿ ಅಲೆಯುವ ವಿಠ್ಠಲ್‌ ಸಲಹೆ ಕೊಡುವಾಗ ಕೂಡಾ ಹೀಗಾದರೆ, ಹೀಗಿದ್ದರೆ ಉತ್ತಮ ಎನ್ನುವ ಸಲಹೆ ಕೊಡುತಿದ್ದರೇ ವಿನ: ಇದೇ ಎಂದು ಯಾರೊಂದಿಗೂ ಹಠಕ್ಕೆ ಬೀಳುತ್ತಿರಲಿಲ್ಲ.

ಸಂಪಾದನೆ ಆಸೆಗಾಗಿ ಏನನ್ನೂ ಮಾಡದ ವಿಠ್ಠಲ್‌ ಸಿದ್ಧಾಂತ, ಬದ್ಧತೆಗಾಗಿ ಸದಾ, ಮಿಡಿಯುತಿದ್ದ ಜೀವ. ಒಮ್ಮೆ ಒಂದು ದೊಡ್ಡ ಕಾರ್ಯಕ್ರಮಕ್ಕೆ ವಿಶೇಶ ಅತಿಥಿಯನ್ನಾಗಿ ಕರೆದಿದ್ದಾಗ ಗೌರವಧನವೆಂದು ಎರಡೂವರೆ ಸಾವಿರ ರೂಪಾಯಿ ಕವರ್‌ ನಲ್ಲಿ ಇಟ್ಟು ಕೊಟ್ಟಿದ್ದೆವು.

ಮನೆಗೆ ಹೋಗಿ ಪಟ್ಟಣ ತೆರೆದ ವಿಠ್ಠಲ್‌ ಮರಳಿ ಪೋನಾಯಿಸಿ ಇಷ್ಟು ದೊಡ್ಡ ಗೌರವ ಧನ ನಾನು ಈವರೆಗೆ ಪಡೆದೇ ಇಲ್ಲ, ನಿಮ್ಮ ಕವರ್‌ ಜೊತೆಗಿನ ಹಣವನ್ನು ಹಾಗೇ ಎತ್ತಿಟ್ಟಿದ್ದೇನಿ ಈಹಣವನ್ನು ನೀವು ಮಾಡುವ ಒಳ್ಳೆಯ ಕೆಲಸಕ್ಕೆ ಬಳಸಿ ಎಂದು ನಮ್ಮನ್ನು ದಂಗು ಬಡಿಸಿದ್ದರು. ಇಂಥ ಅನೇಕ ನೆನಪುಗಳನ್ನು ಬಿಟ್ಟು ಹೋದ ಹಿರಿಯ ಸಂಗಾತಿ ವಿಠ್ಠಲ್‌ ಈಗಿದ್ದರೂ ಅಷ್ಟೇ ಚುರುಕಾಗಿ ಮುಂದುವರಿಯುತಿದ್ದರು. ಸಂವಿಧಾನದ ಓದುಕಾರ್ಯಕ್ರಮ, ಪುಸ್ತಕ ಪ್ರಕಟಣೆ,ತಿಂಗಳ ಚಿತ್ರ, ಸಹಯಾನ,ಪ್ರೀತಿಪದಗಳ ಪಯಣ, ಬರವಣಿಗೆ, ಭಾಷಣ ಹೀಗೆ ಎಲ್ಲವನ್ನೂ ತನ್ನ ಕರ್ತವ್ಯ ಎನ್ನುವಷ್ಟು ಪ್ರಾಮಾಣಿಕವಾಗಿ ನಿಭಾಯಿಸುತಿದ್ದ ವಿಠ್ಠಲ್‌ ಉತ್ತರ ಕನ್ನಡ ರಾಜ್ಯಕ್ಕೆ ಮಾಣಿಕ್ಯವಾಗಿದ್ದವರು ಈಗ ಅವರಿಲ್ಲ ಎನ್ನುವುದು ನಾವೆಲ್ಲಾ ಅರಗಿಸಿಕೊಳ್ಳಲು ಕಷ್ಟದ ಕೆಲಸ. – ಕನ್ನೇಶ್.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *