ಯಕ್ಷಗಾನ ಸುದ್ದಿ- ಲೋಕಲ್‌ ನ್ಯೂಸ್

ಮಾನಸಿಕ ವಿಪ್ಲವಗಳನ್ನು ಕಡಿಮೆ ಮಾಡಕೊಳ್ಳುವುದಕ್ಕೆ ಪೂಜೆ-ಪುನಸ್ಕಾರ ಸತ್ಕಥಾ ಕಾಲಕ್ಷೇಪ, ಸತ್ಸಂಗ ಹಾಗೂ ಯಕ್ಷಗಾನ ತಾಳಮದ್ದಳೆ ಮುಂತಾದವು ಸಹಕಾರಿಯಾಗುತ್ತವೆ. ಮನೆಯಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳ ಜೊತೆ ಜೊತೆಗೇ ಸಾಂಸ್ಕೃತಿಕ ಚಟುವಟಿಕೆಗಳೂ ನಡೆದರೆ ಕೈಗೊಂಡ ಕಾರ್ಯಗಳು ಪೂರಕವಾಗಿ ನಡೆಯುತ್ತವೆ ಎಂದು ಅನಂತ ಹೆಗೆಡ ಗೊಂಟನಾಳ ಹೇಳಿದರು.

ಸಿದ್ಧಾಪುರ ದ ಗೊಂಟನಾಳದ ವೆಂಕಟರಮಣ ಹೆಗಡೆಯವರು ತಮ್ಮ ಮನೆಯಲ್ಲಿ ಅನೂಚಾನವಾಗಿ ನಲವತ್ತು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದ ಅನಂತ ಚತುರ್ದಶಿ ವ್ರತದ ಉದ್ಯಾಪನೆಯ ನಿಮಿತ್ತವಾಗಿ ಗುರುವಾರದಂದು ನಡೆದ ತಾಳಮದ್ದಳೆ ವೇದಿಕೆಯಲ್ಲಿ ಮಾತನಾಡುತ್ತ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು.

ತಾಲೂಕಿನ ಕಲಾಭಾಸ್ಕರ (ರಿ) ಇಟಗಿಯವರು ಸಂಯೋಜನೆಯಲ್ಲಿ ಕವಿ ಮಾಲೆಕೊಡಲು ಶಂಭು ಗಣಪತಿ ಭಟ್ಟ ವಿರಚಿತ ಚಂದ್ರಹಾಸ ಚರಿತ್ರೆ ಎಂಬ ಯಕ್ಷಗಾನ ತಾಳಮದ್ದಳೆಯು ಭಕ್ತಿ-ಭಾವ ಪುರಸ್ಸರವಾಗಿ ಪ್ರದರ್ಶನವು ಸಾಂಗವಾಗಿ ನೆರವೇರಿತು. ಗಣಪತಿ ಹೆಗಡೆ ಮುರೂರು ಹಾಗೂ ಶಶಿಕಲಾ ಹೆಗಡೆ ದ್ಯಾವಣಗದ್ದೆ ಭಾಗವತರಾಗಿ ಸುಶ್ರಾವ್ಯ ಹಾಡುಗಾರಿಕೆಯ ಮೂಲಕ ಪ್ರದರ್ಶನದ ಯಶಸ್ಸಿಗೆ ಮೂಲಕಾರಣರಾದರು. ಶರತ್ ಜಾನಕೈ ಮದ್ದಳೆಯಲ್ಲಿಯೂ ರಘುಪತಿ ಹೂಡೆಹದ್ದ ಇವರು ಚಂಡೆವಾದನಗಳಲ್ಲಿ ಸಹಕರಿಸಿದರು.

ಬೆಂಕ್ಟಳ್ಳಿ ಅರುಣಕುಮಾರ ಬಿ.ಟಿ. ಸಾಗರ ರ ದುಷ್ಟಬುದ್ದಿ ಪಾತ್ರವು ಸೊಗಸಾಗಿ ನಿರೂಪಿತವಾಯಿತು. ರವಿಶಂಕರ ಸಾಗರ ರ ಮದನನ ಪಾತ್ರವು ಸ್ವಾರಸ್ಯಕರವಾಗಿ ಮೂಡಿಬಂತು. ವಿಷಯೆಯಾಗಿ ಇಟಗಿ ಮಹಾಬಲೇಶ್ವರ ಭಟ್ಟ ಕಾಣಿಸಿಕೊಂಡರು. ಕವಲಕೊಪ್ಪ ವಿನಾಯಕ ಹೆಗಡೆ ಚಂದ್ರಹಾಸನನ್ನು ಕಟ್ಟಿಕೊಟ್ಟರು. ಕಟುಕರ ಪಾತ್ರದಲ್ಲಿ ನಾರಾಯಣ ಹೆಗಡೆ ಕಾನಜಡ್ಡಿ, ಕುಳಿಂದನಾಗಿ ಮಂಜುನಾಥ ಭಟ್ಟ ಕಲ್ಮನೆ, ಕಪ್ಪದೂತ ಮತ್ತು ಬ್ರಾಹ್ಮಣರಾಗಿ ಮುರೂರು ನಾಗೇಂದ್ರ ಹಾಸ್ಯದ ಹೊನಲನ್ನೇ ಹರಿಸಿದರು.ಪ್ರಸನ್ನ ಹೊಸಗದ್ದೆ ಹಾಗೂ ಇತರರು ಉಳಿದ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದರು. ಇಂತಹ ಕಲಾಪ್ರದರ್ಶನಗಳಿಂದಲೇ ವ್ರತಗಳು ಸತ್ಫಲವನ್ನು ಕೊಡುತ್ತವೆ ಎನ್ನುವ ಅಭಿಪ್ರಾಯವು ಸಾರ್ವತ್ರಿಕವಾಗಿ ವ್ಯಕ್ತವಾಯಿತು.

ಸಿದ್ದಾಪುರ
ತಾಲೂಕಿನ ಕೋಡ್ಸರ(ಮುಠ್ಠಳ್ಳಿ)ಯ ಸಿದ್ಧಿವಿನಾಯಕ ರೈತಯುವಕ ಸಂಘ ಹಾಗೂ ಊರವರ ಸಹಕಾರದಲ್ಲಿ ಅನಂತಚತುರ್ದಶೀ ಪ್ರಯುಕ್ತ ಕೋಡ್ಸರ ಮುಠ್ಠಳ್ಳಿ ಶಾಲಾ ಆವಾರದಲ್ಲಿ ಶಲ್ಯ ಸಾರಥ್ಯ ಯಕ್ಷಗಾನ ತಾಳಮದ್ದಳೆ ಗುರುವಾರ ನಡೆಯಿತು.
ಹಿಮ್ಮೇಳದಲ್ಲಿ ರಾಮಕೃಷ್ಣ ಹೆಗಡೆ ಹಿಲ್ಲೂರು,ಆದರ್ಶ ಎಂ.ಆರ್, ಶಂಕರ ಭಾಗವತ ಯಲ್ಲಾಪುರ, ಗಜಾನನ ಕತಗಾಲ ಸಹಕರಿಸಿದರು.
ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ವಿ.ಉಮಾಕಾಂತ ಭಟ್ಟ ಕೆರೆಕೈ(ಶಲ್ಯ), ವಾಸುದೇವ ರಂಗಾ ಭಟ್ಟ ಮಧೂರು(ಕೌರವ), ಗೊರಮನೆ ಮಂಜುನಾಥ (ಕರ್ಣ) ಪಾತ್ರವನನು ನಿರ್ವಹಿಸಿದರು.
ಸೀತಾರಾಮ ಹೆಗಡೆ ಹೊಂಡಗಾಶಿ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ವಿದ್ಯಾವಾಚಸ್ಪತಿ ವಿ.ಉಮಾಕಾಂತ ಭಟ್ಟ ಕೆರೆಕೈ ಅವರನ್ನು ಊರವರ ಪರವಾಗಿ ಬಿ.ಡಿ.ಹೆಗಡೆ ಹೊಲಗದ್ದೆ ಸನ್ಮಾನಿಸಿ ಗೌರವಿಸಿದರು.ರಾಮಕೃಷ್ಣ ಹೆಗಡೆ ಬಕ್ಕೇಮನೆ ಸ್ವಾಗತಿಸಿದರು. ನಾರಾಯಣ ಹೆಗಡೆ ನೇರ್ಲಮನೆ ವಂದಿಸಿದರು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *