ಬಿ.ಜೆ.ಪಿ. ನಾಯಕರಿಗ್ಯಾಕೆ ತಮ್ಮ ಪಕ್ಷದವರ ಮೇಲೇ ಸಿಟ್ಟು!?

ರಾಮಮಂದಿರ, ಹಿಂದುತ್ವ, ದೇಶಪ್ರೇಮದ ಬಾಣ ಬಿಟ್ಟು-ಬಿಟ್ಟು ಸೋತಿರುವ ಬಿ.ಜೆ.ಪಿ.ಗೆ ಈಗ ಹೊಸ ಅಸ್ತ್ರ ಸಿಗದ ಹತಾಸೆ ಕಾಡುತ್ತಿದೆಯೆ? ಎನ್ನುವ ಪ್ರಶ್ನೆ ಈಗ ಭಾರತೀಯರನ್ನು ಕಾಡುತ್ತಿದೆ.

ಸತ್ತ ಸಾವು ಹೊಡೆಯುವಂತೆ ಕಾಂಗ್ರೆಸ್‌ ವಿರುದ್ಧ ವಿಷ ಕಾರುವ ಬಿ.ಜೆ.ಪಿ. ಮುಖಂಡರು ಚುನಾವಣೆ ಮೊದಲೇ ಶಸ್ತ್ರ ತ್ಯಾಗ ಮಾಡಿದ್ದಾರೆಯೆ? ಎನ್ನುವ ಅನುಮಾನ ಈಗ ಎಲ್ಲರನ್ನೂ ಕಾಡುವಂತಾಗಿದೆ.

ಇಂಡಿಯಾ ಒಕ್ಕೂಟ ನಿಧಾನವಾಗಿ ಮೋದಿ ವಿರುದ್ಧ ಒಂದಾಗುತಿದ್ದರೆ ಪ್ರಧಾನಿ ಮೋದಿ ಹೋದಲ್ಲಿ ಬಂದಲ್ಲಿ ಕಾಂಗ್ರೆಸ್‌ ನಿಂದಿಸುತ್ತಾ ಕಳೆದ ಹತ್ತು ವರ್ಷ ಆಡಳಿತ ಮಾಡಿದ್ದು ಬಿ.ಜೆ.ಪಿ. ನೇತೃತ್ವದ ಎನ್.ಡಿ.ಎ. ಯೋ? ಕಾಂಗ್ರೆಸ್ಸೋ ಎನ್ನುವ ಗೊಂದಲದಲ್ಲಿ ಮಾತನಾಡಿದಂತೆ ಗೋಚರಿಸತೊಡಗಿದ್ದಾರೆ.

ಕಾಂಗ್ರೆಸ್‌ ಮತ್ತು ಇತರ ವಿರೋಧ ಪಕ್ಷಗಳನ್ನು ಐ.ಟಿ. ಇ.ಡಿ ಗಳ ಮೂಲಕ ಬೇಟೆಯಾಡಿದ ಮೋದಿ ಪರಿವಾರ ಹತಾಸೆಯ ಹಂತ ತಲುಪಿದಂತಿದ್ದು ತನ್ನ ಎಲ್ಲಾ ತಂತ್ರ-ಮಂತ್ರ ಬಳಸಿದ ಮೇಲೆನಿತ್ರಾಣನಾಗುವಂತಾದ ಮೋದಿ ನೇತೃತ್ವದ ಪರಿವಾರ ಈಗ ಹತಾಸೆಯ ಹಂತ ದಾಟಿ ಸ್ಯಾಡಿಸ್ಟ್‌ ಎನಿಸಿಕೊಳ್ಳತೊಡಗಿದೆ.

ಇದಕ್ಕೆ ಉದಾಹರಣೆ- ದೇಶದಾದ್ಯಂತ ಪ್ರಭಾವಿ ನಾಯಕರನ್ನು ಹೆದರಿಸಿ ಪಕ್ಷಕ್ಕೆ ಸೇರಿಸಿಕೊಂಡಿರುವ ಬಿ.ಜೆ.ಪಿ. ಗುಜರಾತ್‌ (ಇನ್ನೂ ಹೆಚ್ಚು ಸ್ಥಾನ) ನಲ್ಲಿ ಮತ್ತೆ ಗೆಲ್ಲಲು ಅವಕಾಶವೇ ಇಲ್ಲ, ಮಧ್ಯಪ್ರದೇಶ, ಉತ್ತರ ಪ್ರದೇಶಗಳ ಸ್ಥಿತಿ ಗುಜರಾತ್‌ ಗಿಂತ ಭಿನ್ನವಿಲ್ಲ. ದೆಹಲಿ, ಪಂಜಾಬ್‌,ರಾಜಸ್ಥಾನ, ಕರ್ನಾಟಕ, ಕೇರಳ, ತಮಿಳುನಾಡು,ಆಂಧ್ರಗಳಲ್ಲಿ ಈ ಚುನಾವಣೆಯಲ್ಲಿ ಬಿ.ಜೆ.ಪಿ. ಪಡೆದುಕೊಳ್ಳುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು. ಈ ವಾಸ್ತವ ಅರಿತಿರುವ ಬಿ.ಜೆ.ಪಿ. ನಾಯಕರು ಹತಾಶರಾಗಿ ಮತಿವಿಕಲರಂತೆ ಅರಚುತಿದ್ದಾರಾ ಎನ್ನುವ ಅನುಮಾನ ಸತ್ಯವಾಗುವಂತೆ ಬಿ.ಜೆ.ಪಿ. ನಾಯಕರ ವರ್ತನೆ ಇದೆ.

ಅಹಿಂದ್‌ ವಿರೋಧಿಗಳಾದ ಮನುವಾದಿ ಬಿ.ಜೆ.ಪಿ. ದೇಶದಲ್ಲಿ ಜನ ಕೇಳದೆ ಇ.ವಿ.ಎಸ್.‌ ಮೀಸಲಾತಿ ಪ್ರಕಟಿಸಿತು. ಮುಸ್ಲಿಂ ಮೀಸಲಾತಿ ವಿರೋಧದ ನೆಪದಲ್ಲಿ ಅಲ್ಪಸಂಖ್ಯಾತ ಮತಧರ್ಮಗಳ ವಿರೋಧಕ್ಕೆ ಕಾರಣವಾಗಿರುವ ಬಿ.ಜೆ.ಪಿ. ದೇಶದ ಬಹುಸಂಖ್ಯಾತ ಮೂಲನಿವಾಸಿ ಬಹುಜನರ ವಿರೋಧಿ ಎಂಬುದನ್ನು ಮತ್ತೆ ಮತ್ತೆ ಸಾಬೀತು ಮಾಡಿದೆ.

ಈ ಹಿನ್ನೆಲೆಯಲ್ಲಿ ಪಿ.ಎಂ. ಕೇರ್ಸ್‌, ಚುನಾವಣಾ ಬಾಂಡ್‌ ಬ್ರಷ್ಟಾಚಾರದ ಬಗ್ಗೆ ಉತ್ತರಿಸುವ ನೈತಿಕತೆ ಕಳೆದುಕೊಂಡಿರುವ ಬಿ.ಜೆ.ಪಿ. ನಿರಂತರ ಕಾಂಗ್ರೆಸ್‌ ವಿರೋಧ ಮಾಡುವುದನ್ನು ಇಂಡಿಯಾದ ಜನತೆ ಒಪ್ಪುತ್ತಿಲ್ಲ.

ತಾನು ಕಳ್ಳ, ಪರರನ್ನು ನಂಬ ಎನ್ನುವಂತಾಗಿರುವ ಬಿ.ಜೆ.ಪಿ. ಬೂಟಾಟಿಕೆಗೆ ಮೋದಿಯೇ ಮಾದರಿಯಾದರೆ ಅವರ ಪಕ್ಷ ಪರಿವಾರದ ನಾಯಕರು ಈಗ ಈ ವಿಚಾರದಲ್ಲಿ ಗೇಲಿಯ ವಸ್ತುವಾಗಿದ್ದಾರೆ.

ಮೋದಿ ವಿರೋಧ ಪಕ್ಷಗಳನ್ನು ಟೀಕಿಸುವುದು ತಾನು ತನ್ನ ಪರಿವಾರವನ್ನೇ ಹೊಗಳಿಕೊಳ್ಳುವುದು ಮಾಡುತ್ತಾ ಆಡುತ್ತಿರುವ ಕಪಟ ನಾಟಕ ಎಂಥ ದಡ್ಡರಿಗೂ ಅರ್ಥವಾಗುತ್ತದೆ.

ಕೇಜ್ರವಾಲ್‌ ವಿರುದ್ಧ,ರಾಹುಲ್‌ ವಿರುದ್ಧ, ಖರ್ಗೆ ವಿರುದ್ಧ. ಪಿಣರಾಯಿ ವಿರುದ್ಧ, ಸ್ಟಾಲಿನ್‌ ವಿರುದ್ಧ, ಉದಯನಿಧಿ ವಿರುದ್ಧ, ಮಮತಾ ಬ್ಯಾನರ್ಜಿ ವಿರುದ್ಧ, ಉದ್ಭವ್‌ ಠಾಕ್ರೆ ವಿರುದ್ಧ ಹೀಗೆ ಮೋದಿ, ಬಿ.ಜೆ.ಪಿ. ಪರಿವಾರ ಕತ್ತಿಮಸೆಯುತ್ತಿರುವ ಪ್ರಮುಖರಲ್ಲಿ ಬಿ.ಜೆ.ಪಿ.ಯವರನ್ನು ಬಿಟ್ಟು ಉಳಿದವರೆಲ್ಲರೂ ಸೇರಿರುವುದು ಕಾಕತಾಳೀಯವಲ್ಲ.

ಇದು ದೇಶದ ಕತೆಯಾದರೆ ವಿರೋಧ ಪಕ್ಷದ ನಾಯಕ ಅಶೋಕ ಬಾಲಿಶತನ, ಈಶ್ವರಪ್ಪ ಮೂರ್ಖತನ, ಪ್ರತಾಪಸಿಂಹನ ಹುಚ್ಚಾಟ, ತೇಜಸ್ವಿಸೋರ್ಯನ ಗೋಸುಂಬೆತನ ಅನಂತಕುಮಾರ ಹೆಗಡೆಯ ತಿಕ್ಕಲುತನ ಇವುಗಳನ್ನೆಲ್ಲಾ ನೋಡುತ್ತಿರುವ ಕನ್ನಡಿಗರು ಮತಾಂಧ ಅವಿವೇಕಿಗಳು ಮಾತ್ರ ಹೀಗಿರಲು ಸಾಧ್ಯ ಎಂದು ಛೀ.. ಥೂ… ಎನ್ನುತಿದ್ದಾರೆ.

ಇಷ್ಟಾದ ಮೇಲೆ ಅಸಲು ವಿಚಾರಕ್ಕೆ ಬಂದರೆ ಉತ್ತರ ಕನ್ನಡ ಸಂಸದ ತನ್ನ ಲಾಗಾಯ್ತಿನ ನೀಚತನದಂತೆ ಭಟ್ಕಳದಲ್ಲಿ ಸಭೆಯ ಮೇಜಿನ ಮೇಲೆ ಕುರ್ಚಿ ಇಟ್ಟು ತಾಕತ್ತಿದ್ದರೆ ನೀವ್ಯಾರಾದರೂ ಕೂರಿ ಎಂದು ತನ್ನ ಷಂಡತನ ಪ್ರದರ್ಶಿಸಿದ್ದು ಕರಾವಳಿ ಜನರ ಬೇಸರಕ್ಕೆ ಕಾರಣವಾಗಿದೆ. ಒಂದೆರಡು ದಶಕಗಳ ಧೀರ್ಘ ನಿದ್ರೆಯಿಂದ ಎಚ್ಚೆತ್ತ ಈ ಹೆಗಡೆ ಟಿಕೇಟ್‌ ತಪ್ಪುವ ಹೆದರಿಕೆಯಿಂದ ಹೀಗೆ ತನ್ನ ಪಕ್ಷದ ಕಾರ್ಯಕರ್ತರ ಮೇಲೆ ರೇಗುತಿದ್ದಾನೆ ಎಂದು ಸಂಘದ ಜನರೇ ಮತನಾಡುತಿದ್ದಾರೆ. ಇದು ಮೂವತ್ತು ವರ್ಷ ಜನಪ್ರತಿನಿಧಿಯಾದ ಒಬ್ಬನಿಷ್ಪ್ರಯೋಜಕ ಸಂಸದ,ಮಾಜಿ ಮಂತ್ರಿಯ ಸ್ಥಿತಿಯಾದರೆ ಇದೇ ರೀತಿ ನಿರಂತರ ಮೂವತ್ತು ವರ್ಷ ಜನಪ್ರತಿನಿಧಿಯಾಗಿ ಕನಿಷ್ಟ ಸೌಜನ್ಯ ದಿಂದಾದರೂ ಮಾತನಾಡುತ್ತಾರೆ ಎನ್ನುವ ರಿಯಾಯತಿ ಇರುವ ಮಾಜಿ ಸ್ಫೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಕತೆ ಇದಕ್ಕಿಂತ ಭಿನ್ನವಲ್ಲ. ರಾಜ್ಯ ವಿಧಾನಸಭೆಯ ಕಳೆದ ಅವಧಿಯ ಸೋಲಿನಿಂದ ಹೊರಬರದ ಕಾಗೇರಿ ಒಂದು ವರ್ಷದಲ್ಲಿ ಕನಿಷ್ಟ ಹತ್ತು ಬಾರಿ ಅವರ ಪಕ್ಷದ ಪ್ರಮುಖರು, ಕಾರ್ಯಕರ್ತರ ವಿರುದ್ಧ ವೇ ಹರಿಹಾಯ್ದಿದ್ದಾರೆ.

ಸಿದ್ಧಾಪುರದಲ್ಲಿ ನಡೆದ ಬಿ.ಜೆ.ಪಿ. ಪಕ್ಷದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಗೇರಿ ಮೋದಿಯಂತೆ ಅನಾವಶ್ಯಕ ಆರೋಪದ ಮಾತುಗಳನ್ನಾಡಿದರು. ಪಕ್ಷಕ್ಕೆ ಯಾರೂ ಅನಿವಾರ್ಯರಲ್ಲ, ತನ್ನಿಂದಲೇ ಎಲ್ಲಾ ಎನ್ನುವ ವ್ಯಕ್ತಿಗಳಿಗೆ ಸಂಘಟನೆ ಉತ್ತರ ನೀಡುತ್ತದೆ ಎಂದರು. ಈ ಟಾಂಗ್‌, ನಂಜಿನ ಮಾತು ಅವರದೇ ಪಕ್ಷದ ಕೆಲವು ಭಿನ್ನಮತೀಯರ ವಿರುದ್ಧ ಎನ್ನುವುದು ಬಹಿರಂಗ ಗುಟ್ಟು.

ಅಭಿವೃದ್ಧಿ, ಜನಪರತೆ ಇಲ್ಲದ ಮತಾಂಧ ಪರಿವಾರ ಅಧಿಕಾರ ಇದ್ದಾಗ, ಇಲ್ಲದಾಗ, ಕೈ ತಪ್ಪಿ ದಾಗ ತಲುಪುವ ಹೀನಾಯ ಸ್ಥಿತಿಗೆ ಬಿ.ಜೆ.ಪಿ. ಮತ್ತು ಬಿ.ಜೆ.ಪಿ. ಮುಖಂಡರ ಈ ವರ್ತನೆಗಳು ಸಾಕ್ಷಿ. ಈಗ ಜನರ ಕೈಯಲ್ಲಿ ಅಧಿಕಾರವಿದೆ ಇಂಥ ಸುಳ್ಳುಬುರುಕ, ಜನವಿರೋಧಿ, ಜನದ್ರೋಹಿ, ದೇಶದ್ರೋಹಿ ಮತೀಯಶಕ್ತಿಗಳಿಗೆ ಇಂಡಿಯಾದಲ್ಲಿ ಉಳಿಗಾಲ ಬೇಕೆ?

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *