ಭಾಷೆ ಬರದಿರುವುದು ಅಂಗವೈಕಲ್ಯ ಎಂದವನಿಗೊಂದು ಲಾಲ್‌ ಸಲಾಮ್‌

ಹೈದರಾಬಾದಿನ ರಂಗರಾವ್‌ ಜಿಲ್ಲೆಯ ರಾಮೋಜಿ ಫಿಲ್ಮ್‌ ಸಿಟಿಯ ಎತ್ತರದ ಪ್ರದೇಶದಲ್ಲಿ ರಾಮೋಜಿರಾವ್‌ ಮನೆ ಇತ್ತು. ಈ ಭದ್ರ ಕಟ್ಟಡದ ಮೇಲೆ ಅವರ ಹೆಲಿಕಾಪ್ಟರ್‌ ನಿಲ್ಲುತಿತ್ತು. ಈ ಮನೆಯ ಯಜಮಾನ ಕಟ್ಟಿದ ಈ ನಾಡಿನ ರಾಮೋಜಿ ಫೀಲ್ಮ್‌ ಸಿಟಿ ಸಾವಿರಾರು ಎಕರೆ ವ್ಯಾಪ್ತಿಯ ಪ್ರದೇಶದಲ್ಲಿದೆ. ಅಲ್ಲಿ ಸೊಳ್ಳೆಗಳನ್ನೊಂದು ಬಿಟ್ಟು ಇಲಿ, ಜಿರಲೆಗಳೂ ನುಸುಳಲು ಸಾಧ್ಯವಿಲ್ಲ ಅಂಥ ಅಭೇಧ್ಯ ಕೋಟೆ ಕಟ್ಟಿದ ಹುಡುಗ ಸ್ವಾತಂತ್ರ್ಯೋತ್ತರ ಕಾಲದಲ್ಲಿ ಸೈಕಲ್‌ ಏರಿ ಉಪ್ಪಿನ ಕಾಯಿ ಹಂಚುತಿದ್ದನಂತೆ!

ಈ ಕನಸುಗಾರ ಹುಡುಗನಿಗೆ ಉತ್ಕೃಷ್ಟ ಉಪ್ಪಿನ ಕಾಯಿ, ಹಪ್ಪಳ ತಯಾರಿಸಿಕೊಡುವ ಅಮ್ಮನಿದ್ದಳು!

ಮಗ ಉಪ್ಪಿನ ಕಾಯಿ ತಯಾರಿಸುವ ಚಿಕ್ಕ ಉದ್ಯಮ ಪ್ರಾರಂಭಿಸಿ ಗೆದ್ದ. ನಂತರ ಪತ್ರಿಕೆ ಪ್ರಾರಂಭಿಸಬೇಕೆಂಬ ಆಸೆ ಬಂತು ಹಠದಿಂದ ಅದನ್ನೂ ಪ್ರಾರಂಭಿಸಿಯೇ ಬಿಟ್ಟ ನಂತರ ಎರಡು ಡಜನ್‌ ಸಂಸ್ಥೆಗಳ ಮಾಲಕನಾಗುವತ್ತ ಹೆಜ್ಜೆ ಹಾಕಿದ ತಿರುಗಿ ನೋಡಿದ್ದೇ ಇಲ್ಲ ಏರಿದ ಎತ್ತರ ನಾಲ್ಕೈದಂತಸ್ತಿನ ಮನೆ, ಅದರ ಮೇಲೆ ಹೆಲಿಪ್ಯಾಡ್!‌

ಇಷ್ಟು ಎತ್ತರದ ವ್ಯಕ್ತಿ ಮೂರು ತಿಂಗಳಿಗೊಮ್ಮ ಪ್ರತಿ ನೌಕರನ ಅಭಿಪ್ರಾಯ ಕೇಳುತಿದ್ದರು.

ಆಗಬೇಕಾದ ಕೆಲಸಗಳು ಕೂತಲ್ಲೇ ಆಗುತಿದ್ದವು ಅಳೆದು ತೂಗುವ ಮಾತೇ ಇಲ್ಲ. ರಾಮೋಜಿ ಅಂದರೆ ಹಾಗೆ ಅಲ್ಲೇ ಡ್ರಾ ಅಲ್ಲೇ ಬಹುಮಾನ ವರ್ಷದೊಳಗೆ ಪ್ರಮೋಷನ್ನು ಡಿಮೋಷನ್ನು ಏರುತ್ತಿರಬೇಕಷ್ಟೆ ಏರಲಾಗದವನಿಗೆ ಬೇರೆ ಜಾಗ.

ಇದು ನಾವು ನೋಡಿದ ರಾಮೋಜಿ. ಈ ನಾಡು ಸಂಸ್ಥೆ, ರಾಮೋಜಿ ಫಿಲ್ಮ್‌ ಸಿಟಿ, ಇದರೊಂದಿಗೆ ಅದೆಷ್ಟೋ ವ್ಯಾಪಾರ, ವ್ಯವಹಾರ ಎಲ್ಲಾ ಕಡೆ ಕರಾರುವಕ್ಕು. ಮೊದಲ ೨೦ ವರ್ಷ ಶ್ರಮ, ನಂತರ ೨೦ ವರ್ಷ ಅನುಭವ, ನಂತರ ಸ್ಥಾಪನಾ ಪರ್ವ, ನಡುವೆ ರಾಜಕಾರಣ ಸಾಧಿಸುವ ಮನಸ್ಸಿದ್ದರೆ ಸಾಧನೆ ಅವನ ಸ್ವತ್ತು ಈ ವಾಖ್ಯಕ್ಕೆ ಮೆರುಗು ನೀಡಿದ ಮೇರು ಪರ್ವತ ರಾಮೋಜಿ (೮೮).

೧೯೬೯ ರಲ್ಲಿ ಅನ್ನದಾತ ಪಾಕ್ಷಿಕ ಪ್ರಾರಂಭಿಸಿದ್ದ ರಾಮೋಜಿ ರಾವ್‌ ಕೃಷಿ ಬಗ್ಗೆ ಒಲವಿದ್ದ ಪತ್ರಕರ್ತರಾಗಿದ್ದರು.ಈ ಟಿ.ವಿ. ವಾಹಿನಿಗಳಲ್ಲಿ ಕೃಷಿ ಕಾರ್ಯಕ್ರಮಗಳಿಂದ ಅನ್ನದಾತರಿಗೆ ನೆರವಾದ ರಾಮೋಜಿ ರಾವ್‌ ಕೃಷಿ ನನ್ನ ಉಸಿರು ಎನ್ನುತಿದ್ದರು. ಉದ್ಯಮಿಯಾಗಿ ಲಕ್ಷಾಂತರ ಜನರಿಗೆ ಉದ್ಯೋಗದಾತನಾಗಿ ಅನೇಕ ಸಂಸ್ಥೆಗಳ ಒಡೆಯನಾಗಿ ರಾಮೋಜಿ ರಾವ್‌ ಏರಿದ ಎತ್ತರ ಅವರಿಗೆ ಅಭಿಸಿದ ಪದ್ಮಭೂಷಣಕ್ಕಿಂತ ನೂರಾರು ಪಟ್ಟು. ಕನ್ನಡದ ಈ ಟಿವಿ, ಸಿನೆಮಾ ನಿರ್ಮಾಣ, ಚಿತ್ರವಿತರಣೆ ಮಾಡಿದ ಮಾದರಿಯಲ್ಲೇ ಇಪ್ಪತ್ತು ಭಾಷೆಗಳಲ್ಲಿ ೨೫ ರಾಜ್ಯಗಳಲ್ಲಿ ಅವರು ಮೂಡಿಸಿದ ಗುರುತು ಮರೆಯಾಗದ ಅಕ್ಷರ. ಹಲವು ಭಾಷೆ ಬಲ್ಲವರಾಗಿದ್ದ ರಾಮೋಜಿ ಭಾಷೆ ಬರದಿದ್ದರೆ ಅಂಗವಿಕಲನಾದಂತೆ ಎಂದಿದ್ದ ಅವರ ಮಾತು ಈಗಲೂ ಕಿವಿ,ಎದೆಯಲ್ಲಿ ರಿಂಗಣಿಸುವ ಧ್ಯೇಯವಾಖ್ಯ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮೀನು ಕಚ್ಚಿ ಸಾವು!

ದೇವಬಾಗ್: ಬಲೆಗೆ ಬಿದ್ದಿದ್ದ ‘jellyfish’ ಕುಟುಕಿ ಮೀನುಗಾರ ಸಾವು! ಮೀನು ಯಾರಿಗೂ ಏನೂ ಮಾಡೋಲ್ಲ ಅನ್ನೋದೇನೋ ನಿಜ. ಆದರೆ, ಅದರಲ್ಲೂ ವಿಷಕಾರಿ ಮೀನುಗಳು ಉಂಟು...

ತೈಲ ಬೆಲೆ ಏರಿಕೆ ಪ್ರತಿಭಟನೆ ವೇಳೆ ಹೃದಯಾಘಾತ: BJP ಮಾಜಿ MLC ಎಂ.ಬಿ ಭಾನುಪ್ರಕಾಶ್ ನಿಧನ

ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ ಭಾನುಪ್ರಕಾಶ್ ಅವರು ಹೃದಯಾಘಾತದಿಂದ ಸೋಮವಾರ ನಿಧನ ಹೊಂದಿದ್ದಾರೆ. ಭಾನುಪ್ರಕಾಶ್ ಶಿವಮೊಗ್ಗ: ಇಂಧನ ಮೇಲಿನ ವ್ಯಾಟ್ ಏರಿಕೆ ವಿರೋಧಿಸಿ...

ಪ.ಪಂ. ರಸ್ತೆ, ಚರಂಡಿ ನಿರ್ವಹಣೆಗೆ ಆದ್ಯತೆ ನೀಡಲು ಶಾಸಕರ ಸೂಚನೆ

ಸಿದ್ಧಾಪುರ ಪಟ್ಟಣ ಪಂಚಾಯತ್‌ ವ್ಯಾಪ್ತಿಯ ರಸ್ತೆಗಳ ನಿರ್ವಹಣೆ,ಹಾಗೂ ಚರಂಡಿ ಮತ್ತು ನೀರಿನ ವ್ಯವಸ್ಥೆಗಳಿಗೆ ಆದ್ಯತೆಯ ಮೇಲೆ ಕೆಲಸ ಮಾಡಲು ಶಾಸಕ ಭೀಮಣ್ಣ ನಾಯ್ಕ ಸೂಚಿಸಿದರು....

fake modi menia…….. ಮೋದಿ ಭಜನೆಯಿಂದ ಕಾಂಗ್ರೆಸ್‌ ಸೋಲು! ಕಾಂಗ್ರೆಸ್‌ ಸೋಲಿಗೆ ಕಾರಣ ಭಾಗ-೦೫ : ಕ್ರಾಂತಿ ಚಿರಾಯುವಾಗದೆ ಅನ್ಯ ದಾರಿಯೆ ಇಲ್ಲ.

ಸಾಹಿತ್ಯ, ಚಿಂತನೆ, ಹೋರಾಟಗಳೆಲ್ಲ ಯಾಕೆ ಬೇಕು ಎನ್ನುವ ಮನಸ್ಥಿತಿ ಹಲವರಲ್ಲಿದೆ. ಸಾಹಿತ್ಯ ಪ್ರಭುತ್ವವನ್ನು ಪ್ರಶ್ನಿಸಿ ಆಡಳಿತವನ್ನು ಜನಪರವಾಗಿಸುವತ್ತ ಕೆಲಸ ಮಾಡುತ್ತದೆ. ಚಿಂತನೆ ಹೊಸ ಹೊಳಹುಗಳ...

ದುರಹಂಕಾರ ಪಟ್ಟವರನ್ನು ಶ್ರೀರಾಮನೇ 240 ಸೀಟುಗಳಿಗೆ ತಡೆದ: RSS ನಾಯಕ ಇಂದ್ರೇಶ್ ಕುಮಾರ್ ವಾಗ್ದಾಳಿ

ಲೋಕಸಭಾ ಚುನಾವಣೆಯ ಫಲಿತಾಂಶಗಳ ನಂತರ ಆರೆಸ್ಸೆಸ್‌ ನಾಯಕ ಇಂದ್ರೇಶ್‌ ಕುಮಾರ್ ಆಡಳಿತ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ ಹಾಗೂ ʼಅಹಂಕಾರʼಕ್ಕಾಗಿ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ....

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *