ಬಹುವಿಶೇಶಗಳ ಆಸ್ಫತ್ರೆ ಕೂಗು ಆಳುವವರನ್ನು ಎಬ್ಬಿಸಲಿ…

ಮತ್ತೊಮ್ಮೆ ಉತ್ತರ ಕನ್ನಡ ಜಿಲ್ಲೆಯ ಬಹುವೈಶಿಷ್ಟ್ಯಗಳ ಆಸ್ಫತ್ರೆ ಕೂಗು ಅನುರಣಿಸಿದೆ. ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ಅವರ ಹುಟ್ಟೂರು ಸಿದ್ಧಾಪುರದ ಸರ್ಕಾರಿ ಆಸ್ಫತ್ರೆ ಮೇಲ್ದರ್ಜೆಗೇರಿಸಿದ ನಾಲ್ಕು ದಶಕಗಳ ನಂತರ ಕೂಡಾ ಸಿದ್ಧಾಪುರ,ಜೊಯಡಾ,ಮುಂಡಗೋಡಿನಂಥ ತಾಲೂಕುಗಳ ಜನ ಸಾಮಾನ್ಯ ವ್ಯವಸ್ಥೆಯ ವೈದ್ಯಕೀಯ ಚಿಕಿತ್ಸೆಗೂ ನೆರೆಯ ತಾಲೂಕುಗಳನ್ನೇ ಅವಲಂಬಿಸಬೇಕಾದ ಅನಿವಾರ್ಯತೆಗಳಿವೆ!

ಕಾರವಾರ ಜಿಲ್ಲಾ ಕೇಂದ್ರವಾಗಿದ್ದರೂ ಕೂಡಾ ಆಭಾಗದ ಜನ ಉನ್ನತ ಚಿಕಿತ್ಸೆಗಾಗಿ ಬಾಂಬೋಲಿ,ಗೋವಾ ಪಣಜಿ ಕಡೆ ಧಾವಿಸುತ್ತಾರೆ. ಹಳಿಯಾಳ.ಜೊಯಡಾ.ಮುಂಡಗೋಡುಗಳ ಜನರಿಗೆ ಅಕ್ಕ ಪಕ್ಕದಲ್ಲಿ ಹುಬ್ಬಳ್ಳಿ, ಬೆಳಗಾವಿಗಳ ವ್ಯವಸ್ಥೆಗಳಾದರೂ ದೊರೆಯುತ್ತವೆ.ಯಲ್ಲಾಪುರ, ಸಿದ್ಧಾಪುರ,ಅಂಕೋಲಾ,ಕುಮಟಾ,ಹೊನ್ನಾವರ, ಭಟ್ಕಳಗಳ ಜನ ಮಂಗಳೂರು, ಉಡುಪಿಗಳ ಕಡೆ ಧಾವಿಸದೆ ವಿಧಿ ಇಲ್ಲ.

ಜಿಲ್ಲೆಯ ೧೨ ತಾಲೂಕುಗಳಲ್ಲಿ ಕನಿಷ್ಠ ಹತ್ತು ತಾಲೂಕುಗಳ ಜನ ವೈಧ್ಯಕೀಯ ವ್ಯವಸ್ಥೆ ಇಲ್ಲದೆ ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಈ ಐವತ್ತು ವರ್ಷಗಳಲ್ಲಿ ಸರ್ಕಾರ ಮತ್ತು ಆಳುವವರಿಗೆ ವೈಧ್ಯಕೀಯ ಸೇರಿದಂತೆ ನಾಗರಿಕ ಸೇವಾ,ಶೌಲಭ್ಯಗಳನ್ನು ಕೇಂದ್ರೀಕರಿಸಬಾರದು ಎನ್ನುವ ಸತ್ಯ ಅರ್ಥವಾಗಿಲ್ಲ ಎನ್ನೋಣವೆ?

ಪ್ರೇಮಿಯೊಬ್ಬ ತನ್ನ ಪ್ರೀಯತಮೆ ನೋಡಲು ಹೋಗಲು ದಾರಿ ಇಲ್ಲ ಎಂದು ಗುಡ್ಡ ಕಡೆದು ರಸ್ತೆ ಮಾಡಿದನಂತೆ!

ಶಾನುಭೋಗರು ಜಾತಿ-ಆದಾಯ ಪ್ರಮಾಣ ಪತ್ರ ತಿರಸ್ಕರಿಸಿದ್ದಕ್ಕೆ ಸಾಮಾನ್ಯನೊಬ್ಬ ಶಾಸಕನಾಗಿ,ಸಚಿವನಾದನಂತೆ!

ಎಷ್ಟೊಂದು ಸಾಧ್ಯತೆಗಳು…

ನಮ್ಮ ಯುವಪೀಳಿಗೆ ಸಾಮಾಜಿಕ ಜಾಲತಾಣದಲ್ಲಿ ಕ್ರಾಂತಿ ಮಾಡಿದಂತೆ ಉತ್ತರ ಕನ್ನಡದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಫತ್ರೆ ಸ್ಥಾಪನೆಗೆ ವಿಫಲ ಪ್ರಯತ್ನ ನಡೆಸಿತು.

ಸಾಮಾಜಿಕ ನ್ಯಾಯಕ್ಕಾಗಿ ಅಂಕೋಲಾದಿಂದ ಕಾಗೋಡಿಗೆ ಪಾದಯಾತ್ರೆ ನಡೆಯಿತು. ಅರಣ್ಯ ಸಾಗುವಳಿ ಭೂಮಿ ಹಕ್ಕಿಗಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಲ್ಕೈದು ಪಾದಯಾತ್ರೆಗಳಾದವು. ಈ ಪಾದಯಾತ್ರೆಗಳಿಗೂ ಕಾಶಿಯಾತ್ರೆಗೂ ಅಂಥಾ ವ್ಯತ್ಯಾಸಗಳೇನೂ ಕಾಣಲೇ ಇಲ್ಲ.

ಈಗ ಅನಂತಮೂರ್ತಿ ಹೆಗಡೆ ಶಿರಸಿಯಿಂದ ಘಟ್ಟ ಇಳಿದು ಜಿಲ್ಲಾಧಿಕಾರಿಗಳ ಕಾರವಾರ ಕಛೇರಿ ವರೆಗೆ ಒಂದು ವಾರದ ಪಾದಯಾತ್ರೆ ಪ್ರಾರಂಭಿಸಿದ್ದಾರೆ.

ಪ್ರತಿಪ್ರಯತ್ನ, ಹೋರಾಟಕ್ಕೂ ರಾಜಕೀಯ ಆರೋಪ, ಟೀಕೆ- ವಿಮರ್ಶೆ, ಆಕ್ಷೇಪಗಳು ಇದ್ದೇ ಇರುತ್ತವೆ. ಆದರೆ ವ್ಯಕ್ತಿಯೊಬ್ಬರ ಬದ್ಧತೆ ಕೂಡಾ ಪರೀಕ್ಷಿಸಲ್ಪಡುತ್ತದೆ. ಎಲ್ಲರಿಗೂ ಬೇಕಾಗುವ ಆಸ್ಫತ್ರೆ, ಸಾಮಾಜಿಕ ನ್ಯಾಯ, ವೈಧ್ಯಕೀಯ ನ್ಯಾಯ ಶಿಕ್ಷಣ, ಅರಣ್ಯ ಭೂಮಿ ಹಕ್ಕು ಅಂತಿಮವಾಗಿ ಸಾಮೂಹಿಕ ಸ್ವಾತಂತ್ರ್ಯಕ್ಕಾಗಿ ಕೆಲವರಾದರೂ ಹೋರಾಡಬೇಕಲ್ಲವೆ?

ಅನಂತಮೂರ್ತಿ ಹೆಗಡೆಯವರಂಥವರನ್ನು ಬೆಂಬಲಿಸದಿದ್ದರೂ ಶುಭಹಾರೈಸಿ ಉತ್ತೇಜಿಸಲೇನಡ್ಡಿ?

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *