

ಸಾಗುವಳಿದಾರರ ಪಹಣಿಪತ್ರಿಕೆಯ ಕರ್ನಾಟಕ ಸರ್ಕಾರ ತೆಗೆಯಲು ಇಚ್ಛಾಶಕ್ತಿ ಬೇಕು. ಇಶ್ಛಾಶಕ್ತಿಯ ಕೊರತೆಯಿಂದ ಗೇಣಿದಾರರು ಈಗಲೂ ಭೂಮಾಲಿಕರಾಗದಿರುವುದು ವಿಷಾದದ ಸಂಗತಿ ಎಂದು ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಬೇಸರಿಸಿದರು.

ಸಿದ್ಧಾಪುರದಲ್ಲಿ ಸಮಾಜಮುಖಿ ಡಾಟ್ ನೆಟ್ ವೆಬ್ ನ್ಯೂಸ್ ಜೊತೆ ಮಾತನಾಡಿದ ಅವರು ನಾಯಕರಾದವರಿಗೆ ಬದ್ಧತೆ,ಇಶ್ಛಾಶಕ್ತಿ ಬೇಕು. ಶಿವಮೊಗ್ಗ ಜಿಲ್ಲೆಯಲ್ಲಿ ಗೇಣಿದಾರರಿಗೆ ಭೂಮಾಲಿಕತ್ವದ ಹಕ್ಕು ಕೊಡುವ ವಿಚಾರದಲ್ಲಿ ನಾವು ಯಶಸ್ವಿಯಾಗಿದ್ದೇವೆ ಇಲ್ಲೇಕೆ ಈಗಲೂ ಈ ಸಮಸ್ಯೆ ಎಂದು ಪ್ರಶ್ನಿಸಿದ ಅವರು.
ಭೂಮಿ ಹೋರಾಟ, ಭೂಮಿ ಹಕ್ಕಿಗಾಗೇ ನಾವು ಜೀವನ ಪರ್ಯಂತ ಚಳವಳಿ ಮಾಡಿದ್ದೇವೆ. ಫಾರಂ ನಂ ೭ ,೭ಎ. ತೊಂದರೆಯ ಕರ್ನಾಟಕ ಸರ್ಕಾರದ ಯಜಮಾನತ್ವ ಹಿಂದೆ ಪಡೆಯಲು ಸಾಕಷ್ಟು ಅವಕಾಶ ಕೊಟ್ಟಾಗಲೂ ಮಾಡಿಕೊಳ್ಳದ ನತದೃಷ್ಟರಿಗಾಗಿ ಸರ್ಕಾರ ಹೊಸ ಆದೇಶ ಮಾಡಬೇಕು ಈ ಆದೇಶಕ್ಕೆ ಕ್ಯಾಬಿನೇಟ್ ತೀರ್ಮಾನ ಬೇಕು. ಕೆಲವೇ ಜಿಲ್ಲೆಗಳ ಅರಣ್ಯ ಭೂಮಿ ಮಾಲಿಕತ್ವ ಸಮಸ್ಯೆ, ಪಹಣಿ ಪತ್ರಿಕೆಯ ಕರ್ನಾಟಕ ಸರ್ಕಾರ ರದ್ಧತಿ ಈ ಬಗ್ಗೆ ಸರ್ಕಾರದ ಗಮನ ಸೆಳೆಯುವಂತೆ ಮಾತನಾಡಿ ಕಾಯಿದೆ ರೂಪಿಸಬೇಕು ಎಂದು ಸಲಹೆ ನೀಡಿದರು.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
