


ಸಾಮಾಜಿಕ ಪರಿವರ್ತನೆ ವಿಚಾರದಲ್ಲಿ ನಾರಾಯಣಗುರುಗಳು ಮತ್ತು ದೇವರಾಜ್ ಅರಸು ಒಂದೇ ನಾಣ್ಯದ ಎರಡು ಮುಖಗಳು ಎಂದು ಗ್ಯಾ ರಂಟಿ ಅನುಷ್ಠಾನ ಸಮೀತಿ ತಾಲೂಕಾ ಅಧ್ಯಕ್ಷ ಕೆ. .ಜಿ.ನಾಗರಾಜ್ ಹೇಳಿದ್ದಾರೆ. ಸಿದ್ಧಾಪುರದ ತಾ.ಪಂ. ಸಭಾಭವನದಲ್ಲಿ ನಡೆದ ದೇವರಾಜ್ ಅರಸು ಮತ್ತು ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಾರಾಯಣ ಗುರುಗಳು ನೈತಿಕ ಶಕ್ತಿ ಕೊಟ್ಟರೆ, ದೇವರಾಜ್ ಅರಸು ಆರ್ಥಿಕ ಶಕ್ತಿ ತುಂಬಿದರು ಇವು ಸಾಮಾಜಿಕ ಪರಿವರ್ತನೆಯ ದಾರಿಗಳು ಎಂದರು.

ವಿಶೇಶ ಉಪನ್ಯಾಸ ನೀಡಿದ ಪ್ರಾಚಾರ್ಯ ಎಂ.ಕೆ.ನಾಯ್ಕ ಹೊಸಳ್ಳಿ ಸಾಧಕರನ್ನು ಸ್ಮರಿಸಲು ಒಂದು ನೆಪ ಬೇಕು ಇಬ್ಬರು ಸಾಧಕರ ಜನ್ಮದಿನಗಳು ಒಂದೇ ದಿನ ಬಂದಿದ್ದು ಕಾಕತಾಳೀ ಯವಾದರೂ ಇಬ್ಬರೂ ಭೂಮಿತೂಕದ ಸಾಧಕರಾಗಿರುವುದು ವಿಶೇಶ ಎಂದರು.
ಇದೇ ಕಾರ್ಯಕ್ರಮದಲ್ಲಿ ತಾಲೂಕಿನ ಪ್ರತಿಭಾವಂತರು, ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
