ಅನಂತ ಬಣದ ಮುಖ ಕರ್ರಗೆ….. ಕಾಗೇರಿ ಬಣದ ಮುಖ ಕೆಂಪಗೆ…. ಇದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿ.ಜೆ.ಪಿ. ವಿದ್ಯಮಾನ!

ರಾಜ್ಯ ಬಿ.ಜೆ.ಪಿ.ಯ ಫೈರ್‌ ಬ್ರಾಂಡ್‌, ಪ್ರಖರ ಹಿಂದುತ್ವವಾದಿ ಎನ್ನಲಾಗುವ ಕೇಂದ್ರದ ಮಾಜಿ ಸಚಿವ, ಸಂಸದ ಅನಂತಕುಮಾರ ಹೆಗಡೆ ಬಿ.ಜೆ.ಪಿ.ಗೆ ಮತಬಾಚುವ ಭಾಷಣ ಕಾರ ಎನ್ನುವ ಹೆಗ್ಗಳಿಕೆ ಇದೆ. ಇದೇ ಅನಂತಕುಮಾರ ಹೆಗಡೆ ಈ ವರ್ಷ ಬಿ.ಜೆ.ಪಿ.ಗೆ ಕಗ್ಗಂಟಾಗಿರುವ ಕತೆ ಇದು.


ಸತತ ನಾಲ್ಕುಬಾರಿ ಒಟ್ಟೂ ೫ ಬಾರಿ ಸಂಸದರಾಗಿರುವ ಅನಂತಕುಮಾರ ಹೆಗಡೆ ಪ್ರತಿ ಬಾರಿ ಚುನಾವಣೆಯ ಮೊದಲು ಒಂದು ಹುಸಿ ಬಾಂಬ್‌ ಪ್ರಯೋಗಿಸುವ ಪ್ರವೃತ್ತಿಯನ್ನಿಟ್ಟುಕೊಂಡಿದ್ದಾರೆ. ಅದೇನೆಂದರೆ ಇನ್ನೇನು ಲೋಕಸಭೆ ಚುನಾವಣೆ ಸಮೀಪಿಸಬೇಕು ಅದರ ಸರಿ ಸುಮಾರು ಆರು ತಿಂಗಳ ಮೊದಲು ಈ ಬಾರಿ ನಾನು ಚುನಾವಣೆಗೆ ಸ್ಫರ್ಧಿಸುವುದಿಲ್ಲ ಎಂದು ತನ್ನ ಹಿಂಬಾಲಕರಿಂದ ಹೇಳಿಸಿಬಿಡುತ್ತಾರೆ.
ಈ ಹೇಳಿಕೆ ಆಧರಿಸಿ ಇಲ್ಲ ಈ ಬಾರಿಯೂ ನೀವೆ ಸ್ಫರ್ಧಿಸಬೇಕು ಎಂದು ಅವರ ಶಿಷ್ಯರೋ. ಪರಿವಾರವೋ ಒತ್ತಾಯಿಸುತ್ತೆ. ಈ ಪ್ರಕ್ರೀಯೆಯ ಜಾಣ ತಂತ್ರ ಈ ಹಿಂದಿನ ಮೂರು ಲೋಕಸಭಾ ಚುನಾವಣೆಗಳಿಂದಲೂ ಪ್ರಯೋಗವಾಗುತ್ತಾ ಫಲಕೊಡುತ್ತಲೂ ಇತ್ತು!.

ವಿಚಿತ್ರವೆಂದರೆ…. ಈ ಬಾರಿ ಹಿಂದಿನಂತಾಗಲಿಲ್ಲ. ಹಳೆ ರೂಢಿಯಂತೆ ಅನಂತಕುಮಾರ ಹೆಗಡೆ ಬಣ ಈ ಬಾರಿ ಅನಂತಕುಮಾರ ಲೋಕಸಭೆಗೆ ಸ್ಫರ್ಧಿಸುವುದು ಡೌಟು ಎಂದು ಮುಗುಳ್ನಕ್ಕಿದ್ದೇ ಪಕ್ಷ ಅಂದರೆ ಪಕ್ಷದ ಪ್ರಮುಖರು ಹಾಗಾದರೆ ವಿಧಾನಸಭೆಯ ಮಾಜಿ ಸ್ಫೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಇದ್ದಾರೆ ಎಂದು ಬಿಟ್ಟರು.
ಅನಂತ ಬಣದ ಮುಖಗಳು ಕರ್ರಗಾಗತೊಡಗಿದ್ದೇ ಆಗ.ಪ್ರತಿಚುನಾವಣೆಯ ಮೊದಲು ಅನಂತ ಕುಮಾರ್‌ ರಿಗೆ ಆಸಕ್ತಿ ಇಲ್ಲ ಎನ್ನುತ್ತಲೇ ಯಾಕೆ ನೀವಲ್ಲದೆ ಮತ್ತ್ಯಾರು? ಎನ್ನುತ್ತಿದ್ದ ಪಕ್ಷ, ಪರಿವಾರ ಈ ಬಾರಿ ಉಲ್ಟಾ ಹೊಡೆದದ್ದೇ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಮೀಕರಣವೇ ಬದಲಾಗುವಂತಾಯ್ತು?

ಪ್ರತಿಬಾರಿ ಹುಸಿಬಾಂಬ್‌ ಪ್ರಯೋಗಿಸಿ ಗೆಲ್ಲುತಿದ್ದ ಅನಂತಕುಮಾರ ನಡೆ ಅನುಸರಿಸಿದ ಉತ್ತರ ಕನ್ನಡ ಬಿ.ಜೆ.ಪಿ.ಯ ಇನ್ನೊಂದು ಬಣ ಈ ಬಾರಿ ಅನಂತಕುಮಾರ ಡೌಟು ಎನ್ನುತ್ತಲೇ ಎದ್ದು ನಿಂತು ಹಾಗಾದರೆ ನಾನು ಎನ್ನಬೇಕೆಂದು ಪೂರ್ವತಯಾರಿ ಮಾಡಿಕೊಂಡಿದ್ದ ಕಾಗೇರಿ ಬಣದ ಎಣಿಕೆಯಂತೆ ಎಲ್ಲವೂ ನಡೆದಿದ್ದೇ ಬಿ.ಜೆ.ಪಿ.ಯ ಕಗ್ಗಂಟಿನ ಮೂಲ ಮತ್ತು ಮುಖ್ಯ ಕಾರಣ.


ಪ್ರಖರ ಭಾಷಣ ಬಿಟ್ಟು ಬೇರೆ ಏನೂ ಮಾಡದ ನಿರಂತರ ಸಂಸದ ಅನಂತಕುಮಾರ ಹೆಗಡೆ ಪರವಾಗಿ ಸಾರ್ವಜನಿಕ ಅಭಿಪ್ರಾಯವಿಲ್ಲ. ಹಕ್ಕಿ ಕುಳಿತಿತ್ತು ಕೋಲು ಕಳಚಿತ್ತು ಎನ್ನುವಂತೆ ಅನಂತಕುಮಾರ ತನ್ನ ಲಾಗಾಯ್ತಿನ ಚಾಣಾಕ್ಷತೆ ಪ್ರದರ್ಶಿಸಲು ಹೋಗಿ ಪಿಗ್ಗಿ ಬಿದ್ದದ್ದೇ ಇಲ್ಲಿ.
 ಉತ್ತರ ಕನ್ನಡ ಜಿಲ್ಲೆಯ ಲೋಕಸಭೆ ಚುನಾವಣೆಯ ಅಭ್ಯರ್ಥಿಯ ವಿಚಾರದಲ್ಲಿ ಸಂತೋಷ್‌ ಜಿ ಬಣ ಒಬ್ಬ ವ್ಯಕ್ತಿಯನ್ನು ಗುರುತಿಸಿತ್ತಂತೆ ಆ ವ್ಯಕ್ತಿ ನೂತನ ವಕ್ತಾರ ಹರಿಪ್ರಸಾದ ಕೋಣೆಮನೆ ಎನ್ನುವ ಅಂಶ ಈಗಲೂ ಖಚಿತಪಟ್ಟಿಲ್ಲ. ಆದರೆ ಸಂತೋಷಜಿ ಬಣ ಒಬ್ಬ ಅಭ್ಯರ್ಥಿಯನ್ನು ತಯಾರು ಮಾಡುತಿದ್ದಾಗ ಬಿ.ಜೆ.ಪಿ.ಯ ಹಿರಿಯ ನಾಯಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಬಾರಿ ನಾನು ಕೇಂದ್ರಕ್ಕೆ ಹೋಗಲು ಸಿದ್ಧನಾಗುತಿದ್ದೇನೆ ಎಂದುಬಿಟ್ಟರು.


ಹೇಳಿಕೇಳಿ ಅನಂತಕುಮಾರ ಹೆಗಡೆ ಮತ್ತು ವಿಶ್ವೇಶ್ವರ ಹೆಗಡೆಯವರಿಗೆ ಮೊದಲಿನಿಂದಲೂ ಅಂಥಾ ಉತ್ತಮ ಸಂಬಂಧವೇ ಇಲ್ಲ. ಈ ಬಾರಿ ಅನಂತಕುಮಾರರಿಗೆ ಆಸಕ್ತಿ ಇಲ್ಲದಿದ್ದರೆ ನಾನು ತಯಾರಾಗುತ್ತೇನೆ ಎಂದು ಪಕ್ಷದ ನಾಯಕರಿಗೆ ಹೇಳಿದ್ದ ವಿಶ್ವೇಶ್ವ ರ ಹೆಗಡೆಯವರ ಚುನಾವಣೆ ತಯಾರಿ ಅನಂತಕುಮಾರ ಹೆಗಡೆಯವರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.


 ಇತ್ತ ಜಿಲ್ಲೆಯಲ್ಲಿ ಈ ಇಬ್ಬರು ಹಿರಿಯ ಮುಖಂಡರ ಟಿಕೇಟ್‌ ಮೇಲಾಟವಾದರೆ, ಜಿಲ್ಲೆಯಲ್ಲಿ ಕಾರವಾರದ ರೂಪಾಲಿ ನಾಯ್ಕ, ನಾಗರಾಜ್‌ ನಾಯಕ, ರಾಜ್ಯ ಬಿ.ಜೆ.ಪಿ. ಕಾರ್ಯಕಾರಿ ಸಮೀತಿ ಮಾಜಿ ಸದಸ್ಯ ಕೆ.ಜಿ. ನಾಯ್ಕ ಇವರ ನಡುವೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಮೂಲದ ಚಕ್ರವರ್ತಿ ಸೂಲಿಬೆಲೆ, ಇವರೆಲ್ಲರ ಜೊತೆಗೆ ಮೋದಿ ಅಭಿಮಾನಿ ಅನಂತಮೂರ್ತಿ ಹೆಗಡೆ ಉತ್ತರ ಕನ್ನಡ ಲೋಕಸಭೆಯ ಬಿ.ಜೆ.ಪಿ. ಅಭ್ಯರ್ಥಿಯಾಗಲು ತುದಿಗಾಲ ಮೇಲೆ ನಿಂತಿದ್ದಾರೆ. ಈ ಬೆಳವಣಿಗೆಗಳೆಲ್ಲಾ ಅನಿರೀಕ್ಷಿತ ಎನ್ನುವಂತೆ ಸಹಜವಾಗಿ ಘಟಿಸುತ್ತಿರುವುದರಿಂದ ಕೆಲಸಕ್ಕೆ ಕರಿಬ್ಯಾಡ್ರಿ, ಊಟಕ್ಕೆ ಮರಿಬ್ಯಾಡ್ರಿ ಎನ್ನುವಂತೆ ಪ್ರತಿಬಾರಿ ಅನಾಯಾಸವಾಗಿ ಟಿಕೇಟ್‌ ಪಡೆದು ಭಾಷಣ, ಗಿಮಿಕ್‌ ಗಳಿಂದಲೇ ಗೆಲ್ಲುತಿದ್ದ ಅನಂತಕುಮಾರ ಹೆಗಡೆ ನಡವಳಿಕೆ, ವರ್ತನೆ, ದಾಷ್ಟ್ಯ ಈಗ ಬಿ.ಜೆ.ಪಿ. ಪಾಲಿಗೆ ಕಗ್ಗಂಟಾಗಿರುವುದಂತೂ ಸತ್ಯ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *