

………………

ಸಪ್ತಸಾಗರದಾಚೆ
ಘಟಾನುಘಟಿ ಜಗಜಟ್ಟಿಗಳ
ಸದಾ ವತ್ಸಲೆಯ ಕೊರಳಿಗೆ
ವಿಜಯದ ಪದಕ ತೊಡಿಸಬಹುದು
ಗೆಳತಿ, ನಿನ್ನಂಥ
ಬೆಂಕಿಯಲ್ಲಿ ಹೂಗಳಿಗೆ
ಅದೇನು ದೊಡ್ಡದಲ್ಲ!
ಆದರೆ, ಸದಾ ವತ್ಸಲೆಯ
ಮಂತ್ರ ಪಠಿಸುವ
ನಯವಂಚಕ ಖೂಳ ಪಡೆ
ಮುಂದೆ ಮಾನ-ಸಮ್ಮಾನಕ್ಕಾಗಿ
ಸೆಣಸುವುದು ಸವಾಲು…
ದೇಶಭಕ್ತನ ಮುಖಕ್ಕೆ
ಹಿಡಿದ ಆ ಒಂದು
ಜೊತೆ ಬೂಟು ಮತ್ತು ನಾಲ್ಕು
ಹನಿ ಕಣ್ಣೀರು;
ಇವರ ಭವ್ಯ ಇತಿಹಾಸದ
ಪುಟಗಳಿಗೆ ಬಡಿದ ಅಳಿಸಲಾರದ ಮಸಿ.
ಹೆಣ್ಣ ಪೂಜಿಸುವ
ಸೋಗಲಾಡಿ ಪರಂಪರೆಗೆ,
ಬನಾನ ರಿಪಬ್ಲಿಕ್ಕಿಗೆ,
ಹಲ್ಲಿಲ್ಲದ ಕಾನೂನಿಗೆ,
ಕೊನೆಗೆ ಈ ನೆಲದ
ಎಲ್ಲರ ಎದೆಗೆ ಬಡಿದ ಮೊಳೆಗಳು;
ಬಿಚ್ಚಿಟ್ಟ ಆ ಜೋಡಿ ಬೂಟು
ಮತ್ತು
ದೇಶದ ಸತ್ತ ಆತ್ಮಸಾಕ್ಷಿಗೆ ಜಾರಿದ
ಸಂತಾಪದ ಆ ನಾಲ್ಕು ಕಣ್ಣ ಹನಿ!
~ಶಶಿ ಸಂಪಳ್ಳಿ
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
