ದುಡಿಮೆಗೆ ಬೆಂಗಳೂರಿಗೆ ಹೋಗಬೇಕೆಂದಿದ್ದ ಕಲ್ಲಪ್ಪ ಹುಟ್ಟೂರಲ್ಲೇ ಕೋಟೆ ಕಟ್ಟಿದ ಕತೆ

ಕೃಷಿ ಲಾಭದಾಯಕವಲ್ಲ ಎನ್ನುವುದು ಸಾಮಾನ್ಯ ಗೃಹಿಕೆ. ಆದರೆ ಜನಸಾಮಾನ್ಯರ ಈ ಅನುಭವವನ್ನು ಸುಳ್ಳು ಮಾಡಿದವರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕಲ್ಲಪ್ಪ ನಾಯ್ಕ ಕಲಕರಡಿ. ತಮಗಿದ್ದ ಮೂಲ ೬ ಎಕರೆ ಬರಡು ಭೂಮಿಯಲ್ಲಿ ಏನು ಮಾಡಲು ಸಾಧ್ಯ ಎಂದು ಯೋಚಿಸಿದ ಯುವಕ ಕಲ್ಲಪ್ಪ ನಾಯ್ಕ ಕಲಕರಡಿ ಹೊಟ್ಟೆಪಾಡಿನ ದುಡಿಮೆಗೆ ಬೆಂಗಳೂರಿನ ದಾರಿ ಹಿಡಿಯುವ ಯೋಚನೆ ಮಾಡಿದ್ದರು.ತಾನೊಂದು ಬಗೆದರೆ ವಿಧಿ ಮತ್ತೊಂದು ಬಗೆಯಿತು ಎನ್ನುವಂತೆ ಬೆಂಗಳೂರಿಗೆ ಗೋಗುವ ಯೋಚನೆ ಕೈಬಿಟ್ಟ ಕಲ್ಲಪ್ಪ ತನ್ನ ಭೂಮಿಜೊತೆ ಮತ್ತಷ್ಟು ಎಕರೆಭೂಮಿಯನ್ನು ಲೀಜ್‌ ಪಡೆದರು. ಭತ್ತ,ನಂತರ ಕಬ್ಬು ಶುಂಠಿ,ಮಾವು,ನೆಲ್ಲಿ ಬಾಳೆ ಬೆಳೆಯುತ್ತಾ ಪ್ರತಿವರ್ಷ ಮಾಡಿದ ಉಳಿತಾಯದಿಂದ ಹೊಸ ಭೂಮಿ ಖರೀದಿಸುತ್ತಾ ಸಾಗಿದರು. ೬ ಎಕರೆ ಒಣ ಭೂಮಿಯಿಂದ ಪ್ರಾರಂಭವಾದ ಇವರ ಜರ್ನಿ ಈಗ ಅರವತ್ತು ಎಕರೆ ಸ್ವಂತ ಭೂಮಿಗೆ ಬಂದು ಮುಟ್ಟಿದೆ.

೬೦ ಎಕರೆಯಲ್ಲಿ ಬಹುತೇಕ ೪೦ ಎಕರೆಅಡಿಕೆ ಬೆಳೆಯುತ್ತಿರುವ ಇವರು ಅಲ್ಪಸ್ವಲ್ಫ ಭತ್ತ,ಅನಾನಸ್‌ ಬೆಳೆಯುತಿದ್ದಾರೆ. ಕೃಷಿಯಲ್ಲಿ ಅಡಿಕೆಯಿಂದ ಮಾತ್ರ ಲಾಭ ಪಡೆಯಬಹುದು ಎನ್ನುವ ಕಲ್ಲಪ್ಪ ತಮ್ಮ ೪೦ ವರ್ಷಗಳ ಪಯಣದಲ್ಲಿ ಕೃಷಿಯೊಂದಿಗೆ ವ್ಯಾಪಾರ ಮಾಡಿದ್ದಾರೆ, ಅನಾನಸ್‌ ಬೆಳೆದು ಉತ್ತರ ಭಾರತದ ವರೆಗೆ ಮಾರುಕಟ್ಟೆ ಹುಡುಕಿ ಅಲೆದಿದ್ದಾರೆ.

ಹೆಚ್ಚು ಶಿಕ್ಷಿತರಲ್ಲದ ಕಲ್ಲಪ್ಪ ನಾಯ್ಕ ಹಿತೈಶಿಗಳು, ಪರಿಚಿತರ ಸಹಕಾರ ಪಡೆದು ಅವಿಭಕ್ತ ಕುಟುಂಬದ ಜವಾಬ್ಧಾರಿ ಹೊರುತ್ತಲೇ ಕೃಷಿ ಸಾಧಕರೆನಿಸಿದ್ದಾರೆ. ಯಾವುದೇ ಕೆಲಸವನ್ನು ಶೃದ್ಧೆ, ತಾಳ್ಮೆ, ಆಸಕ್ತಿಯಿಂದ ಮಾಡಿದರೆ ಗೆಲುವು ಸಿಗುತ್ತದೆ ಎನ್ನುವ ನಾಯ್ಕರ ತೋಟದಲ್ಲಿ ಈಗ ತೆಂಗು,ಬಾಳೆ ಅಡಿಕೆಗಳು ಹಸಿರು ಉಕ್ಕಿಸುತ್ತಿವೆ.

ಅಡಿಕೆ ತೋಟಗಳೇ ಅಪರೂಪವಾಗಿದ್ದ ಬನವಾಸಿ ಭಾಗದಲ್ಲಿ ಅಡಿಕೆ,ಬಾಳೆ,ತೆಂಗು ಬೆಳೆದ ಕಲ್ಲಪ್ಪ ನಾಯ್ಕ ಅರೆಬಯಲುಸೀಮೆಯಲ್ಲಿ ವ್ಯವಸಾಯದಲ್ಲಿ ಹೆಸರು ಮಾಡಿ ಮಿಶ್ರಬೆಳೆ ಬೆಳೆಯುವ ಮಾದರಿ ಕೃಷಿಕರಾಗಿ ಹೆಸರುಮಾಡಿದ್ದಾರೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಹಾವಿನ ಸೇಡು ಹೆಣ್ಣಿನ ಮೋಸಗಳಿಗೆ ಬಹಳ ವರ್ಷಗಳ ಆಯುಷ್ಯಂತೆ! A ಉಪೇಂದ್ರ & B ಕೂಡಾ ಉಪೇಂದ್ರ!

ಶ್‌ ಚಿತ್ರದ ಮೂಲಕ ಭರವಸೆ ಹುಟ್ಟಿಸಿದ್ದ ಉಪೇಂದ್ರರ ಮುಂದಿನ ಚಿತ್ರ ಯಾವುದು? ಎನ್ನುವ ಕುತೂಹಲದ ಪ್ರಶ್ನೆಗೆ ಉಪೇಂದ್ರ ಎ ಎಂದು ಉತ್ತರ ಕೊಟ್ಟಿದ್ದರು. ಎ.ಸಿನೆಮಾ...

ಕಶಿಗೆಯಲ್ಲಿ ಸಂಸ್ಕೃತಿ ಚಿಂತನ

ಸಿದ್ದಾಪುರತಾಲೂಕಿನ ಕಶಿಗೆಯ ಶ್ರೀ ಕೇಶವನಾರಾಯಣ ದೇವಾಲಯದ ಗಣೇಶಹೆಗಡೆ ದೊಡ್ಮನೆ ಸಭಾಭವನದಲ್ಲಿ ಮೇ.೧೭ರಂದು ಹಿರಿಯ ಪತ್ರಕರ್ತ ಜಿ.ಕೆ.ಭಟ್ಟ ಕಶಿಗೆ ಅವರ ಕುರಿತಾದ ಸಂಸ್ಕೃತಿ ಚಿಂತನ ಕಾರ್ಯಕ್ರಮ...

ಶಿರಸಿ ಪ್ರೀತಮ್‌ ಪಾಲನಕರ್‌ ಸಾವಿನ ಹಿಂದಿನ ಕಾರಣ ಏನು? ಇಲ್ಲಿದೆ ಕ್ಲೂ!

ಪ್ರೀತಮ್‌ ಪಾಲನಕರ್‌ ಆತ್ಮಹತ್ಯೆಗೆ ಕಾರಣ ಮೊಬೈಲ್‌ ಕರೆಯೆ? ಶಿರಸಿ ನಗರದ ಕಾಮಧೇನು ಜ್ಯುವೆಲ್ಲರ್ಸ್‌ ನ ಮಾಲಿಕ ಪ್ರಕಾಶ್‌ ಪಾಲನಕರ್‌ ರ ಹಿರಿಯ ಪುತ್ರ ಪ್ರೀತಮ್‌...

ಕಬೀರ್‌ ಸಾಬ್‌ ರಿಗೂ ಕಾಂಗ್ರೆಸ್‌ ಗೂ ಎತ್ತಣಿದೆತ್ತ ಸಂಬಂಧವಯ್ಯ…..

ಕಬೀರ್‌ ನಿಲ್ಕುಂದ ಎಂಬ ಫೇಸ್‌ ಬುಕ್‌ ಖಾತೆಯಿಂದ ಸಿದ್ಧಾಪುರ ಕಾಂಗ್ರೆಸ್‌ ವಿಚಾರವಾಗಿ ಪ್ರಕಟವಾದ ಸಂದೇಶಗಳು ಹಲವು ಚರ್ಚೆಗೆ ಗ್ರಾಸ ಒದಗಿಸಿವೆ. ಕಬೀರ್‌ ಎನ್ನುವ ಪಕ್ಕಾ...

ನಾಣಿಕಟ್ಟದಲ್ಲಿ‌ ವಸಂತ ಸಂಭ್ರಮ; ಸನ್ಮಾನ

ಸಿದ್ದಾಪುರ: ವಿಶ್ವಶಾಂತಿ‌ ಸೇವಾ ಟ್ರಸ್ಟ್ ಸಂಸ್ಥೆಯು‌ ನಾಣಿಕಟ್ಟದಲ್ಲಿ ತ್ಯಾಗಲಿ ಸೊಸೈಟಿಯ ಸಹಕಾರದೊಂದಿಗೆ ಮೇ.೧೮ರ ಸಂಜೆ ೫:೪೦ಕ್ಕೆ ವಸಂತ ಸಂಭ್ರಮ ಕಾರ್ಯಕ್ರಮ ಆಯೋಜಿಸಿದೆ.ನಾಣಿಕಟ್ಟದ ಸೊಸೈಟಿಯ ಶತಮಾನೋತ್ಸವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *