ಗುರುವಾರದಿಂದ ಒಡ್ಡೋಲಗದ ಶ್ರಾವಣ ಸಂಜೆ…..

ಗ್ರಾಮೀಣ ರಂಗಭೂಮಿ ಉಳಿಸುತ್ತಾ ಬೆಳೆಸುತ್ತಿರುವ ಮಲೆನಾಡಿನ ಸಿದ್ದಾಪುರದ ಒಡ್ಡೋಲಗಕ್ಕೆ ಈಗ ೨೫ ವರ್ಷಗಳ ಸಂಭ್ರಮ. ಸಾಂಸ್ಕೃತಿಕ ಚಟುವಟಿಕೆಗಳ ಅವಸಾನದ ಪ್ರಾರಂಭದ ದಿನಗಳಲ್ಲಿ ಶುರುವಾದ ಬಿದ್ರಕಾನ ಕವಲಕೊಪ್ಪ ಮೂಲದ ಹಿತ್ತಲಕೈ ಗಣಪತಿ ತನ್ನ ನೀನಾಸಂ ಶ್ರೀಮಂತ ಅನುಭವದೊಂದಿಗೆ ಒಡ್ಡೋಲಗ ಪ್ರಾರಂಭಿಸಿ ಪ್ರಾಮಾಣಿಕವಾಗಿ ರಂಗ ಚಟುವಟಿಕೆಯಲ್ಲಿ ಸಕ್ರೀಯರಾದವರು. ಹೊಸ ಅಲೆಯ ನಾಟಕಗಳ ಮೂಲಕ ಆಧುನಿಕ ರಂಗಭೂಮಿಯ ಎಲ್ಲಾ ಸಾಧ್ಯತೆಗಳನ್ನು ದುಡಿಸಿಕೊಂಡ ಗಣಪತಿ ತನ್ನ ಪ್ರತಿಭೆ, ಶ್ರಮ,ತೊಡಗಿಸಿಕೊಳ್ಳುವಿಕೆಯಿಂದ ತಂಪು ಮಲೆನಾಡಿನ ರಂಗಾಸಕ್ತಿಯನ್ನು ಬೆಚ್ಚಗಿಟ್ಟವರು.

ಕಳೆದ ೨೫ ವರ್ಷಗಳಿಗೂ ಹಿಂದೆ ವಿದ್ಯಾರ್ಥಿಯಾಗಿ ರಂಗಭೂಮಿ ಪ್ರವೇಶಿಸಿದ ಗಣಪತಿ ಹೆಗಡೆ ಹಿತ್ತಲಕೈ ನೇತೃತ್ವದಲ್ಲಿ ಪತ್ನಿ, ಮಗಳು ಗ್ರಾಮಸ್ಥರು ಸೇರಿದ ನೂರಾರು ಜನ ರಂಗಾಸಕ್ತರಿಗೆ ನೆರಳು ನೀಡಲು ಪ್ರಾರಂಭವಾದ ಒಡ್ಡೋಲಗ ಕಲಾವಿದರ ಪೋಷಣೆ ಜೊತೆಗೆ ರಂಗಾಸಕ್ತರಿಗೆ ಸ್ಥಳೀಯ, ಹೊರಗಿನ ಪ್ರತಿಭೆಗಳ ಪರಿಚಯ ಮಾಡಿಸಿ ರಂಗಾಸಕ್ತಿ ಬೆಳೆಸಿದ್ದು ವಿಶೇಶ.

ಒಡ್ಡೋಲಗದ ತಿರುಗಾಟದ ಜೊತೆಗೆ ಬಹುತೇಕ ಚಟುವಟಿಕೆಗಳು ಸ್ಥಳೀಯ ಸ್ಥಳೀಯ ಪ್ರತಿಭೆಗಳಿಗೆ ನಾಟಕ ಪ್ರೀಯರಿಗೆ ಅವಕಾಶ ಒದಗಿಸಿವೆ. ಬೆಳ್ಳಿಹಬ್ಬ ಆಚರಿಸಿಕೊಳ್ಳುತ್ತಿರುವ ಒಡ್ಡೋಲಗ ನಡೆಸುತ್ತಿರುವ ಅನೇಕ ಚಟುವಟಿಕೆಗಳಲ್ಲಿ ಶ್ರಾವಣ ಸಂಜೆ ಸಂಸ್ಕೃತಿ ಉತ್ಸವವೂ ಒಂದು.

ಆಗಸ್ಟ್‌ ೨೯ ರಿಂದ ಮೂವತ್ತೊಂದರ ವರೆಗೆ ಮೂರು ದಿವಸ ನಡೆಯಲಿರುವ ಈ ವರ್ಷದ ವಾರ್ಷಿಕ ಶ್ರಾವಣ ಸಂಜೆ ಸಂಸ್ಕೃತಿ ಉತ್ಸವ೨೦೨೪ ಒಡ್ಡೋಲಗದ ಬೆಳ್ಳಿಹಬ್ಬ ಆಚರಣೆಯ ವರ್ಷದ ಮೊದಲ ಕಾರ್ಯಕ್ರಮ ಕೂಡಾ.

ಒಡ್ಡೋಲಗದ ಶ್ರಾವಣ ಸಂಭ್ರಮ ಸಂಸ್ಕೃತಿ ಉತ್ಸವಕ್ಕೂ ೨ ದಶಕಗಳ ಚರಿತ್ರೆ. ಕವಲಕೊಪ್ಪದಿಂದ ಪ್ರಾರಂಭವಾದ ಒಡ್ಡೋಲಗದ ಪಯಣಕ್ಕೆ ಸಾಥಿಯಾದವರು ಅನೇಕರು ಈ ವರ್ಷ ಕೂಡಾ ಮೂರೂ ದಿವಸ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಮೊದಲ ದಿನ ರಾಮಾಂಜನೇಯ ಪ್ರಸಂಗ ತಾಳಮದ್ದಲೆ ಆ.೩೦ ರ ಎರಡನೇ ದಿನ ಜನಶತ್ರು ನಾಟಕ,ಮೂರನೇ ದಿನ ಶನಿವಾರ ಋತುಪರ್ಣ ಯಕ್ಷಗಾನ ನಡೆಯಲಿದೆ. ಇವುಗಳೊಂದಿಗೆ ಅನೇಕ ಗಣ್ಯರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮಗಳು ನಡೆಯಲಿವೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತಾ.ಜಿ. ಕಾಂಗ್ರೆಸ್‌ ಅಧ್ಯಕ್ಷರ ಬದಲಾವಣೆ……

ಬ್ಲಾಕ್, ಜಿಲ್ಲಾಧ್ಯಕ್ಷರ ಬದಲಾವಣೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸುಳಿವು ಸಂಘಟನಾತ್ಮಕ ಬದಲಾವಣೆ ಹಾಗೂ ಸಮಾಜಕ್ಕೆ ತಲುಪುವ ಉದ್ದೇಶದಿಂದ ಜಿಲ್ಲಾ ಮಟ್ಟದ ಅಧ್ಯಕ್ಷರನ್ನು ಬದಲಾವಣೆ ಮಾಡಲಾಗುತ್ತದೆ ಎಂದು...

ಹುಲಕುತ್ರಿಯ ಶಿಕ್ಷಕ ದರ್ಶನ ಹರಿಕಾಂತ್‌ ಅಭಿನಂದಿಸುತ್ತಾ……

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಶೈಕ್ಷಣಿಕ ಜಿಲ್ಲೆಯ ಕುಗ್ರಾಮ ಹುಲಕುತ್ರಿ. ಈ ಗ್ರಾಮದಲ್ಲಿ ಮುಖ್ಯ ಶಿಕ್ಷಕರಾಗಿ ಪ್ರಾಥಮಿಕ ಶಾಲೆಯನ್ನು ವಿಶ್ವಕ್ಕೆ ಪರಿಚಯಿಸಿದವರು ದರ್ಶನ ಹರಿಕಾಂತ....

wild news….! ಜಿಂಕೆ, ಚಿರತೆ ಸಾವು!

ಜಿಂಕೆ ಬೇಟೆಯಾಡಿ ಕೊಂದ ಅರೋಪದ ಮೇಲೆ ಅರಣ್ಯ ಇಲಾಖೆಯವರು ಯಲ್ಲಾಪುರ ತಾಲೂಕಿನ ಮದನೂರು ಗ್ರಾಮದ ಹುಲಗೋಡಿನ ರಮೇಶ ನಾಗೇಶ ಗಾಂವ್ಕರ ಎಂಬಾತನನ್ನು ಬಂಧಿಸಿ ಆತನಿಂದ...

ಸಿಪಿಐ-ಎಂ ಹಿರಿಯ ನಾಯಕ ಸೀತಾರಾಂ ಯೆಚೂರಿ, ಏಮ್ಸ್‌​ ಆಸ್ಪತ್ರೆಗೆ ದೇಹ ದಾನ!

ಸಾವಿನಲ್ಲೂ ಸಾರ್ಥಕತೆ ಮೆರೆದ ಸಿಪಿಐ-ಎಂ ಹಿರಿಯ ನಾಯಕ ಸೀತಾರಾಂ ಯೆಚೂರಿ, ಏಮ್ಸ್‌​ ಆಸ್ಪತ್ರೆಗೆ ದೇಹ ದಾನ! ಸೀತಾರಾಮ್ ಯೆಚೂರಿ ಅವರ ಇಚ್ಚೆಯಂತೆ ಅವರ ಕುಟುಂಬವು...

ಸಿಪಿಐ-ಎಂ ಹಿರಿಯ ನಾಯಕ ಸೀತಾರಾಂ ಯೆಚೂರಿ ನಿಧನ

72 ವರ್ಷದ ಸೀತಾರಾಂ ಯೆಚೂರಿ ಅವರು ತೀವ್ರ ಉಸಿರಾಟದ ಸೋಂಕಿನಿಂದಾಗಿ ಏಮ್ಸ್ ನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *