ದುಡಿಮೆಗೆ ಬೆಂಗಳೂರಿಗೆ ಹೋಗಬೇಕೆಂದಿದ್ದ ಕಲ್ಲಪ್ಪ ಹುಟ್ಟೂರಲ್ಲೇ ಕೋಟೆ ಕಟ್ಟಿದ ಕತೆ

ಕೃಷಿ ಲಾಭದಾಯಕವಲ್ಲ ಎನ್ನುವುದು ಸಾಮಾನ್ಯ ಗೃಹಿಕೆ. ಆದರೆ ಜನಸಾಮಾನ್ಯರ ಈ ಅನುಭವವನ್ನು ಸುಳ್ಳು ಮಾಡಿದವರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕಲ್ಲಪ್ಪ ನಾಯ್ಕ ಕಲಕರಡಿ. ತಮಗಿದ್ದ ಮೂಲ ೬ ಎಕರೆ ಬರಡು ಭೂಮಿಯಲ್ಲಿ ಏನು ಮಾಡಲು ಸಾಧ್ಯ ಎಂದು ಯೋಚಿಸಿದ ಯುವಕ ಕಲ್ಲಪ್ಪ ನಾಯ್ಕ ಕಲಕರಡಿ ಹೊಟ್ಟೆಪಾಡಿನ ದುಡಿಮೆಗೆ ಬೆಂಗಳೂರಿನ ದಾರಿ ಹಿಡಿಯುವ ಯೋಚನೆ ಮಾಡಿದ್ದರು.ತಾನೊಂದು ಬಗೆದರೆ ವಿಧಿ ಮತ್ತೊಂದು ಬಗೆಯಿತು ಎನ್ನುವಂತೆ ಬೆಂಗಳೂರಿಗೆ ಗೋಗುವ ಯೋಚನೆ ಕೈಬಿಟ್ಟ ಕಲ್ಲಪ್ಪ ತನ್ನ ಭೂಮಿಜೊತೆ ಮತ್ತಷ್ಟು ಎಕರೆಭೂಮಿಯನ್ನು ಲೀಜ್‌ ಪಡೆದರು. ಭತ್ತ,ನಂತರ ಕಬ್ಬು ಶುಂಠಿ,ಮಾವು,ನೆಲ್ಲಿ ಬಾಳೆ ಬೆಳೆಯುತ್ತಾ ಪ್ರತಿವರ್ಷ ಮಾಡಿದ ಉಳಿತಾಯದಿಂದ ಹೊಸ ಭೂಮಿ ಖರೀದಿಸುತ್ತಾ ಸಾಗಿದರು. ೬ ಎಕರೆ ಒಣ ಭೂಮಿಯಿಂದ ಪ್ರಾರಂಭವಾದ ಇವರ ಜರ್ನಿ ಈಗ ಅರವತ್ತು ಎಕರೆ ಸ್ವಂತ ಭೂಮಿಗೆ ಬಂದು ಮುಟ್ಟಿದೆ.

೬೦ ಎಕರೆಯಲ್ಲಿ ಬಹುತೇಕ ೪೦ ಎಕರೆಅಡಿಕೆ ಬೆಳೆಯುತ್ತಿರುವ ಇವರು ಅಲ್ಪಸ್ವಲ್ಫ ಭತ್ತ,ಅನಾನಸ್‌ ಬೆಳೆಯುತಿದ್ದಾರೆ. ಕೃಷಿಯಲ್ಲಿ ಅಡಿಕೆಯಿಂದ ಮಾತ್ರ ಲಾಭ ಪಡೆಯಬಹುದು ಎನ್ನುವ ಕಲ್ಲಪ್ಪ ತಮ್ಮ ೪೦ ವರ್ಷಗಳ ಪಯಣದಲ್ಲಿ ಕೃಷಿಯೊಂದಿಗೆ ವ್ಯಾಪಾರ ಮಾಡಿದ್ದಾರೆ, ಅನಾನಸ್‌ ಬೆಳೆದು ಉತ್ತರ ಭಾರತದ ವರೆಗೆ ಮಾರುಕಟ್ಟೆ ಹುಡುಕಿ ಅಲೆದಿದ್ದಾರೆ.

ಹೆಚ್ಚು ಶಿಕ್ಷಿತರಲ್ಲದ ಕಲ್ಲಪ್ಪ ನಾಯ್ಕ ಹಿತೈಶಿಗಳು, ಪರಿಚಿತರ ಸಹಕಾರ ಪಡೆದು ಅವಿಭಕ್ತ ಕುಟುಂಬದ ಜವಾಬ್ಧಾರಿ ಹೊರುತ್ತಲೇ ಕೃಷಿ ಸಾಧಕರೆನಿಸಿದ್ದಾರೆ. ಯಾವುದೇ ಕೆಲಸವನ್ನು ಶೃದ್ಧೆ, ತಾಳ್ಮೆ, ಆಸಕ್ತಿಯಿಂದ ಮಾಡಿದರೆ ಗೆಲುವು ಸಿಗುತ್ತದೆ ಎನ್ನುವ ನಾಯ್ಕರ ತೋಟದಲ್ಲಿ ಈಗ ತೆಂಗು,ಬಾಳೆ ಅಡಿಕೆಗಳು ಹಸಿರು ಉಕ್ಕಿಸುತ್ತಿವೆ.

ಅಡಿಕೆ ತೋಟಗಳೇ ಅಪರೂಪವಾಗಿದ್ದ ಬನವಾಸಿ ಭಾಗದಲ್ಲಿ ಅಡಿಕೆ,ಬಾಳೆ,ತೆಂಗು ಬೆಳೆದ ಕಲ್ಲಪ್ಪ ನಾಯ್ಕ ಅರೆಬಯಲುಸೀಮೆಯಲ್ಲಿ ವ್ಯವಸಾಯದಲ್ಲಿ ಹೆಸರು ಮಾಡಿ ಮಿಶ್ರಬೆಳೆ ಬೆಳೆಯುವ ಮಾದರಿ ಕೃಷಿಕರಾಗಿ ಹೆಸರುಮಾಡಿದ್ದಾರೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *