೫೦೦ ರೂಪಾಯಿ ಪತ್ರಕರ್ತರ ಬಗ್ಗೆ….!

ನಾನೊಬ್ಬ ಈ ಕಾಲದಲ್ಲಿ ಬದುಕಿರದಿದ್ದರೆ…..ಬ್ರಷ್ಟರು,ದುಷ್ಟರು ಇನ್ನಷ್ಟು ಊಳಿಡುತಿದ್ದರು. ಸಭ್ಯತೆ, ನೇರತನ, ಸಾಚಾತನ ಇಲ್ಲದವರು ಇನ್ನಷ್ಟು ಎದೆಸೆಟೆದುಕೊಂಡು ತಿರುಗಾಡುತಿದ್ದರು, ಅಂಥವರ ಅಂತರಂಗ ಸಿಗ್ಗಿನಿಂದ ಮುದುಡಲಾದರೂ ನನ್ನಂಥವನಿದ್ದುದು ಸಾರ್ಥಕ ಎಂಬರ್ಥದಲ್ಲಿ ಎಲ್ಲೋ ಬ್ರೆಕ್ಟ್‌ ಬರೆಯುತ್ತಾರೆ.

ಇದು ಬ್ರೆಕ್ಟ್‌, ನೀಷೆ, ಫೈಜ್‌ ಅಹಮ್ಮದ್‌, ಬುದ್ಧ, ಬಸವಣ್ಣನ ಕಾಲವಲ್ಲ ಆದರೆ.. ಇಲ್ಲೇ ಡಾ. ಅಂಬೇಡ್ಕರ್‌ ಹೋರಾಡಿದ್ದು, ಕುವೆಂಪು ಬಡಿದಾಡಿದ್ದು, ಗೋಪಾಲಗೌಡ, ಎಚ್.‌ ಗಣಪತಿಯಪ್ಪ, ಧಾರೇಶ್ವರ ವಕೀಲರು, ವಿಡಂಬಾರಿ ಆಗಿಹೋಗಿದ್ದು.

ವಿಷಯಕ್ಕೆ ಬರೋಣ…. ಟೀ ಕುಡಿಯಲೆಂದು ಪೈ ಅಂಕಲ್‌ ಗಳ ಹೋಟೆಲ್‌ ಗೆ ಹೋಗಿದ್ದೆ, ನಾನು ಬಲುಅಪರೂಪಕ್ಕೆ ಧರಿಸುವ ಪ್ರೆಸ್‌ ಟೀಶರ್ಟ್‌ ತೊಟ್ಟಿದ್ದರಿಂದಲೇ ಅಪರಿಚಿತನೊಬ್ಬ ನೀವು ಮಾಧ್ಯಮದವರಲ್ಲ ಎಂದ. ಹೌದು, ಅವತ್ತು ನಾನ್‌ ಹೇಳಿದ್ದು ಟಿ.ವಿ.ಯಲ್ಲೇ ಬರಲೇ ಇಲ್ಲ, ಸರಿಹಾಕ್ರಿ ಮಾರ್ರೆ ಅಂದ.

ನಾನು ಹೌಹಾರುವವನಿದ್ದೆ ಯಾಕೆಂದರೆ, ನಾನು ಟಿವಿಗಳಲ್ಲಿ ಠೀವಿಯಲ್ಲಿದ್ದ ಕಾಲದಿಂದ ಈ ವರೆಗೆ ನಮ್ಮದು ಪಾರದರ್ಶಕ ಬದುಕು. ಕಂಡದ್ದು ಕಂಡಂತೆ.. ಕಾಣದ್ದು ಅದರಷ್ಟೇ ಸ್ವಲ್ಪ ಹೌಹಾರಿದಂತಾದೆ. ಈ ಮುಖವನ್ನು ನಾನೆಂದೂ ಕಂಡಿದ್ದಿಲ್ಲ, ನನ್ನೊಂದಿಗೆ ಆತ ಮಾತನಾಡಿದ್ದರೆ… ಅಥವಾ ನಮ್ಮ ಮಾಧ್ಯಮಗಳಿಗೆ ಆತ ಪ್ರತಿಕ್ರೀಯಿಸಿದ್ದರೆ ನಮ್ಮಮೂರ್ನಾಲ್ಕು ವೇದಿಕೆಗಳಲ್ಲಿ ಕಾಣಿಸಿಕೊಳ್ಳುತಿದ್ದ…. ( samajamukhi news portal, samaajamukhi fb page, samaajamukhi & samajamukhinews youtube channels)

ಯಾರಿಗೋ? ಯಾವುದೋ ಪಾಪಕ್ಕೆ ನಾನ್ಯಾಕೆ ಮರುಗಬೇಕು ಎಂದು ಆ ವಿಚಾರ ಬಿಟ್ಟೆ ಬಟ್‌ ಆ ಸಂಗತಿ ನನ್ನನ್ನು ಬಿಡಲಿಲ್ಲ.

ಯಾರೋ ನಮ್ಮ ಥರದವರೇ ಈತನ ಮೂತಿಗೆ ಮೈಕ್‌ ಹಿಡಿದು ಪ್ರತಿಕ್ರೀಯೆ ಕೇಳಿರಬೇಕು. ಪಾಪ ಆತ ಗಲಿಬಿಲಿಯಾಗಿ ನನಗೆ ತಗಲ್ಹಾಕಿಕೊಂಡನೋ? ಎಂದು ಯೋಚಿಸತೊಡಗಿದೆ.

ಕೆಲವು ಅನಿವಾರ್ಯತೆ, ಖಯ್ಯಾಲಿ, ಅವಿವೇಕಗಳು ಹೇಗಿರುತ್ತವೆಂದರೆ…. ಮಾಧ್ಯಮವೆಂದರೆ ಏನೋ ಎಂದುಕೊಂಡವರು ಯಾರ್ಯಾರನ್ನೋ ಯಾವುದೋ ವಿಷಯಕ್ಕೆ ಲಗತ್ತಿಸಿ ಸುದ್ದಿ ಮಾಡಿಬಿಡುತ್ತವೆ. ಆ ಸುದ್ದಿ ಅರಿತವರ ನಡುವೆ ಗೇಲಿ, ಲೇವಡಿಗಳಿಗೆ ಒಳಗಾಗಿಬಿಡುತ್ತವೆ. ಇಂಥ ಕೆಲವು ಅಸಭ್ಯ ವಿಚಾರಗಳು ನಮ್ಮ ಎದುರೇ ನಡೆದುಹೋಗುತ್ತಿರುವುದರಿಂದ ಜನಸಾಮಾನ್ಯರು, ಶ್ರೀಸಾಮಾನ್ಯರಿಗೂ ಗೊಂದಲಗಳಾಗುವ ಸಾಧ್ಯತೆಗಳಿರುತ್ತವಲ್ವೆ?

ಈ ಬಗ್ಗೆ ಯೋಚಿಸುವಂತಾಗುವ ಮೊದಲೇ ನನ್ನ ಪರಿಚಿತ ಅಧಿಕಾರಿಯೊಬ್ಬರು ಅವರ ಕಚೇರಿಗೆ ಪತ್ರಕರ್ತರೆಂದುಕೊಂಡು ಯಾವುದೋ ಪತ್ರಿಕೆ ಹಿಡಿದು ಬಂದಿದ್ದ ಮೂವರು ನೇರವಾಗಿ ಹಣ ಕೇಳಿದ ಬಗ್ಗೆ ನನಗೆ ತಿಳಿಸಿದ್ದರು.

ʼನೀವು ಅವರನ್ನು ನಿಮ್ಮ ಕಚೇರಿಯಲ್ಲೇ ಕೂರಿಸಿಕೊಂಡು ನಮಗೆ ಅಥವಾ ಪೊಲೀಸರಿಗೆ ಮಾಹಿತಿ ನೀಡಿದ್ದರೆ ವಾಸ್ತವ ಏನು ಎನ್ನುವುದು ಗೊತ್ತಾಗುತಿತ್ತು ಎಂದು ಹೇಳುತ್ತಲೇ ಇಲ್ಲ ಅವರು ಹೆಚ್ಚು ಅವಕಾಶವನ್ನೂ ಕೊಡಲಿಲ್ಲ ದೇಣಿಗೆ ಕೇಳುವವರಂತೆ ಬೇಡಿಕೆ ಸಲ್ಲಿಸಿ ಹೊರಟು ಹೋದರು ಎಂದು ಹೇಳಿದ ಆ ಅಧಿಕಾರಿ ಅವರು ಮುಂಡಗೋಡೋ? ಹಾನಗಲ್‌ ಕಡೆಯವರೋ ಇರಬಹುದಾದ ಸತ್ಯ ವನ್ನು ತಿಳಿಸಿದರು!.

ಹೀಗೆ ಕೆಲವು ಮಾಧ್ಯಮಗಳ ಜನರು, ಕೆಲವು ಅಸಹಾಯಕರು ಮಾಧ್ಯಮಗಳ ಹೆಸರಿನಲ್ಲಿ ಜೀವನೋಪಾಯ ಹುಡುಕುತ್ತಿರುತ್ತಾರೆ. ಅಂಥವರನ್ನು ಮಾಧ್ಯಮದವರೆಂದುಕೊಳ್ಳುವ ಅಧಿಕಾರಿಗಳು, ಕೆಲವು ಬುದ್ಧಿವಂತ ಜನಸಾಮಾನ್ಯ, ಶ್ರೀಸಾಮಾನ್ಯರೂ ಇರುತ್ತಾರೆ!.

ಈ ವಿಷಯ ನಾವಿರುವ ಪ್ರದೇಶಕ್ಕೆ ಹೊಸತಲ್ಲ. ನಿತ್ಯ ವರದಿ ಮಾಡುತ್ತಾ ಮಾಧ್ಯಮದ ಕೆಲಸ ಮಾಡುವ ನಮಗೆ ಇಲ್ಲಿಯ ಅಧಿಕಾರಿ, ಸಿಬ್ಬಂದಿಗಳ ಪರಿಚಯ ಇರುವುದೂ ವಿರಳ, ಆದರೆ ಮಾಧ್ಯಮದ ಸೋಗಿನಲ್ಲಿರುವವರು, ೫೦೦ ರೂಪಾಯಿ ಪತ್ರಕರ್ತರು ಕೆಲವೊಮ್ಮ ಸತ್ಯವನ್ನು ಸುಳ್ಳು, ಸುಳ್ಳನ್ನು ಸತ್ಯ ಎಂದು ಬಿಂಬಿಸುತ್ತಲೂ ಇರುತ್ತಾರೆ. ಯಾಕೆಂದರೆ ಇದು ಬುದ್ಧ, ಬಸವಣ್ಣ, ಲಂಕೇಶ್‌, ಅಂಬೇಡ್ಕರ್‌, ಕುವೆಂಪು ನೆಲವಾದರೂ ಅವರ್ಯಾರೂ ಈಗಿಲ್ಲ, ಅವರ ಬಗ್ಗೆ ಅರಿತವರೂ ಈಗ ವಿರಳ. ವಿಚಿತ್ರವೆಂದರೆ ಈಗಲೂ ಜಾತಿ, ಸಂಬಂಧ, ಸಂಪರ್ಕಗಳ ಕಾರಣಕ್ಕೆ ಪತ್ರಕರ್ತರೆಂದು ಗುರುತಿನ ಚೀಟಿ ಹಿಡಿದುಕೊಂಡವರೂ ಇದ್ದಾರೆ. ಈ ವಿದ್ಯಮಾನಗಳ ಮಧ್ಯೆ ನಮಗೆ ಕೆಲವು ಬಾರಿ ಅನಿಸುವುದು ಹೀಗೂ ಉಂಟೆ….?

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *