ಹೀಗೂ ಉಂಟೆ…?-ಬದ್ರುದ್ದೀನ್ ಫರೀದ್ ನಗರ ಹರೇಕಳವನ್ನು ಎತ್ತರಕ್ಕೇರಿಸಿದ ಛಲಗಾರ!

ಜಿಲ್ಲಾ_ರಾಜ್ಯೋತ್ಸವ_ಪ್ರಶಸ್ತಿ ಸ್ವೀಕಾರ

ಬದ್ರುದ್ದೀನ್ ಫರೀದ್ ನಗರ

ಹರೇಕಳವನ್ನು ಎತ್ತರಕ್ಕೇರಿಸಿದ ಛಲಗಾರ.. Baduru Harekala


ಹರೇಕಳ ಗ್ರಾಮ ಪಂಚಾಯತ್ ಅತ್ಯಂತ ಸಣ್ಣ ಪ್ರಾಯದಲ್ಲೇ ಹರೇಕಳ ಎನ್ನುವ ಕುಗ್ರಾಮದ ಅಧ್ಯಕ್ಷ ಗಾದಿಗೆ ಏರಿದವರು. ಇವರು ಅಧ್ಯಕ್ಷರಾದಾಗ ಗ್ರಾಮಕ್ಕೇನು ಮಾಡಿಯಾರು ಎಂದು ಆಡಿಕೊಂಡವರೇ ಹೆಚ್ಚು. ಆದರೆ ಅಂದು ಆಡಿಕೊಂಡವರು ಅವರ ಅವಧಿಯಲ್ಲಿ ಶರವೇಗದಲ್ಲಿ ಆದ ಗ್ರಾಮದ ಅಭಿವೃದ್ಧಿ ಕಂಡು ಕನಸೋ ನನಸೋ ಎಂದು ಗೊಂದಲದಲ್ಲಿದ್ದಾರೆ‌.

ತೀಕ್ಷ್ಣ ಮಾತುಗಳು, ಎಲ್ಲರೊಂದಿಗೂ ಬೆರೆಯುವ, ಯಾರನ್ನು ಬೇಕಾದರೂ ತನ್ನ ಮಾತಿನ ಬಲೆಗೆ ಸಿಲುಕಿಸಬಲ್ಲ ಮೃಧು ಸ್ವಭಾವ, ಅಭಿವೃದ್ಧಿಯ ಚಿಂತನೆಯೇ ಅವರಿಗೆ ಸಣ್ಣ ಪ್ರಾಯದಲ್ಲೇ ಸರ್ಕಾರಿ ಮಟ್ಟದ ಪ್ರಶಸ್ತಿಯತ್ತ ಕೊಂಡೊಯ್ದಿದೆ‌‌.

ರಾಜ್ಯದ ಸ್ಪೀಕರ್ ಯು.ಟಿ.ಖಾದರ್ ಅವರ ತಂದೆ ದಿ.ಯು‌‌.ಟಿ.ಫರೀದ್ ಅವರ ಹೆಸರುಳ್ಳ ಊರಿನ ಬದ್ರು ಬಗ್ಗೆ ಖಾದರ್ಗೂ ವಿಶೇಷ ಅಕ್ಕರೆ‌.‌ ಹಾಗೆಂದ ಮಾತ್ರಕ್ಕೆ ಅವರಿಗೆ ಯಾರದ್ದೋ ಪ್ರಭಾವದಿಂದ ಪ್ರಶಸ್ತಿ ಲಭಿಸಿಲ್ಲ‌. ಸರ್ಕಾರೀ ಅಧಿಕಾರಿಗಳೇ ಪಂಚಾಯತ್ ಮಟ್ಟದ ಸಾಧನೆ ಗುರುತಿಸಿ ಕೊಟ್ಟಿದ್ದಾರೆ. ಇದನ್ನು ನೋಡುವಾಗ ಅವರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಬರಬೇಕಿತ್ತು ಎಂದು ಭಾವಿಸಿದರೂ ತಪ್ಪಿಲ್ಲ.

ವಾರ್ಷಿಕವಾಗಿ 15 ಲಕ್ಷ ಆದಾಯ, ಕೋಳಿಗೂಡು ಮಾದರಿ ಪಂಚಾಯತ್ ಈಗ ಸಂಪೂರ್ಣ ಬದಲಾಗಿದೆ‌‌‌. ಒಂದೂವರೆ ಕೋಟಿಯ ವಿದಾನಸೌಧ ಮಾದರಿಯ ಪಂಚಾಯತ್ ಕಟ್ಟಡ, ಸಭಾಂಗಣ, ಆಧುನಿಕ ಗ್ರಂಥಾಲಯ, ಅಂಚೆ ಕಚೇರಿ, ವೃಂದಾವನ, ಹವಾನಿಯಂತ್ರಿತ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ಅಕ್ವೇರಿಯಂ, ಪ್ರತ್ಯೇಕ ಕೊಠಡಿಗಳು. ಅಂಗಳಕ್ಕೆ ಇಂಟರ್ ಲಾಕ್ ಬೇರೆ.

ಸ್ವಚ್ಚತೆಗೆ ಘಟಕ, ಜನರನ್ನು ಎಚ್ಚರಿಸಲು ಅಲ್ಲಲ್ಲಿ ಫಲಕಗಳು‌. ಗ್ರಾಮಕ್ಕೆಂದೇ ಒಂದು ಆಸ್ಪತ್ರೆ. ಇದೆಲ್ಲವನ್ನೂ ಮಾಡಿಸುವಲ್ಲಿ ಸಫಲರಾವರು. ಈ ಎಲ್ಲಾ ಕೆಲಸಕ್ಕೂ ಸರ್ಕಾರದ ಅನುದಾನ ಸಿಕ್ಕಿದೆ ಎಂದರೆ ಮೂರ್ಖತನ. ಸರ್ಕಾರಿ ಮಟ್ಟದಲ್ಲಿ ಸಿಕ್ಕ ಅನುದಾನಕ್ಕಿಂತಲೂ ಹೆಚ್ಚಿನ ಅನುದಾನವನ್ನು ದಾನಿಗಳ ಮೂಲಕ ಕ್ರೋಡೀಕರಿಸಿದ್ದು ಅವರ ಅಭಿವೃದ್ಧಿಯ ಕನಸು, ನಿರಂತರ ಪ್ರಯತ್ನಕ್ಕೆ ಪಂಚಾಯತ್ ಸದಸ್ಯರು ಸಂಪೂರ್ಣ ಸಹಕಾರ ನೀಡಿದ್ದಾರೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಪಂಚಾಯತ್ ಸದಸ್ಯರು, ಅಧಿಕಾರಿಗಳು, ಜನರ ಸಹಕಾರ ಸಿಗಬೇಕಾದರೆ ಸಹಾಯ ಯೋಚಿಸುವವರ ಬಗ್ಗೆ ವಿಶ್ವಾಸ, ಅಭಿಮಾನ ಹೊಂದಿರಬೇಕಾಗುತ್ತದೆ. ಅದೆಲ್ಲವನ್ನೂ ಬದ್ರುದ್ದೀನ್ ಸಂಪಾದಿಸಿದ್ದರು.

ಎರಡೂವರೆ ವರ್ಷಗಳ ಹಿಂದೆ ಅವರು ಅಧ್ಯಕ್ಷ ಗಾದಿಗೆ ಏರುವಾಗ ಇದ್ದ ಪಂಚಾಯತ್ ನೋಡಿದವರು ಇಂದಿನ ಪಂಚಾಯತ್ ನೋಡಿ ಅಚ್ಚರಿಗೊಳಗಾಗುತ್ತಿದ್ದಾರೆ. ಹರೇಕಳ ಗ್ರಾಮ ಪಂಚಾಯತ್ ಇಂದು ರಾಜ್ಯಕ್ಕೇ ಮಾದರಿಯಾಗಿದ್ದು, ಕೋಟಿಗಟ್ಟಲೆ ಅನುದಾನ ಇರುವ ನಗರಾಡಳಿಗಾರರಲ್ಲಿ ಅಸೂಯೆ ಮೂಡಿಸುವಂತಿದೆ. ಗ್ರಾಮಕ್ಕೆ ಮುಕುಟ ಎನ್ನುವಂತೆ ಇಲ್ಲಿನ ಇತಿಹಾಸ ಶಾಶ್ವತವಾಗಿಡುವ ಕೃತಿಯೂ ಹೊರಬಂದಿದೆ. ಈ ಕೃತಿಗಾಗಿ ಅವರು ತೋರಿಸಿದ ಉತ್ಸಾಹ ಇನ್ಯಾರಲ್ಲೂ ಕಾಣಲಸಾಧ್ಯ‌. ಓರ್ವ ಪ್ರಾಮಾಣಿಕ, ದಕ್ಷ, ಪ್ರಬುದ್ಧ ವ್ಯಕ್ತಿಯ ಕೈಗೆ ಆಡಳಿತ ಸಿಕ್ಕರೆ ಯಾವ ರೀತಿಯ ಬದಲಾವಣೆ ಕಾಣಬಹುದು ಎನ್ನುವುದಕ್ಕೆ ಹರೇಕಳ ಗ್ರಾಮ ಪಂಚಾಯತ್ ಕಚೇರಿ, ಅದರ ಹಿಂದಿರುವ ನಿಕಟಪೂರ್ವ ಅಧ್ಯಕ್ಷರಾದ ಬದ್ರುದ್ದೀನ್ ಪ್ರತ್ಯಕ್ಷ ನಿದರ್ಶನ. ಈ ಮೂಲಕ ಪ್ರಶಸ್ತಿಯ ಘನತೆಯೂ ಹೆಚ್ಚಿದಂತಾಗಿದೆ. ಇವರ ಮುಂದಿನ ಜೀವನ ಯಶಸ್ಸಿನಿಂದಲೇ ಕೂಡಿರಲಿ ಈ ಪ್ರಶಸ್ತಿ ಮುಂದಿನ ದಿನಗಳಲ್ಲಿ ಇತರ ಪಂಚಾಯತ್ ಅಧ್ಯಕ್ಷರುಗಳಿಗೆ ದಾರಿದೀಪ ಆಗಿರಲಿ ಎನ್ನುವ ಹಾರೈಕೆಯೊಂದಿಗೆ…

ಅನ್ಸಾರ್ ಇನೋಳಿ, ಪತ್ರಕರ್ತ

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಶಿರೂರು…ಮತ್ತೊಂದು ದುರಂತ! ಶಿರಸಿ-ಅಂಕೋಲಾ ರಸ್ತೆ ಬಂದ್!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ...

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

Latest Posts

ಶಿರೂರು…ಮತ್ತೊಂದು ದುರಂತ! ಶಿರಸಿ-ಅಂಕೋಲಾ ರಸ್ತೆ ಬಂದ್!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದಿದೆ. ಇದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾಂದರ್ಭಿಕ ಚಿತ್ರ‌ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಕಳೆದ ೨೪ ಗಂಟೆಗಳಲ್ಲಿ ನಿರಂತರ ಮಳೆಯಾಗಿದೆ. ಇದರ ಪರಿಣಾಮ ಶಿರಸಿ-ಅಂಕೋಲಾ ಮಾರ್ಗದ ಮಧ್ಯೆ ಗುಡ್ಡ...

Recommended For You

About the Author: Kanneshwar Naik

Leave a Reply

Your email address will not be published. Required fields are marked *