

ಯಾವುದು ಸುದ್ದಿ, ಸುದ್ದಿಯಲ್ಲ ಎನ್ನುವುದಕ್ಕೊಂದು ಲಾಗಾಯ್ತಿನ ಮಾನದಂಡವಿದೆ. ನಾಯಿ ಮನುಷ್ಯನಿಗೆ ಕಚ್ಚಿದರೆ ಅದು ವಿದ್ಯಮಾನವಾದರೂ ತೀರಾ ಪ್ರಸಾರವಾಗಲೇಬೇಕಾದ ಸುದ್ದಿಯೇನಲ್ಲ ಆದರೆ ಮನುಷ್ಯ ನಾಯಿಗೆ ಕಚ್ಚಿದರೆ ಅದು ನಿಶ್ಚಿತವಾಗಿ ಪ್ರಸಾರಯೋಗ್ಯ, ಪ್ರಚಾರಯೋಗ್ಯ ಸುದ್ದಿ.

ಈಗ ರಾಮಮಂದಿರದ ಸುದ್ದಿ ಎಲ್ಲೆಡೆ ಪ್ರಸಾರ, ಪ್ರಚಾರ ಪಡೆಯುತ್ತಿವೆ. ಮುಂದುವರಿದು ಮೋದಿ ವೃತ ಮಾಡಿದರು, ದೇವಾಲಯದ ಕಸ ಹೊಡೆದರು. ಇತ್ಯಾದಿ ಸುದ್ದಿಗಳು ಮಾಧ್ಯಮಗಳಿಗೆ ಆಹಾರವಾಗಿವೆ.
ಹಿಂದೆ ಪ್ರಧಾನಿ, ರಾಷ್ಟ್ರಪತಿ, ಮಂತ್ರಿಗಳಿಗೆ ದೇವಾಲಯ ಪ್ರವೇಶ ಮಾಡಲು ಅವಕಾಶ ನೀಡದಿದ್ದರೆ ಸುದ್ದಿಯಾಗುತಿತ್ತು. ಈಗ ರಾಷ್ಟ್ರಪತಿ ದ್ರೌಪದಿ ಮುರ್ಮು ಸೆಂಟ್ರಲ್ ವಿಲ್ಲಾ ಉದ್ಘಾಟನೆ ಮಾಡಲು ಅವಕಾಶವಿಲ್ಲ, ರಾಷ್ಟ್ರಪತಿಗಳಿಗೆ ರಾಮ್ ಲಲ್ಲಾ ಲೋಕಾರ್ಪಣೆಗೂ ಅವಕಾಶವಿಲ್ಲ. ಇವೆಲ್ಲಾ ಮಾಧ್ಯಮಗಳಲ್ಲಿ ಸುದ್ದಿಯೇ ಆಗುತ್ತಿಲ್ಲ!.


omg ಇಂಡಿಯಾ ಯಾವಾಗ ಬದಲಾಯ್ತು? ಇಂಡಿಯಾವನ್ನು ಭಾರತ ಎಂದು ದಿಢೀರನೆ ಹೆಸರು ಬದಲಾಯಿಸಿ ಭಾರತ ಎಂದು ಬರೆಸಿದ್ದು, ಕೊರೆಸಿದ್ದು ಇದಕ್ಕೇನಾ? ಸುದ್ದಿಯ ಮಾನದಂಡ ಬದಲಾದಂತಿಲ್ಲ ಆದರೆ ಸುದ್ದಿ ಮಾಡುವವರು, ಸುದ್ದಿಸಂಸ್ಥೆಗಳ ಮಾಲಕರು ಬದಲಾಗಿದ್ದಾರೆ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






