


ಸಿದ್ಧಾಪುರ ತಾಲೂಕಾ ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘ ೨೦೨೩-೨೪ ಆರ್ಥಿಕ ವರ್ಷದಲ್ಲಿ ೪ ಕೋಟಿ,೩೪ ಲಕ್ಷ ೧೮ ಸಾವಿರ ೬೨೫ ರೂಪಾಯಿ ನಿವ್ವಳ ಲಾಭ ಗಳಿಸಿದ್ದು ಈ ಲಾಭದಲ್ಲಿ ಶೇರುದಾರರಿಗೆ ಶೇ.೧೫ ಡಿವಿಡೆಂಟ್ ಕೊಡಲು ನಿರ್ಧರಿಸಿದೆ. ಈ ಬಗ್ಗೆ ಪ್ರಕಟಣೆ ನೀಡಿರುವ ಆಡಳಿತ ಮಂಡಳಿ ಆ. ೨೪ ರ ಶನಿವಾರ ಮಧ್ಯಾಹ್ನ ಮೂರುಗಂಟೆಗೆ ಸಂಘದ ಪ್ರಧಾನ ಕಛೇರಿಯಲ್ಲಿ ನಡೆಯುವ ವಾರ್ಷಿಕ ಸಭೆಗೆ ಸದಸ್ಯರನ್ನು ಆಹ್ವಾನಿಸಿದೆ.


ಸಂಘದ ವಾರ್ಷಿಕ ವ್ಯವಹಾರ, ಆಯವ್ಯಯಗಳ ಕುರಿತು ವಿವರ ನೀಡಿದ ಆಡಳಿತ ಮಂಡಳಿ ರೈತರ ಸಹಕಾರ,ಪ್ರೋತ್ಸಾಹದಿಂದ ಸಂಘ ಪ್ರಗತಿಯಲ್ಲಿದ್ದು ಸದಸ್ಯರ ಹಿತಕ್ಕಾಗಿ ಸಂಘ ಮತ್ತು ಸದಾರ್ವಜನಿಕವಾಗಿ ಮಾಡಿದ ಕೆಲಸ, ಹೋರಾಟಗಳ ಬಗ್ಗೆ ಅಧ್ಯಕ್ಷ ಆರ್. ಎಂ. ಹೆಗಡೆ ಬಾಳೇಸರ ವಿವರಿಸಿದರು.
ಬೆಳೆನಷ್ಟ, ರೋಗ ಬಾಧೆಗೆ ಸಿಲುಕಿ ನಲುಗುತ್ತಿರುವ ರೈತರ ನೆರವಿಗೆ ಬರಲು ಸ್ಥಳೀಯ ಶಾಸಕ ಭೀಮಣ್ಣರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ನೀಡುವುದಾಗಿ ತಿಳಿಸಿದರು.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
