


ಸಿದ್ಧಾಪುರ ಪಟ್ಟಣ ಪಂಚಾಯತ್ ವ್ಯಾಪ್ತಿಯ ರಸ್ತೆಗಳ ನಿರ್ವಹಣೆ,ಹಾಗೂ ಚರಂಡಿ ಮತ್ತು ನೀರಿನ ವ್ಯವಸ್ಥೆಗಳಿಗೆ ಆದ್ಯತೆಯ ಮೇಲೆ ಕೆಲಸ ಮಾಡಲು ಶಾಸಕ ಭೀಮಣ್ಣ ನಾಯ್ಕ ಸೂಚಿಸಿದರು.

ಪಟ್ಟಣ ಪಂಚಾಯತ್ ಸಭಾ ಭವನದಲ್ಲಿ ಪ್ರಗತಿ ಪರಿಶೀಲನೆ ನಡೆಸಿದ ಅವರು ಚರಂಡಿ ದುರಸ್ತಿ, ನೀರಿನ ಪೋಲು ತಡೆ ಹಾಗೂ ರಸ್ತೆ ನಿರ್ವಹಣೆಗಳನ್ನು ಅದ್ಯತೆಯ ಮೇಲೆ ಮಾಡಲು ಸೂಚಿಸಿದರು.
ಪ.ಪಂ. ನ ಹೊಸೂರು ೧೨,೧೩ ನೇ ವಾರ್ಡ್ ಮತ್ತು ಕೊಂಡ್ಲಿ ಭಾಗದ ರಸ್ತೆ ನಿರ್ವಹಣೆ ಬಗ್ಗೆ ಸ್ಥಳೀಯರು ಶಾಸಕರ ಗಮನ ಸೆಳೆದರು. ಸಭೆಯ ನಂತರ ಕೆಲವು ಪ್ರದೇಶಗಳ ಭೇಟಿ ಮಾಡಿದ ಶಾಸಕರು ಸ್ಥಳೀಯರು ತಮ್ಮ ಬಳಿ ದೂರು ನೀಡದಂತೆ ಜನರ ಅಹವಾಲುಗಳಿಗೆ ಸ್ಪಂದಿಸಲು ಆದೇಶಿಸಿ ಸಾರ್ವಜನಿಕರ ಸಹಕಾರದಿಂದ ತೆರಿಗೆ ವಸೂಲಾತಿಯನ್ನೂ ಹೆಚ್ಚಿಸಲು ಸಲಹೆ ನೀಡಿದರು.
ತಕ್ಷಣದ ಅನಿವಾರ್ಯತೆ, ಆಗಲೇಬೇಕಾದ ಅವಶ್ಯ ಕೆಲಸಗಳ ಬಗ್ಗೆ ಶೀಘ್ರ ಕಾರ್ಯಾರಂಭಕ್ಕೆ ಸೂಚಿಸಿದ ಶಾಸಕರು ಸರ್ಕಾರ, ಅಧಿಕಾರಿಗಳಿಂದ ಆಗಬೇಕಾದ ಕೆಲಸಗಳನ್ನು ಸಮಯ ಪಡೆಯದೆ ಮಾಡಿಕೊಡುವ ಭರವಸೆ ನೀಡಿದರು.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
