ಈ ಬಣ ಉಚ್ಛಾಟಿಸಿತು,ಆ ಬಣ ಮರುಸೇರ್ಪಡೆ ಮಾಡಿಕೊಂಡಿತು! ಬೀದಿಗೆ ಬಂತು ಸಂಘನಿಷ್ಠ ಹೆಗಡೆಗಳ ಒಳಜಗಳ!!

ರಾಜ್ಯ ವಿಧಾನಸಭೆಯ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆಯವರ ವಿರುದ್ಧ ಸಂಸದ ಅನಂತಕುಮಾರ ತೊಡೆ ತಟ್ಟುತ್ತಿರುವ ವಿಷಯ ಈಗ ಚರ್ಚೆಯಾಗುತ್ತಿದೆ.

ಕೇಂದ್ರದ ಮಾಜಿ ಸಚಿವ ಅನಂತಕುಮಾರ್‌ ಹೆಗಡೆ ಮತ್ತು ಮಾಜಿ ಸಚಿವ ವಿಶ್ವೇಶ್ವರ ಹೆಗಡೆಯವರ ರಾಜಕೀಯ ವಿರಸ,ವಿವಾದ ಇಂದು ನಿನ್ನೆಯದಲ್ಲ. ಈಗ ರಾಜ್ಯ ಬಿ.ಜೆ.ಪಿ. ಮತ್ತು ಆರೆಸ್ಸೆಸ್‌ ವಲಯಗಳಲ್ಲಿ ಪ್ರಭಾವಿ ಎನ್ನಲಾಗುವ ವಿಶ್ವೇಶ್ವರ ಹೆಗಡೆ ಮತ್ತು ರಾಜ್ಯ ಬಿ.ಜೆ.ಪಿ. ದೂರ ಇಟ್ಟಿದ್ದ ಅನಂತಕುಮಾರ ನಡುವಿನ ಶೀತಲ ಸಮರ ತಾರಕಕ್ಕೇರಿದಂತಿದೆ.

ಹಿಂದುತ್ವದ ಹೆಸರಿನಲ್ಲಿ ಸುಳ್ಳು ಲೆಕ್ಕಾಚಾರ ಕೊಟ್ಟು ಉತ್ತರ ಕನ್ನಡ ಜಿಲ್ಲೆಯ ಮತದಾರರನ್ನು ಮತ್ತು ರಾಜ್ಯ ಬಿ.ಜೆ.ಪಿ. ವರಿಷ್ಠರನ್ನು ದಿಕ್ಕುತಪ್ಪಿಸಿ ಸಂಘದ ಜಾತಿ ಲಾಬಿಯ ಮೂಲಕ ಟಿಕೇಟ್‌ ಕಬಳಿಸುತಿದ್ದ ಸಂಸದ ಅನಂತಕುಮಾರ ಹೆಗಡೆ ಮತ್ತು ವಿಧಾನಸಭಾ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಮೊದಮೊದಲು ನಾಯಕತ್ವ ಪಕ್ಷದ ಹಿಡಿತಕ್ಕಾಗಿ ಕಚ್ಚಾಡುತಿದ್ದರೆ ಈಗ ಸಂಸದ ಸ್ಥಾನದ ಬಿ.ಜೆ.ಪಿ. ಟಿಕೇಟ್‌ ಗಾಗಿ ಪೈಪೋಟಿ ನಡೆಸುತ್ತಿರುವ ವಿಚಾರ ಬಹಿರಂಗ ಗುಟ್ಟು.

ಈ ಅವಕಾಶ, ಅಧಿಕಾರದ ಮೇಲಾಟದ ಗುಪ್ತ ಕಾಳಗದಲ್ಲಿ ಇತರರು ದಾಳಗಳಾಗುತಿದ್ದಾರೆ.

ಕಳೆದ ಒಂದು ವರ್ಷದ ಹಿಂದೆ ರಾಜ್ಯ ವಿಧಾನಸಭೆಯ ಅಧ್ಯಕ್ಷ ವಿಶ್ವೇಶ್ವರ ಹೆಗಡೆಯವರಿಗೆ ಅಪಮಾನ ಮಾಡಿದರು, ಮಾನಹಾನಿ ಮಾಡಿದರು ಎನ್ನುವ ಕಾರಣಕ್ಕೆ ಸಿದ್ಧಾಪುರದ ತಾಲೂಕಾ ಯುವಮೋರ್ಚಾ ಅಧ್ಯಕ್ಷ ಹರೀಶ್‌ ಗೌಡರ್‌ ರನ್ನು ಪಕ್ಷದಿಂದ ಉಚ್ಚಾಟಿಸಿದ್ದ ಕಾಗೇರಿ ಹೆಗಡೆ ಬಣ ಹರೀಶ್‌ ಗೌಡರ್‌ ಮೇಲೆ ಎರಡ್ಮೂರು ಪ್ರಕರಣ ದಾಖಲಿಸಿ ಜೈಲಿಗೂ ಕಳಿಸಿತ್ತು.!

ಅಧಿಕಾರ,ಅನುಕೂಲ ಇರುವ ವಿಶ್ವೇಶ್ವರ ಹೆಗಡೆಯವರ ಬಣಕ್ಕೆ ಟಾಂಗ್‌ ಕೊಟ್ಟಿದ್ದ ಹರೀಶ್‌ ಗೌಡರ್‌ ಹಿಂದಿನ ರಾಜ್ಯ ವಿಧಾನಸಭೆ ಚುನಾವಣೆಗೂ ಮುನ್ನ ಬಿ.ಜೆ.ಪಿ. ತೊರೆದು ಜಾದಳ ಸೇರಿದ್ದರು.

ಈಗ ಜಾದಳ ಬಿ.ಜೆ.ಪಿ.ಯೊಂದಿಗೆ ವಿಲೀನವಾಗಿರುವುದರಿಂದ ಹರೀಶ್‌ ಗೌಡರ್‌ ಜಾದಳದಲ್ಲಿದ್ದೂ ಬಿ.ಜೆ.ಪಿ.ಯಲ್ಲಿದ್ದಂತೆ ಇರಬಹುದಿತ್ತು. ಆದರೆ ಅನಂತಕುಮಾರ್‌ ಹೆಗಡೆ ಮೂಲಕ ಮತ್ತೆ ಬಿ.ಜೆ.ಪಿ. ಸೇರ್ಪಡೆಯಾಗಿರುವ ಹರೀಶ್‌ ಗೌಡರ್‌ ಕಾಗೇರಿ ಬಣಕ್ಕೆ ಶಾಕ್‌ ನೀಡಿದ್ದಾರೆ.

ಅನಂತಕುಮಾರ ಹೆಗಡೆ ಕೂಡಾ ತನಗೆ ಟಿಕೇಟ್‌ ವಿಚಾರದಲ್ಲಿ ತೀವ್ರಪೈಪೋಟಿ ನೀಡುತ್ತಿರುವ ವಿಶ್ವೇಶ್ವರ ಹೆಗಡೆಯವರ ವಿರುದ್ಧ ತೊಡೆ ತಟ್ಟಿದ್ದು ʼನೀವು ಉಚ್ಛಾಟಿಸಿದವರನ್ನು ನಾವು ಮತ್ತೆ ಕರೆತಂದಿದ್ದೇವೆ” ಎಂದು ಟಿಕೇಟ್‌ ವಿಚಾರ ಅಷ್ಟೇ ಅಲ್ಲ ಎಲ್ಲಾ ವಿಚಾರದಲ್ಲೂ ನಾವು ನಿಮಗೆ ವಿರುದ್ಧ ಎಂದು ತೋರಿಸಿದ್ದಾರೆ.

ಬಿ.ಜೆ.ಪಿ.ಯಲ್ಲಿ ಉತ್ತರ ಕನ್ನಡ ಬಿ.ಜೆ.ಪಿ. ಟಿಕೇಟ್‌ ಗಾಗಿ ಸುನಿಲ್‌ ಹೆಗಡೆ, ಅನಂತಕುಮಾರ್‌ ಹೆಗಡೆ, ವಿಶ್ವೇಶ್ವರ ಹೆಗಡೆ ನಡುವೆ ಪೈಪೋಟಿ ನಡೆಯುತ್ತಿದೆ. ಉತ್ತರ ಕನ್ನಡ ಲೋಕಸಭೆ ಕ್ಷೇತ್ರದ ಬಹುಸಂಖ್ಯಾತರಾದ ಮರಾಠಿ ಭಾಷಿಗರು ಮತ್ತು ದೀವರ ನಡುವೆ ಈ ಹೆಗಡೆಗಳು ಟಿಕೇಟ್‌ ಗಿಟ್ಟಿಸಿ ಹಿಂದುತ್ವದ ರಾಜಕಾರಣಕ್ಕೆ ಹೊಂಚು ಹಾಕಿದ್ದಾರೆ. ಇವರ ಒಳಜಗಳದಲ್ಲಿ ಕಾಂಗ್ರೆಸ್‌ ಬಹುಸಂಖ್ಯಾತರಿಗೆ ಟಿಕೇಟ್‌ ನೀಡಿ ಉತ್ತರ ಕನ್ನಡ ಲೋಕಸಭೆ ಸ್ಥಾನ ಗೆಲ್ಲುವ ಲೆಕ್ಕಾಚಾರದಲ್ಲಿ ತೊಡಗಿದೆ. ಸಂಘನಿಷ್ಠ ಹೆಗಡೆಗಳ ಒಳಜಗಳ ಕಾಂಗ್ರೆಸ್‌ ಗೆ ವರವಾಗುವ ಸಾಧ್ಯತೆ ಇದೆ. ಈ ಬೆಳವಣಿಗೆಗಳ ನಡುವೆ ಅನಂತಮೂರ್ತಿ ಹೆಗಡೆ ಬಿ.ಜೆ.ಪಿ. ಟಿಕೇಟ್‌ ತರುತ್ತಾರೆ ಎನ್ನುವ ಗುಲ್ಲು ಎದ್ದಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

ಸಮಾಜಮುಖಿ ಡಾಟ್‌ ನೆಟ್‌ ಬ್ರೇಕಿಂಗ್……‌ ಅವರಗುಪ್ಪಾದ ಮಹಿಳೆ ಸೊರಬಾದಲ್ಲಿ ಆತ್ಮಹತ್ಯೆ

ಸೊರಬಾದ ವಸತಿನಿಲಯದ ಮುಖ್ಯ ಅಡುಗೆ ಸಿಬ್ಬಂದಿ ಮಹಿಳೆ ವಸತಿ ನಿಲಯದಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಸಿದ್ಧಾಪುರದ ಅವರಗುಪ್ಪಾ ಮೂಲದ ನೇತ್ರಾವತಿ ನಾಯ್ಕ ಆತ್ಮಹತ್ಯೆಗೆ...

ಹೋರಾಟಗಳ ಮೂಲಕ ಸುಧಾರಣೆ ಇಂದಿನ ಅನಿವಾರ್ಯತೆ

ಬಹುಜನ ಚಳವಳಿಗಳಿಗೆ ನಾರಾಯಣ ಗುರುಗಳು ಮತ್ತು ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಚಿಂತನೆಗಳು ಪೂರಕ ಎಂದಿರುವ ಯುವ ಚಿಂತಕ ಲೋಹಿತ್‌ ನಾಯ್ಕ ಈಗಲೂ ಸೈದ್ಧಾಂತಿಕ...

ಅಕ್ರಮ ಮದ್ಯ ಮಾರಾಟ, ಮದ್ಯ ಸೇವಿಸಿ ವಾಹನ ಚಾಲನೆ ನಿಯಂತ್ರಣಕ್ಕೆ ಭೀಮಣ್ಣ ಆದೇಶ

ಶಿರಸಿ-ಸಿದ್ಧಾಪುರಗಳಲ್ಲಿ ಸಾಮಾಜಿಕ ಪಿಡುಗಾಗಿ ಜನರ ಜನಜೀವನಕ್ಕೆ ತೊಂದರೆ ಕೊಡುತ್ತಿರುವ ಅಕ್ರಮ ಮದ್ಯ ಮತ್ತು ಮದ್ಯ ಸೇವಿಸಿ ವಾಹನ ಚಲಾಯಿಸುವ ಬಗ್ಗೆ ಸ್ಥಳೀಯ ಶಾಸಕ ಭೀಮಣ್ಣ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *