ಪ್ರವಾಸಿಗರಿಂದ ತುಂಬಿತುಳುಕುತ್ತಿರುವ ಭೀಮನಗುಡ್ಡ


ಮಳೆಗಾಲದಲ್ಲಿ ಮಲೆನಾಡು ಚೆಂದ ಇಲ್ಲಿಯ ಗುಡ್ಡ,ಬೆಟ್ಟ,ಜಲಪಾತ, ಜಲಧಾರೆಗಳು ಪ್ರಕೃತಿಯ ಸೊಬಗನ್ನು ವಿಜೃಂ ಬಿಸುತ್ತವೆ. ನೀವೀಗ ನೋಡುತ್ತಿರುವ  ಅತಿ ಎತ್ತರದ ಪ್ರದೇಶ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ಭೀಮನಗುಡ್ಡ ಈ ಗುಡ್ಡ ಸಮುದ್ರದಿಂದ ೬೩೬ ಮೀಟರ್‌ ಎತ್ತರದಲ್ಲಿದೆ.


ಮಳೆಗಾಲದ ಪ್ರಾರಂಭದಿಂದ ಬೇಸಿಗೆ ಮುಗಿಯುವವರೆಗೆ ಎಲ್ಲಾ ಕಾಲಗಳಲ್ಲೂ ನೋಡಿ ಮೈಮರೆಯಬಹುದಾದ ಈ ಭೀಮನಗುಡ್ಡ ಸಿದ್ಧಾಪುರ ತಾಲೂಕಿನಿಂದ ನಾಲ್ವತ್ತು ಕಿಲೋ ಮೀಟರ್‌ ದೂರದ ನಿಲ್ಕುಂದ ಪಂಚಾಯತ್‌ ವ್ಯಾಪ್ತಿಯಲ್ಲಿದೆ. ನೆರೆಯ ಶಿರಸಿ ತಾಲೂಕುಕೇಂದ್ರದಿಂದ ೩೦ ಕೀಲೋಮೀಟರ್‌ ದೂರದ ಈ ಭೀಮನಗುಡ್ಡ ಸಿದ್ಧಾಪುರ ಮತ್ತು ಕುಮಟಾ ತಾಲೂಕುಗಳ ಗಡಿಗಳಿಗೆ ಹೊಂದಿಕೊಂಡಿದೆ. ಹೆಗ್ಗರಣೆ ಶಿರಸಿ ರಸ್ತೆಇಂದ ಒಂದುಕಿಲೋಮೀಟರ್‌ ದೂರದ ಈ ಭೀಮನಗುಡ್ಡ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಪ್ರವಾಸಿಗಳನ್ನು ಆಕರ್ಷಿಸುತ್ತಿದೆ.

ಮಳೆಗಾಲದ ನಂತರ ಇಲ್ಲಿಯ  ಪ್ರವಾಸ ಸುರಕ್ಷಿತ, ಅನುಕೂಲಕರವಾದರೂ ಮಲೆನಾಡ ಮಳೆಯ ಸುಬಗು ಕಾಣುವವರು ಮಳೆಯಲ್ಲೇ ಇಲ್ಲಿಗೆ ಬರುತ್ತಾರೆ. ಎತ್ತರದ ಭೀಮಣಗುಡ್ಡ ವೀಕ್ಷಣಾ ಕೇಂದ್ರದಿಂದ ಅಘನಾಶಿನಿ ನದಿ ಹರಿಯುವ ಪಶ್ಚಿಮಘಟ್ಟದ ಕಣಿವೆ ನೋಡಲು ಅದ್ಭುತ ಜಾಗದಂತಿರುವ ಈ ಭೀಮಣಗುಡ್ಡ ಮಂಜಿನಲ್ಲಿ ಮಲಗಿದಾಗ ಇದರ ಸೌಂದರ್ಯ ವರ್ಣಿಸಲಸಾಧ್ಯ ಊಟಿ,ಆಗುಂಬೆಯ ವಾತಾವರಣ ನೆನಪಿಸುವ ಇಲ್ಲಿಯ ಪ್ರಕೃತಿಯ ಸೊಬಗು ಈ ಯುವ ಜನರ ಆಯ್ಕೆಯಾಗಿ ಪ್ರಸಿದ್ಧವಾಗುತ್ತಿದೆ. ಅರಣ್ಯ ಇಲಾಖೆಯ ಕಣ್ಗಾವಲಿನ ರಕ್ಷಿತಾರಣ್ಯ ಪ್ರದೇಶದ ಈ ಭೀಮಣಗುಡ್ಡ ಏರಲು ಅರಣ್ಯ ಇಲಾಖೆಯ ಅನುಮತಿ ಬೇಕು. ಅರಣ್ಯ ಇಲಾಖೆಯ ಪಾಸ್‌ ಪಡೆದು ನಿರ್ಬಂಧಗಳಿಗೊಳಪಟ್ಟು ವೀಕ್ಷಿಸಬೇಕಾದ ಈ ಪ್ರಕೃತಿಯ ಸೊಬಗನ್ನು ನೋಡಲು ಜನ ಸಾಗರದೋಪಾದಿಯಲ್ಲಿ ಬರುತ್ತಿರುವುದು ಇದರ ಪ್ರಸಿದ್ಧಿಗೆ ಸಾಕ್ಷಿ. ಪ್ರವಾಸಿಗರಿಗೆ ಅದರಷ್ಟವಿದ್ದರೆ ಈ ಪ್ರದೇಶದಲ್ಲಿ ವನ್ಯಮೃಗಗಳೂ ಕಾಣಿಸಿಕೊಳ್ಳಬಹುದು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *