ವ್ಯಕ್ತಿ- ಈಶ್ವರಪ್ಪ, ಅಂತ್ಯದಲ್ಲಿ ಜ್ಞಾನೋದಯ!

ಈ ವರ್ಷ ಹೆಚ್ಚು ಚರ್ಚೆ-ವಿವಾದಕ್ಕೆ ಒಳಗಾದ ರಾಜ್ಯದ ನಾಯಕರೆಂದರೆ… ಅದು ಈಶ್ವರಪ್ಪ, ಕುಮಾರಸ್ವಾಮಿ, ಸಿ.ಟಿ.ರವಿ ಇತ್ಯಾದಿಗಳು.

ಕುಮಾರಸ್ವಾಮಿ ಪರಂಪರೆ ಇರುವ ನಾಯಕ, ಕುಮಾರಸ್ವಾಮಿ ಯಾರೊಂದಿಗೂ ಸೇರಬಲ್ಲರು, ಯಾರೊಂದಿಗೂ ಜಗಳಕ್ಕೆ ನಿಲ್ಲಬಲ್ಲರು! ಕರ್ನಾಟಕದ ಅತ್ತ್ಯುತ್ತಮ ಮುಖ್ಯಮಂತ್ರಿಗಳಲ್ಲಿ ಒಬ್ಬರಾಗಿರುವ ಕುಮಾರಸ್ವಾಮಿ ರಾಜಕೀಯ ಅವಸಾನ ಹೊಂದಿದರು ಎಂದು ಅನೇಕರು ಭಾವಿಸಿದ್ದರು. ಆದರೆ ಆಗಿದ್ದು ಬೇರೆ.

ಬಿ.ಜೆ.ಪಿ.ಗೆ ಬಹುಮತ ಸಿಗದ ಹಿನ್ನೆಲೆಯಲ್ಲಿ ಕಿರೀಟ ಕಳೆದುಕೊಂಡ ಚಕ್ರವರ್ತಿಯಂತಾಗಿರುವ ಮತಾಂಧ ಮೋದಿ ಕುಮಾರಸ್ವಾಮಿಯಂಥವರ ಕಾಲು ಹಿಡಿಯುವ ಮಟ್ಟಕ್ಕೆ ಇಳಿಯಬೇಕಾದ ಅನಿವಾರ್ಯತೆಯನ್ನು ಇಂಡಿಯಾದ ಜನತೆ ಕರುಣಿಸಿದ್ದಾರೆ. ಇದೊಂದೇ ಕಾರಣಕ್ಕೆ ಭಸ್ಮಾಸುರ ಸಂಘಿಗಳ ಸಂಘ ಮಾಡಿದ ಕುಮಾರಸ್ವಾಮಿಯಂಥವರು ಬಚಾವಾಗಿದ್ದಾರೆ. ಏನೇ ಇರಲಿ ಒಕ್ಕಲಿಗರೆಂದರೆ ಒಂದು ಜಾತಿಯಲ್ಲ ಅದು ಕೃಷಿಕರ ಗುಂಪು ಅಂಥ ಜನಸಾಮಾನ್ಯರ ಗುಂಪಿನ ನಾಯಕ ಕುಮಾರಸ್ವಾಮಿ ಬಂಗಾರಪ್ಪನವರಂತೆ ದುರಂತ ನಾಯಕರಾಗುವ ಅಪಾಯದಿಂದ ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ. ಅವರ ಅವಕಾಶ ಅವರನ್ನು ರಾಷ್ಟ್ರೀಯ ನಾಯಕರನ್ನಾಗಿಸಬಹುದು ಆದರೆ ಅನಿವಾರ್ಯತೆಗೆ ಜಾತ್ಯಾತೀತತೆ ಹಾಗೆಂದರೆಏನು? ಯಾರು ಜಾತ್ಯಾತೀತರು? ಎಂದೆಲ್ಲಾ ಕೇಳಿದ್ದ ಕುಮಾರಸ್ವಾಮಿ ಮುಂದೆ ಮೋದಿ ಯಾರು? ಅವರ ಸಂಘ ದೇಶಪ್ರೇಮಿಯೆ? ಮೋದಿ ಇಂಥ ನಾಟಕಕಾರ ಎಂದು ನನಗೆ ಗೊತ್ತಿರಲಿಲ್ಲ ಎನ್ನುವ ದಿನಗಳು ದೂರವಿಲ್ಲ.

ಈಶ್ವರಪ್ಪ…. ಕರಾವಳಿಯ ಎರಡು ಜನ ಬಿ.ಜೆ.ಪಿ. ಅಭ್ಯರ್ಥಿಗಳು ಆ ಪಕ್ಷದ ಬಿ.ಫಾರಂ ಗಾಗಿ ನೂರಾರು ಕೋಟಿ ಹಣ (ಲಂಚ) ನೀಡಿರುವ ಗುಟ್ಟು ಈಗ ಬಹಿರಂಗವಾಗಿದೆ. ರೈತ ನಾಯಕ ಯಡಿಯೂರಪ್ಪ ಬಿ.ಜೆ.ಪಿ. ಜೊತೆ ವಿರಸ ಕಟ್ಟಿಕೊಂಡು ಬಿ.ಜೆ.ಪಿ.ಯನ್ನು ಮುಳುಗಿಸಿ ಮತ್ತೆ ಬಿ.ಜೆ.ಪಿ ಯನ್ನು ದಡ ಮುಟ್ಟಿಸಿದ್ದಾರೆ. ಸುಳ್ಳು, ಕಪಟತನ, ಮುಖವಾಡ, ನಟನೆಗೆ ಹೆಸರಾಗಿರುವ ಮೋದಿ ಪರಿವಾರ ಮೊದಲು ಯಡಿಯೂರಪ್ಪನವರನ್ನು ನೀನ್ಯಾರು? ಎಂದು ಕೇಳಿ ಹೊಡೆತ ತಿಂದಿದೆ. ಇದೇ ಯಡಿಯೂರಪ್ಪನವರ ವಿರುದ್ಧ ಸಿ.ಟಿ.ರವಿ, ಈಶ್ವರಪ್ಪನಂತಹ ಮತಿವಿಕಲರನ್ನು ಎತ್ತಿಕಟ್ಟಿದ್ದ ಸಂಘದ ನಾಯಕರು ಯಡಿಯೂರಪ್ಪನ ಜಾತಿ ಪರಿವಾರದ ವಿರುದ್ಧ ಸಮರ ಸಾರಿ ಶರಣಾಗಿದ್ದಾರೆ. ಈಶ್ವರಪ್ಪ, ಸಿ.ಟಿ.ರವಿ, ಪ್ರತಾಪಸಿಂಹರಂಥ ಮೂರನೇ ದರ್ಜೆಯ ಬಾಯಿಬಡುಕರನ್ನು ಎತ್ತಿ ಕಟ್ಟಿದ್ದ ಮಹಾಬ್ರಾಹ್ಮಣ ನಯವಂಚಕ ಸಂಘಿ ಬಿ.ಎಲ್.‌ ಸಂತೋಷ್‌ ಈಗ ಬಿಲ ಸೇರುವಂತಾಗಲು ಮೋದಿ ಸಂಘ ಕಟ್ಟಿದ ಮತಾಂಧತೆಯ ಕುಟಿಲತೆ ಕಾರಣ. ಈ ಪರಿವಾರದ ಒಳಜಗಳದಲ್ಲಿ ಬಲಿಪಶುವಾದವನು ವಿವೇಕವಿಲ್ಲದ ಸಂಘಿ ಈಶ್ವರಪ್ಪ ಬಿ.ಜೆ.ಪಿ. ಮತ್ತು ಆರೆಸ್ಸೆಸ್‌ ಪರಿವಾರ ಈಶ್ವರಪ್ಪನಂಥ ಕಳಪೆ ಹಿಂದುಳಿದವರನ್ನು ಕುಣಿಸಿ ಕೋಡಂಗಿಗಳನ್ನಾಗಿಸಿ ಮೂಲೆಗುಂಪು ಮಾಡುತ್ತಿರುವುದು ಇದೇ ಮೊದಲೇನಲ್ಲ. ಈಶ್ವರಪ್ಪ ಜೀವನವಿಡೀ ಸಂಘ, ರಾಷ್ಟ್ರೀಯತೆ, ಹಿಂದುತ್ವ ಎಂದು (ಬೊಗಳಿ) ಸಂಘದ ಪರಿಚಾರಿಕೆ ಮಾಡಿ ಈಗ ಕುರುಬರು, ಹಿಂದುಳಿದವರು

ಎನ್ನುತ್ತಿರುವುದು ಬಿ.ಜೆ.ಪಿ.ಯ ಇಂತಹ ಅವಿವೇಕಿ ಒ.ಬಿ.ಸಿ . ಗಳಿಗೆ ಪಾಠವಾಗಬೇಕು.

ಯಾಕೆಂದರೆ ಬ್ರಾಹ್ಮಣ ಮೋದಿಯಂತಹ ನಯವಂಚಕ ಆಶಾಢಭೂತಿಗಳು ಸಂಘ, ಬಿ.ಜೆ.ಪಿ.ಯಲ್ಲಿ ಹಿಂದುಳಿದವರ ಮುಖವಾಡ ಹಾಕಿ ಹಿಂದುಳಿದವರನ್ನು ಹಾಳು ಮಾಡುತ್ತವೆ. ಬಿ.ಬಿ. ಶಿವಪ್ಪ, ಈಶ್ವರಪ್ಪ ನಂತರ ಶ್ರೀನಿವಾಸ ಪೂಜಾರಿ ಹೀಗೆ ಮೂರ್ಖ ಅನಕ್ಷರಸ್ಥ ಫೇಕು ಅನುಯಾಯಿಗಳು ತಮ್ಮ ಸ್ವಾರ್ಥಕ್ಕೆ ಹಿಂದುಳಿದವರ ಹಿತ ಬಲಿಕೊಡುತ್ತಿರುತ್ತಾರೆ. ಈಶ್ವರಪ್ಪ ಪ್ರಹಸನ ಸಂಘಿ, ಬಿ.ಜೆ.ಪಿ. ನಯವಂಚನೆಯ ಬೃಹತ್‌ ಕಾದಂಬರಿಯ ಒಂದು ಪುಟವಷ್ಟೇ. ಮುಂದಿನ ಸರದಿಯಲ್ಲಿ ಅಣ್ಣಾಮಲೈ, ಕುಮಾರಸ್ವಾಮಿ, ಪ್ರತಾಪ ಸಿಂಹ, ಸಿ.ಟಿ. ರವಿ, ಹಾಲಪ್ಪ, ಕಾರಜೋಳ, ಅವನ್ಯಾವನೋ ಚಲವಾದಿ ನಾರಾಯಣ ಸ್ವಾಮಿ ಇಂಥವರೆಲ್ಲಾ ಸೇರಲಿದ್ದಾರೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *