


ಸಿದ್ದಾಪುರ: ವೈದ್ಯರ ನಿರ್ಲಕ್ಷದಿಂದ ಇತ್ತೀಚೆಗೆ ಮೃತಪಟ್ಟ ಹೊಸೂರಿನ ವಿನೋದಾ ಹಾಗೂ ಕೋಣೆಗದ್ದೆಯ ಜ್ಯೋತಿ ಯವರ ಮನೆಗೆ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಶನಿವಾರ ಭೇಟಿ ನೀಡಿ ಎರಡು ಕುಟುಂಬಕ್ಕೂ ತಲಾ 50 ಸಾವಿರ ಧನಸಹಾಯ ಮಾಡುವ ಮೂಲಕ ಧೈರ್ಯ ತುಂಬಿದರು.

ಪಟ್ಟಣದ ಹೊಸೂರಿನ ವಿನೋದಾ ಇವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ನುಡಿದಂತೆ 50 ಸಾವಿರ ಹಣ ನೀಡಿ ಧೈರ್ಯ ತುಂಬಿದರು. ಅದೇ ರೀತಿ ಕೋಣನಗದ್ದೆಯ ಜ್ಯೋತಿ ಮನೆಗೂ ಸಹ ಭೇಟಿ ನೀಡಿ 50 ಸಾವಿರ ಧನ ಸಹಾಯ ಮಾಡಿ ಅವರ ಕಷ್ಟದಲ್ಲಿ ತಾವು ಸಹ ಭಾಗಿಯಾಗುವುದಾಗಿ ಧೈರ್ಯ ತುಂಬಿದರು. ಅದೇ ರೀತಿ ಅನಾರೋಗ್ಯದಿಂದ ನಿಧನರಾದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಕೋಲಶಿರ್ಸಿಯ ಈರೇಶ ನಾಯ್ಕ ಹಾಗೂ ಚನಮಾಂವನ ಈಶ್ವರ ನಾಯ್ಕ
ಇವರ ಮನೆಗೆ ಭೇಟಿ ನೀಡಿ ಆರ್ಥಿಕ ಸಹಾಯ ನೀಡಿದರು.
ಜೊತೆಗೆ ವಿದ್ಯುತ್ ಅವಘಡದಿಂದ ಕೊಟ್ಟಿಗೆಗೆ ಬೆಂಕಿ ತಗುಲಿ ಜಾನುವಾರು ಮೃತಪಟ್ಟ ಕೋಲಶಿರ್ಸಿಯ ಉಮೇಶ ನಾಯ್ಕ ರ ಮನೆಗೆ ಭೇಟಿ ನೀಡಿ ಆರ್ಥಿಕ ಸಹಾಯ ನೀಡಿದರು.

ಈ ಸಂದರ್ಭದಲ್ಲಿ ತಾಲೂಕಾ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಜಿ.ನಾಗಾರಾಜ, ಡಿಸಿಸಿ ಉಪಾಧ್ಯಕ್ಷ ವಿ.ಎನ್.ನಾಯ್ಕ, ಪ್ರಮುಖರಾದ ಸಿ.ಆರ್.ನಾಯ್ಕ, ಎಚ್.ಕೆ.ಶಿವಾನಂದ, ಎಸ್.ಕೆ.ನಾಯ್ಕ ಕಡಕೇರಿ, ಜನಾರ್ಧನ ನಾಯ್ಕ, ಅಣ್ಣಪ್ಪ ಶಿರಳಗಿ, ಅಶೋಕ ಹಾರ್ಸಿಕಟ್ಟಾ, ಎನ್.ಟಿ.ನಾಯ್ಕ, ಬಾಬು ನಾಯ್ಕ ಕಡಕೇರಿ, ಮಂಜುನಾಥ ತ್ಯಾರ್ಸಿ, ವಿನಾಯಕ ಕೊಂಡ್ಲಿ ಮತ್ತಿತರರು ಉಪಸ್ಥಿತರಿದ್ದರು.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
