![](https://i0.wp.com/samajamukhi.net/wp-content/uploads/2021/01/Ramakrishna-Hegde.jpg?resize=300%2C360&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
ಮೌಲ್ಯಾಧಾರಿತ ರಾಜಕಾರಣದ ಪ್ರತಿಪಾದಕ ಮಾಜಿ ಮುಖ್ಯಮಂತ್ರಿ ದೊಡ್ಮನೆ ರಾಮಕೃಷ್ಣ ಹೆಗಡೆಯವರ ಜನ್ಮದಿನವನ್ನು ಇಂದು ರಾಜ್ಯದಾದ್ಯಂತ ಆಚರಿಸಲಾಯಿತು.
ಹೆಗಡೆಯವರ ಹುಟ್ಟೂರು ಶಿರಸಿ -ಸಿದ್ಧಾಪುರಗಳಲ್ಲಿ ವಿಶಿಷ್ಟ ಕಾರ್ಯಕ್ರಮಗಳು ನಡೆದವು. ಹೆಗಡೆಯವರ ಸ್ಮರಣಾರ್ಥ ಗ್ರಾಮೀಣಾಭಿವೃದ್ಧಿ, ಮಹಿಳಾ ಸಬಲೀಕರಣದ ಚಿಂತನಾ ಕಾರ್ಯಕ್ರಮಗಳು ನಡೆದವು.
ಸಿದ್ಧಾಪುರದಲ್ಲಿ ರಾಮಕೃಷ್ಣ ಹೆಗಡೆ ಮತ್ತು ಮಹಿಳಾ ಸಬಲೀಕರಣ ವಿಷಯದ ಮೇಲೆ ರಾಷ್ಟ್ರೀಯ ಚಿಂತನೆ ಎನ್ನುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ರಾಮಕೃಷ್ಣ ಹೆಗಡೆಯವರ ಬದ್ಧತೆ,ಜನಪರತೆಗಳನ್ನು ಸ್ಮರಿಸಲಾಯಿತು. ಇದೇ ಕಾರ್ಯಕ್ರಮದ ಅಂಗವಾಗಿ ಸಮಾಜದ ನಾನಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಹಲವು ಮಹಿಳೆಯರನ್ನು ಅಭಿನಂದಿಸಲಾಯಿತು.
ಶಿರಸಿ ಸಿದ್ಧಾಪುರದ ಈ ವಿಭಿನ್ನ ಕಾರ್ಯಕ್ರಮಗಳಲ್ಲಿ ರಾಮಕೃಷ್ಣ ಹೆಗಡೆಯವರ ಕುಟುಂಬದ ಸದಸ್ಯರೆಲ್ಲಾ ಪಾಲ್ಗೊಂಡಿರುವುದು ವಿಶೇಶವೆನಿಸಿತು.ನಾನಾ ಸ್ಥರದ ನಾಯಕರು ರಾಮಕೃಷ್ಣ ಹೆಗಡೆಯವರ ಕೊಡುಗೆಗಳನ್ನು ನೆನಪಿಸಿದರು. ರಾಮಕೃಷ್ಣ ಹೆಗಡೆಯವರ ೯೮ ನೇ ಜನ್ಮದಿನದ ಅಂಗವಾಗಿ ಶಿರಸಿ-ಸಿದ್ಧಾಪುರಗಳಲ್ಲಿ ರಾಮಕೃಷ್ಣ ಹೆಗಡೆ ಚಿರಂತನ ಈ ಕಾರ್ಯಕ್ರಮಗಳನ್ನು ಆಯೋಜಿಸಿತ್ತು.
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)