![](https://i0.wp.com/samajamukhi.net/wp-content/uploads/2023/12/ಛದ್ಮ೧.jpg?resize=820%2C500&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
………………
ಸಪ್ತಸಾಗರದಾಚೆ
ಘಟಾನುಘಟಿ ಜಗಜಟ್ಟಿಗಳ
ಸದಾ ವತ್ಸಲೆಯ ಕೊರಳಿಗೆ
ವಿಜಯದ ಪದಕ ತೊಡಿಸಬಹುದು
ಗೆಳತಿ, ನಿನ್ನಂಥ
ಬೆಂಕಿಯಲ್ಲಿ ಹೂಗಳಿಗೆ
ಅದೇನು ದೊಡ್ಡದಲ್ಲ!
ಆದರೆ, ಸದಾ ವತ್ಸಲೆಯ
ಮಂತ್ರ ಪಠಿಸುವ
ನಯವಂಚಕ ಖೂಳ ಪಡೆ
ಮುಂದೆ ಮಾನ-ಸಮ್ಮಾನಕ್ಕಾಗಿ
ಸೆಣಸುವುದು ಸವಾಲು…
ದೇಶಭಕ್ತನ ಮುಖಕ್ಕೆ
ಹಿಡಿದ ಆ ಒಂದು
ಜೊತೆ ಬೂಟು ಮತ್ತು ನಾಲ್ಕು
ಹನಿ ಕಣ್ಣೀರು;
ಇವರ ಭವ್ಯ ಇತಿಹಾಸದ
ಪುಟಗಳಿಗೆ ಬಡಿದ ಅಳಿಸಲಾರದ ಮಸಿ.
ಹೆಣ್ಣ ಪೂಜಿಸುವ
ಸೋಗಲಾಡಿ ಪರಂಪರೆಗೆ,
ಬನಾನ ರಿಪಬ್ಲಿಕ್ಕಿಗೆ,
ಹಲ್ಲಿಲ್ಲದ ಕಾನೂನಿಗೆ,
ಕೊನೆಗೆ ಈ ನೆಲದ
ಎಲ್ಲರ ಎದೆಗೆ ಬಡಿದ ಮೊಳೆಗಳು;
ಬಿಚ್ಚಿಟ್ಟ ಆ ಜೋಡಿ ಬೂಟು
ಮತ್ತು
ದೇಶದ ಸತ್ತ ಆತ್ಮಸಾಕ್ಷಿಗೆ ಜಾರಿದ
ಸಂತಾಪದ ಆ ನಾಲ್ಕು ಕಣ್ಣ ಹನಿ!
~ಶಶಿ ಸಂಪಳ್ಳಿ
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)