

ಭಟ್ಕಳ ದಲ್ಲಿ ಬಂದು ಗಲಾಟೆ ಮಾಡಿದರೆ ಮತ ಬರುತ್ತದೆ ಎಂದು ಅನಂತಕುಮಾರ ಹೆಗಡೆ ಹುಚ್ಚಾಟ ಮಾಡುತಿದ್ದಾರೆ. ಇಂಥ ಬುದ್ಧಿಗೇಡಿಗೆ ಆಗಲಿ ಯಾರಿಗೇ ಆಗಲಿ ಕಾನೂನುಪ್ರಕಾರ ಕ್ರಮ ಜರುಗಿಸುತ್ತೇವೆ ಎಂದು ಸಚಿವ ಮಂಕಾಳು ವೈದ್ಯ ಎಚ್ಚರಿಸಿದರು.

ಭಟ್ಕಳ ದಿಂದ ಬನವಾಸಿಗೆ ಹೋಗುವ ಮಾರ್ಗಮಧ್ಯೆ ಸಮಾಜಮುಖಿ ಡಾಟ್ ನೆಟ್ ವೆಬ್ ನ್ಯೂಸ್ ಜೊತೆ ಮಾತನಾಡಿದ ಅವರು ಅನಂತಕುಮಾರ ಹೆಗಡೆ ನಿನ್ನೆ ಭಟ್ಳದಲ್ಲಿ ಆಡಿದ್ದು ಮಾಡಿದ್ದು ನ್ಯಾಯ ಸಮ್ಮತವೆ? ಅವರ ಬಗ್ಗೆ ಜನ, ಮಾಧ್ಯಮಗಳು ಎನಂದುಕೊಂಡಿವೆ. ಬುದ್ಧಿ ಇಲ್ಲದವರಿಗೆ ಕ್ರಮ ಜರುಗಿಸಲು ತುಸು ಯೋಚಿಸಬೇಕಿದೆ. ಅವರ ಮೇಲೆ ಕಾನೂನು ಕ್ರಮ ಜರುಗಲಿದೆ ಎಂದರು.
ಮಂಗನ ಕಾಯಲೆ ಪರಿಹಾರ ವ್ಯತ್ಯಾಸದ ಕುರಿತು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಹೌದು ನೀವು ಹೇಳಿದಂತೆ ಕೆ.ಎಫ್.ಡಿ. ಸಾವಿನ ಪರಿಹಾರ ಮೊತ್ತ ಎರಡು ಲಕ್ಷ ಅಲ್ಪವೇ. ಹಾಗಾಗಿ ನಾವು ಅರಣ್ಯ ಕಾಯ್ದೆ ಅಡಿ ಹಾವು ಕಡಿತ,ಮಂಗನಕಾಯಿಲೆ ಸೇರಿದ ಅರಣ್ಯ ಸಂಬಂಧಿ ಸಾವುಗಳಿಗೆ ೧೫ ಲಕ್ಷ ಪರಿಹಾರ ಕೊಡಿಸಲು ಪ್ರಯತ್ನ ಮಾಡುತಿದ್ದೇವೆ ಎಂದರು.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
