

ಸಿದ್ಧಾಪುರದಲ್ಲಿ ಇಂದು ಮೂರು ಪ್ರತ್ಯೇಕ ಅಪಘಾತ ಪ್ರಕರಣಗಳು ನಡೆದಿದ್ದು ಒಂದು ಪ್ರಕರಣದಲ್ಲಿ ವ್ಯಕ್ತಿಯೊಬ್ಬ ಮಾರಣಾಂತಿಕವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ.

ಇಂದು ಬೆಳಿಗ್ಗೆ ಕೋಲಶಿರ್ಸಿ ಬಳಿಯ ಉಪ್ಪುಡಿಕೆ ಕ್ರಾಸ್ ಬಳಿ ನಡೆದ ಬೈಕ್ ಸ್ಕಿಡ್ ಪ್ರಕರಣದಲ್ಲಿ ಚಿನ್ಮಯ ಗೌಡ ತೀವೃವಾಗಿ ಗಾಯಗೊಂಡು ಶಿವಮೊಗ್ಗ ಆಸ್ಫತ್ರೆ ಸೇರಿದ್ದಾನೆ. ಕೊಡ್ಗಿಬೈಲಿನ ಚಿನ್ಮಯ ಗೌಡ ಚಲಾಯಿಸುತಿದ್ದ ಪಲ್ಸರ್ ಬೈಕ್ ಸ್ಕಿಡ್ ಆಗಿ ಈ ಅಪಘಾತ ಸಂಭವಿಸಿತ್ತು.
ಸಿದ್ಧಾಪುರ ಮಳವತ್ತಿ ಗೇಟ್ ಬಳಿ ನಡೆದ ಪಲ್ಸರ್ ಬೈಕ್ ಸ್ಕಿಡ್ ಅಪಘಾತದಲ್ಲಿ ಪ್ರಕಾಶ್ ಪುಟ್ಟಪ್ಪ ನರೇರ್ ಮೃತಪಟ್ಟಿದ್ದಾರೆ. ಮಧ್ಯಾಹ್ನದ ವೇಳೆ ಊಟ ತರಲು ತೆರಳಿದ್ದ ತರಕಾರಿ ವ್ಯಾಪಾರಿ ಪ್ರಕಾಶ್ ಬೈಕ್ ಸ್ಕಿಡ್ ಆದ ಪರಿಣಾಮ ತಲೆಗೆ ತೀವೃತರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತ ನಗರದ ರವೀಂದ್ರ ನಗರದ ನಿವಾಸಿಯಾಗಿದ್ದ.

ಸಿದ್ಧಾಪುರ ಹೊಸೂರು ಬಳಿ ನಡೆದ ಇನ್ನೊಂದು ಪ್ರಕರಣದಲ್ಲಿ ಬೈಕ್ ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
