![](https://i0.wp.com/samajamukhi.net/wp-content/uploads/2023/10/KBV-Photo.jpg?resize=128%2C166&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
![](https://i0.wp.com/samajamukhi.net/wp-content/uploads/2023/10/KBV-Photo.jpg?resize=128%2C166&ssl=1)
ಕಾವ್ಯವೆಂದರೆ ಒರಸಿ ಸೋಸಿದ ಚಿತ್ರ… ಕಾವ್ಯವೆಂದರೆ…ಕಿತ್ತು,ಒರೆಸಿ ತಿಂದು ಗಂಧ ಮಾಡುವ ವಿಚಿತ್ರ. ಕಾವ್ಯ ಕವಿತೆಗಳೆಂದರೆ ಸುಮ್ಮನೆ ಅಲ್ಲ ಅದು ಬೆವರೆಂದರೂ ಪಾಪ ಯಾಕೆಂದರೆ ಸುರಿಸುವ ರಕ್ತ! ಇಂಥ ಅನುಭವಗಳನ್ನೇ ಬರೆದು ಗುರಿಯಾದವರು,ಗರಿಯಾದವರು ಈ ಗೌಡರು.
ಬಂಡಾಯವೆಂದರೆ ಬಂಡಾಯ, ಸ್ನೇಹವೆಂದರೆ ಮಧುರ ಸ್ನೇಹ ಎಲ್ಲದಕ್ಕೂ ಒಗ್ಗುವ ಕವಿ ಕೆ.ಬಿ. ವೀರಲಿಂಗನಗೌಡ ಈ ಕಾಲದ ಗಟ್ಟಿಕಾಳಿನ ಕಾವ್ಯಕ್ಕೆ ಹೊಸ ಹೆಸರು ಅವರ ಕವಿತೆಗಳೇ ಅವರ ಸ್ಪಷ್ಟತೆ, ಬದ್ಧತೆ,ಬದುಕಿನ ಕನ್ನಡಿ. ಉರಿವ ವರ್ತಮಾನಕ್ಕೆ ಬೇಡವಾದ ಈ ಕವಿ ಎಲ್ಲಾ ಕಾಲಕ್ಕೂ ಬೇಕಾಗುವ ಸಾಹಿತಿ.
ವೃತ್ತಿಯಿಂದ ಶಿಕ್ಷಕರು,ಪ್ರವೃತ್ತಿಯಿಂದ ಕಲಾವಿದರು,ಸಾಹಿತಿ,ಕವಿ. ದೇವರನ್ನು ಪೂಜಿಸುವ ಅರ್ಚಕರ ಹಿನ್ನೆಲೆಯ ಬದಾಮಿಯ ಈ ಹುಳಿಮಾವು ಬಂಡಾಯದ ಜ್ಯೋತಿ!
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)