![](https://i0.wp.com/samajamukhi.net/wp-content/uploads/2023/10/ಭಾ.jpg?resize=820%2C500&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
ಸಿದ್ಧಾಪುರ,ಅ.೭- ಎಲೆಚುಕ್ಕೆ ರೋಗ ಸೇರಿದಂತೆ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಸಚಿವರನ್ನು ಭೇಟಿಮಾಡುವುದರಿಂದ ಏನಾದರೂ ಪ್ರಯೋಜನವಿದೆಯೆ ಎಂದು ಪ್ರಶ್ನಿಸಿರುವ ಬಿ.ಜೆ.ಪಿ. ರೈತರ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರಕ್ಕೆ ಆಗ್ರಹಿಸಿದೆ.
ಹಿಂದಿನ ಸರ್ಕಾರದ ಅವಧಿಯಲ್ಲಿ ಎಲೆಚುಕ್ಕೆ ರೋಗಕ್ಕೆ ತಕ್ಷಣ ಸ್ಫಂದನೆ ಸಿಕ್ಕಿತ್ತು ಈ ಸರ್ಕಾರಕ್ಕೆ ರೈತರ ಪರ ಕಾಳಜಿ ಇಲ್ಲ,ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ.ರಸ್ತೆ ದುರಸ್ತಿ ಮಾಡಲಾಗದಿದ್ದರೆ ಹೊಂಡ ಇದೆ ಎಚ್ಚರಿಕೆ ಎನ್ನುವ ಫಲಕ ಅಳವಡಿಸಿ ಜನರ ಪ್ರಾಣ ರಕ್ಷಣೆ ಮಾಡಬೇಕು.
![](https://i0.wp.com/samajamukhi.net/wp-content/uploads/2023/10/ಭಾ.jpg?resize=760%2C570&ssl=1)
ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಶಾಸಕರು ಸಚಿವರನ್ನು ಭೇಟಿ ಮಾಡುವುದರಿಂದ ಎನಾದರೂ ಪ್ರಯೋಜನವಿದೆಯೆ ಎಂದು ಅವರನ್ನೇ ಕೇಳಬೇಕು ಎಂದು ತಿಳಿಸಿದ ಬಿ.ಜೆ.ಪಿ. ತಾಲೂಕಾ ಮಂಡಳದ ಅಧ್ಯಕ್ಷ ಮಾರುತಿ ನಾಯ್ಕ ಪ್ರಮುಖ ಇಲಾಖೆಗಳ ಅನುದಾನ ಕಡಿಮೆ ಮಾಡಿ ಹೇಗೆ ಜನಸಾಮಾನ್ಯರಿಗೆ ನೆರವಾಗುತ್ತಾರೆ ಎಂದು ಪ್ರಶ್ನಿಸಿದರು.
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)